‘ಹಳ್ಳಿಗಳ ಕಡೆ ಹೋಗದಿದ್ದರೆ ನಿಮ್ಮ ಕರ್ಮ..’


Team Udayavani, Jan 15, 2019, 6:24 AM IST

karma.jpg

ಬೆಂಗಳೂರು: ಈ ಬೆಂಗಳೂರಿನಲ್ಲಿದ್ದು ಏನು ಮಾಡ್ತೀರಾ? ಇಲ್ಲಿ ಸೇವಿಸುವ ಆಹಾರ, ನೀರು ಎಲ್ಲವೂ ವಿಷ. ತಿಂಗಳಿಗೆ 2 ಲಕ್ಷ ದುಡಿದ್ರೂ ಬ್ಯಾಂಕ್‌ ಖಾತೆಯಲ್ಲಿ ಹಣ ಇರಲ್ಲ; ನೆಮ್ಮದಿಯೂ ಇರಲ್ಲ. ಹಳ್ಳಿಗೆ ಹೋಗಿ, ಅಲ್ಲಿ ಬರೀ 10 ಗುಂಟೆ ಜಮೀನು ಇಟ್ಕೊಂಡು, ಅದರಲ್ಲಿ ಮನೆಗೆ ಬೇಕಾದಷ್ಟೇ ತರಕಾರಿ-ಹಣ್ಣು ಬೆಳ್ಕೊಂಡು, ಹಿಡಿ ರಾಗಿಗಂಜಿ ಕುಡ್ಕೊಂಡು ಹಾಡು ಹೇಳ್ಕೊಂಡು ಹಾಯಾಗಿರಿ. ಊರು ಕಡೆಗೆ ಹೋಗದಿದ್ದರೆ ನಿಮ್ಮ ಕರ್ಮ…

– ಹಿಂದೊಮ್ಮೆ ‘ಮನೆಯಂಗಳದಲ್ಲಿ ಮಾತುಕತೆ’ಗೆ ಬಂದಿದ್ದ ಕೃಷಿ ಸಾಧಕ ನಾಡೋಜ ನಾರಾಯಣ ರೆಡ್ಡಿ ಹೀಗೆ ಕಿವಿಮಾತು ಹೇಳಿದ್ದರು. ಆ ಕಿವಿಮಾತಿನಲ್ಲಿ ಹಳ್ಳಿಯಿಂದ ಯುವಕರು ನಗರದತ್ತ ಮುಖಮಾಡುತ್ತಿರುವ ಬಗ್ಗೆ ರೆಡ್ಡಿ ಅವರಲ್ಲಿ ಸಿಟ್ಟು ಮತ್ತು ಕಳವಳ ಎರಡೂ ಇತ್ತು.

‘ಕೃಷಿ ಲಾಭದಾಯಕವಲ್ಲ. ಸಾಲದಿಂದ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಕೇಳಿದ್ರೆ, ನನಗೆ ನಗು ಮತ್ತು ಅಳು ಬರುತ್ತದೆ. ಕಸಬಿನ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಇದು ರೈತರಿಗೂ ಅನ್ವಯಿಸುತ್ತದೆ. ನಮ್ಮ ರೈತರು ಕೆಟ್ಟಿದ್ದು ಇಲ್ಲಿಯೇ. ಬೀಜ- ಗೊಬ್ಬರ ಕಂಪನಿಯವರು ತೋರಿಸುವ ಚಿತ್ರಗಳಿಗೆ ಮರುಳಾಗಿ, ಸಮರ್ಪಕ ಮಾಹಿತಿ ಇಲ್ಲದೆ ಬೆಳೆಯುತ್ತಾರೆ. ನಂತರ ಸಾಲ ತೀರಿಸಲಾಗದೆ ಪರದಾಡುತ್ತಾರೆ. 40 ವರ್ಷ ದಿಂದ ಕೃಷಿ ಮಾಡುತ್ತಿದ್ದೇನೆ. ಯಾವತ್ತೂ ಸಾಲ ಮಾಡಿಲ್ಲ. ಬದಲಿಗೆ 150 ಕೋಟಿ ರೂ.ಗಳ ಒಡೆಯನಾಗಿದ್ದೇನೆ’ ಎಂದು ಹೇಳುವ ಮೂಲಕ ಕೃಷಿಯಿಂದ ವಿಮುಖರಾದವರನ್ನು ಕರೆತರುವ ಪ್ರಯತ್ನವನ್ನೂ ಮಾಡಿದ್ದ ನಾರಾಯಣರೆಡ್ಡಿ ನೆನಪು ಮಾತ್ರ.

ನಾರಾಯಣರೆಡ್ಡಿ ಓದಿದ್ದು ಕೇವಲ 8ನೇ ತರಗತಿ. ಆದರೆ, ಅವರೊಂದು ಕೃಷಿ ವಿಶ್ವವಿದ್ಯಾಲಯವೇ ಆಗಿದ್ದರು. ಏಳೆಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ದೇಶ-ವಿದೇಶಗಳ ಕೃಷಿ ವಿದ್ಯಾರ್ಥಿಗಳಿಗೆ ಅವರು ‘ಮೇಷ್ಟ್ರು’. ಕೃಷಿ ಸಂಬಂಧಿಸಿದಂತೆ ನೂರಾರು ಉಪನ್ಯಾಸಗಳನ್ನು ನೀಡಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದರು.

ಅಂದಹಾಗೆ, ಕೃಷಿಗೂ ಮುನ್ನ ನಾರಾಯಣ ರೆಡ್ಡಿ ಹೋಟೆಲ್‌ನಲ್ಲಿ ಲೋಟ ತೊಳೆದಿದ್ದರು. ಟ್ರಾನ್ಸ್‌ಪೋರ್ಟ್‌ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿದ್ದರು. ಹೀಗೆ ಬದುಕು ಕಟ್ಟಿಕೊಳ್ಳುವುದರಲ್ಲೇ ತನ್ನ ಅರ್ಧ ಜೀವನ ಕಳೆದುಹೋಯ್ತು ಎಂದು ಹಲವು ವೇದಿಕೆಗಳಲ್ಲಿ ಅವರು ಹೇಳಿದ್ದರು. ಎಲ್ಲೆಡೆ ತಿರುಗಾಗಿ 8 ವರ್ಷಗಳ ನಂತರ ಹಳ್ಳಿಗೆ ಹಿಂತಿರುಗಿದ್ದರು. ತಂದೆಯ ಒಂದೂವರೆ ಎಕರೆ ಇದ್ದ ಜಮೀನಿನಲ್ಲಿ ದುಡಿದು ಸಂಗ್ರಹಿಸಿಟ್ಟ 45 ಸಾವಿರ ರೂ.ನಿಂದ ಜಮೀನು ಖರೀದಿಸಿ, ವ್ಯವಸಾಯದಲ್ಲಿ ತೊಡಗಿಕೊಂಡವರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.