ಬೆಂಗಳೂರಿನಲ್ಲಿ ರುಂಡ -ಮಧ್ಯಪ್ರದೇಶದಲ್ಲಿ ಮುಂಡ!
12 ದಿನಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣಕ್ಕೆ ಅಂತ್ಯ
Team Udayavani, Oct 16, 2020, 11:08 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾವಿರಾರು ಕಿಲೋಮೀಟರ್ಗಳ ಅಂತರದಲ್ಲಿ ಪುರುಷನೊಬ್ಬನ ಮುಂಡ ಹಾಗೂ ರುಂಡ ಪತ್ತೆಯಾಗಿ ಎರಡು ರಾಜ್ಯಗಳ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣವು ಈಗ ಒಂದು ಹಂತದ ಅಂತ್ಯ ಕಂಡಿದೆ. ಮುಂಡಕ್ಕೆ ಸಂಬಂಧಿಕರಿಂದ ಹಾಗೂ ರುಂಡಕ್ಕೆ ಪೊಲೀಸರಿಂದ ಅಂತ್ಯಸಂಸ್ಕಾರ ನೆರವೇರಿದೆ. ಈ ಸ್ಥಿತಿಯಲ್ಲಿ ಮೃತಪಟ್ಟವನನ್ನು ಮಧ್ಯಪ್ರದೇಶದ ಬೇತುಲ್ ನಗರದ ರವಿ ಮರ್ಕಾಮ್ (28) ಎಂದು ಪತ್ತೆಹಚ್ಚಲಾಗಿದೆ.
ಪ್ರಕರಣದ ವಿವರ
ಅ.4ರಂದು ಬೆಳಗ್ಗೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ ಪ್ರಸ್ ರೈಲನ್ನು ಸ್ವಚ್ಛ ಮಾಡುತ್ತಿದ್ದಾಗ ಎಂಜಿನ್ನ ಕೆಳಭಾಗದಲ್ಲಿ ವ್ಯಕ್ತಿಯ ತಲೆಭಾಗ ಪತ್ತೆಯಾಗಿತ್ತು. ಕೂಡಲೇ ರೈಲ್ವೇ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ ತಲೆಯನ್ನು ವಶಕ್ಕೆ ಪಡೆದು ಸಂರಕ್ಷಿಸಿದ್ದರು.
ಈ ಸಂಬಂಧ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು ದೇಶದ ಎಲ್ಲ ರೈಲ್ವೇ ಠಾಣೆಗಳಿಗೂ ಸಂದೇಶ ರವಾನಿಸಿದ್ದರು. ಅದಕ್ಕೆ ಮಧ್ಯಪ್ರದೇಶದ ಅಮ್ಲ ರೈಲ್ವೇ ಠಾಣೆಯ ಪೊಲೀಸರು ಪ್ರತಿಕ್ರಿಯಿಸಿ, ಅ. 3ರಂದು ಮಚ್ನಾ ರೈಲ್ವೇ ಸೇತುವೆ ಬಳಿ ವ್ಯಕ್ತಿಯೋರ್ವರ ಮುಂಡ ಪತ್ತೆಯಾಗಿದ್ದ ಬಗ್ಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಗರ ರೈಲ್ವೇ ಠಾಣೆಯ ಇಬ್ಬರು ಸಿಬಂದಿ ರುಂಡದ ಫೋಟೋ ಸಹಿತ ಮಧ್ಯಪ್ರದೇಶಕ್ಕೆ ತೆರಳಿದ್ದರು. ರುಂಡ ಹಾಗೂ ಮುಂಡದಲ್ಲಿ ಸಾಮ್ಯತೆ ಕಂಡು ಬಂದು, ಅದು ರವಿ ಮುರ್ಕಾಮ್ ಎಂಬಾತದ್ದೆಂದು ಗೊತ್ತಾಯಿತು. ಆತನ ಪೋಷಕರು ಕೂಡ ಇದನ್ನು ಖಚಿತಪಡಿಸಿದ್ದರು.
ಮುಂಡವನ್ನು ಅಂತ್ಯಸಂಸ್ಕಾರಕ್ಕಾಗಿ ಆತನ ಮನೆಯವರು ಪಡೆದುಕೊಂಡರು. ಆರ್ಥಿಕ ಸಂಕಷ್ಟದ ಕಾರಣ ರುಂಡ ಕೊಂಡೊಯ್ಯಲು ಬೆಂಗಳೂರಿಗೆ ಬರಲಿಲ್ಲ. ಅದರ ಅಂತ್ಯಸಂಸ್ಕಾರಕ್ಕಾಗಿ ಪೊಲೀಸರಿಗೆ ಆತನ ಕುಟುಂಬದವರು ಒಪ್ಪಿಗೆ ನೀಡಿದ್ದರು. ಶುಕ್ರವಾರ ಗುಡ್ಡದಹಳ್ಳಿಯ ಶ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ರೈಲ್ವೇಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ರವಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಪೋಷಕರು ತಿಳಿಸಿದ್ದು, ಸಾವಿನ ಕಾರಣ ತಿಳಿಯಲು ಅಮ್ಲಾ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ