Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

ಮೂರೂವರೆ ವರ್ಷಗಳ ಬೇಸಗೆಯಲ್ಲಿ 112 ಆನೆಗಳು ಸಾವು

Team Udayavani, May 23, 2024, 7:00 AM IST

Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

ದಾವಣಗೆರೆ: ಆನೆಗಳು ಹೆಚ್ಚಿರುವ ರಾಜ್ಯ ಎನ್ನಿಸಿಕೊಂಡಿರುವ ಕರುನಾಡಿನ ಅರಣ್ಯ ಪ್ರದೇಶಗಳಲ್ಲಿ ಬೇಸಗೆ ದಿನಗಳಲ್ಲಿ ಆನೆ ಗಳ ಸಾವಿನ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಪ್ರಸಕ್ತ ಬೇಸಗೆಯ ನಾಲ್ಕು ತಿಂಗಳುಗಳಲ್ಲಿ (ಜನವರಿ 14ರಿಂದ ಮೇ 16ರ ವರೆಗೆ) 22 ಆನೆಗಳು ಮೃತಪಟ್ಟಿವೆ!

ಮೂರು ಮರಿಯಾನೆ, ಆರು ವಯಸ್ಕ ಹೆಣ್ಣಾನೆ, 13 ವಯಸ್ಕ ಗಂಡು ಆನೆಗಳು ಬಿಸಿಲ ಬೇಗೆಗೆ ಅಸುನೀಗಿವೆ. ಇದಲ್ಲದೆ, ಎರಡು ಆನೆಗಳು ವಿದ್ಯುತ್‌ ಸ್ಪರ್ಶಕ್ಕೊಳಗಾಗಿ ಸಾವಿಗೀಡಾಗಿವೆ. ಚಾಮರಾಜನಗರ ಅರಣ್ಯ ವೃತ್ತ ವೊಂದರಲ್ಲೇ 13 ಆನೆಗಳು ಸಾವನ್ನಪ್ಪಿವೆ.

ಅರಣ್ಯ ಇಲಾಖೆಯ ಅಂಕಿಅಂಶ ಪ್ರಕಾರ, ಕಳೆದ ಮೂರೂವರೆ ವರ್ಷಗಳಲ್ಲಿ ಒಟ್ಟು 272 ಆನೆಗಳು ಮೃತಪಟ್ಟಿದ್ದು, ಇವುಗಳಲ್ಲಿ ಕಳೆದ ಜನವರಿಯಿಂದ ಮೇ ವರೆಗಿನ ತಾಪಮಾನ ಹೆಚ್ಚಳದ ದಿನಗಳಲ್ಲಿ 22 ಆನೆಗಳು ಸಾವಿಗೀಡಾಗಿವೆ. ಇವುಗಳಲ್ಲಿ ಬಹುತೇಕ ಆನೆಗಳು ಸಹಜ ಸಾವು ಕಂಡಿದ್ದರೂ, ಹವಾಮಾನ ವೈಪರೀತ್ಯದಿಂದ ಅರಣ್ಯದಲ್ಲಿ ಸಮರ್ಪಕ ನೀರು, ಆಹಾರ ಸಿಗದೇ ಆರೋಗ್ಯದಲ್ಲಿ ಏರುಪೇರಾಗಿಯೇ ಬಹಳಷ್ಟು ಆನೆಗಳ ಕೊನೆಯುಸಿರೆಳೆದಿವೆ.

ಸರಾಸರಿ 25-30 ಸಾವು
2021ನೇ ಸಾಲಿನಲ್ಲಿ ಒಟ್ಟು 82 ಆನೆಗಳು ಮೃತಪಟ್ಟಿದ್ದು, ಇವುಗಳಲ್ಲಿ ಜನವರಿಯಿಂದ ಮೇ ವರೆಗಿನ ತಾಪಮಾನ ಹೆಚ್ಚಳದ ದಿನಗಳಲ್ಲಿ 30 ಆನೆಗಳು ಸಾವಿಗೀಡಾಗಿವೆ. 2022ನೇ ಸಾಲಿನಲ್ಲಿ ಒಟ್ಟು 72 ಆನೆಗಳು ಸಾವು ಕಂಡಿದ್ದು, ಇವುಗಳಲ್ಲಿ ಜನವರಿಯಿಂದ ಮೇ ವರೆಗಿನ ಅವಧಿಯಲ್ಲಿ 24 ಆನೆಗಳು ಮೃತಪಟ್ಟಿವೆ. 2023ನೇ ಸಾಲಿನಲ್ಲಿ ಒಟ್ಟು 96 ಆನೆಗಳು ಮೃತಪಟ್ಟಿದ್ದು, ಜನವರಿಯಿಂದ ಮೇವರೆಗೆ 36 ಆನೆಗಳು ಸಹಜ ಸಾವು ಕಂಡಿವೆ. ಮೂರು ವರ್ಷಗಳ ಅಂಕಿಅಂಶವನ್ನು ಗಮನಿಸಿದರೆ ಬೇಸಗೆ ದಿನಗಳಲ್ಲಿ ಸರಾಸರಿ ಪ್ರತಿ ವರ್ಷ 25-30 ಆನೆಗಳ ಸಾವು ಸಂಭವಿಸುತ್ತಿವೆ.

ಒಟ್ಟಾರೆ ಆನೆಗಳ ಸಾವು ತಡೆದು ಗಜ ಸಂತತಿ ಉಳಿಸಲು ಸರಕಾರ, ಅರಣ್ಯ ಇಲಾಖೆ ವಿಶೇಷ ಗಮನ ಹರಿಸಬೇಕಿದೆ. ಅರಣ್ಯದಲ್ಲಿ ಅವುಗಳ ವಾಸಕ್ಕೆ ಸೂಕ್ತ ನೀರು, ಆಹಾರ, ಗಿಡ-ಮರಗಳ ಬೆಳೆಸುವಿಕೆ ಮುಂತಾದ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಅಣಿಯಾಗಬೇಕು ಎಂಬುದು ವನ್ಯಜೀವಿ ಪ್ರಿಯರ ಆಗ್ರಹವಾಗಿದೆ.

ಆನೆ ಮರಣ ವಿವರ
ಪ್ರಸಕ್ತ ವರ್ಷ ಜನವರಿಯಿಂದ ಮೇ ವರೆಗೆ ಚಾಮರಾಜನಗರ ಅರಣ್ಯ ವೃತ್ತದಲ್ಲಿ ಒಟ್ಟು 13 ಆನೆಗಳು ಸಾವಿಗೀಡಾಗಿವೆ. ಇವುಗಳಲ್ಲಿ ಮೂರು ಮರಿಯಾನೆ, ಮೂರು ಹೆಣ್ಣು ಆನೆ ಹಾಗೂ ಏಳು ಗಂಡು ವಯಸ್ಕ ಆನೆಗಳು. ಉಳಿದಂತೆ ಚಿಕ್ಕಮಗಳೂರು ವೃತ್ತದ ಚಿಕ್ಕಮಗಳೂರು ಮತ್ತು ಭದ್ರಾ ಪ್ರದೇಶದಲ್ಲಿ ತಲಾ ಒಂದು, ಕೊಡಗು ಅರಣ್ಯ ವೃತ್ತದ ನಾಗರಹೊಳೆಯಲ್ಲಿ ಮೂರು, ಬೆಂಗಳೂರು ವೃತ್ತದ ರಾಮನಗರ, ಕೆನರಾ ವೃತ್ತದ ಯಲ್ಲಾಪುರ, ಮಂಗಳೂರು ವೃತ್ತದ ಮಂಗಳೂರು, ಮೈಸೂರು ವೃತ್ತದ ಬಂಡೀಪುರದ ಹುಲಿ ಮೀಸಲು ಪ್ರದೇಶದಲ್ಲಿ ತಲಾ ಒಂದು ಆನೆಗಳು ಮೃತಪಟ್ಟಿವೆ.

ಪರ್ಯಾಯ ಕ್ರಮವಾಗಲಿ
ಇತ್ತೀಚೆಗೆ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಬೇಸಗೆಯ ಬಿಸಿಲಿನ ಪ್ರಖರತೆಯ ಪರಿಣಾಮ ಎಂಬಂತೆ ಬಿಸಿಲಿನ ದಿನಗಳಲ್ಲಿ ಆನೆಗಳ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಸಾವು ತಡೆಯಲು ಅರಣ್ಯದಲ್ಲಿ ಅವುಗಳಿಗೆ ಬೇಕಾದ ಅಗತ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರಕಾರ ಹಾಗೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು.
– ಗಿರೀಶ್‌ ದೇವರಮನೆ, ಅಧ್ಯಕ್ಷರು, ಪರಿಸರ ಸಂರಕ್ಷಣ ವೇದಿಕೆ

 -ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

1-sadadasdsd

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.