ಚೀನಕ್ಕೆ ಕಾದಿದೆ ಚಳಿಗಾಲದ ಶಾಕ್; ವಿಂಟರ್ ಕಿಟ್, ಆಹಾರ ದಾಸ್ತಾನು ಶುರು
Team Udayavani, Aug 3, 2020, 8:35 AM IST
ಲಡಾಖ್: ಚಳಿಗಾಲದಲ್ಲಿ ವಾತಾವರಣದಂತೆ ಹಿಮಚ್ಛಾದಿತ ಗಡಿಗಳೂ ತಣ್ಣಗಿರುತ್ತವೆ. ದಟ್ಟ ಹಿಮದ ನಡುವೆ ಶತ್ರು ಸೈನಿಕರ ಮುನ್ನುಗ್ಗುವಿಕೆ ತೀರಾ ಕಡಿಮೆ ಇರುವುದರಿಂದ, ಬೆಟ್ಟಗಳ ಮೇಲೆ ಕಾವಲಿರುವ ಸೈನಿಕರು ಕೆಳಗಿಳಿಯುವುದು, ಹಿಮಕಣಿವೆಗಳಿಂದ ಹಿಂದೆ ಸರಿಯುವುದು ಸಹಜ ಪ್ರಕ್ರಿಯೆ. ಆದರೆ, ಚೀನ ಪ್ರತಿವರ್ಷದ ಈ ಗಡಿ ರಕ್ಷಣೆಯ ನಂಬಿಕೆಯನ್ನೇ ಬುಡ ಮೇಲು ಮಾಡುತ್ತಿದೆ.
ಚಳಿಗಾಲದ ಋತುವಿನಲ್ಲಿ ಚೀನ ದಾಳಿಗೈಯ್ಯುವ ಸಂಭವವಿದೆ ಎಂಬ ಮುನ್ಸೂಚನೆ ಸಿಗುತ್ತಿದ್ದಂತೆಯೇ ಭಾರತ ಹೈಅಲರ್ಟ್ ಆಗಿದೆ. ಚಳಿಗಾಲಕ್ಕೆ ಅಗತ್ಯವಾದ ಕಿಟ್, ಯುದ್ಧ ಸಾಮಗ್ರಿಗಳ ಖರೀದಿ, ದಾಸ್ತಾನು ಈಗಲೇ ಶುರುವಾಗಿದೆ ಎಂದು ಸೇನೆಯ ಮೂಲಗಳು ಖಚಿತಪಡಿಸಿವೆ.
ಏನೇನು ಸಂಗ್ರಹ?: ಆಹಾರ ಸಾಮಗ್ರಿ, ಸೀಮೆಎಣ್ಣೆ, ಎಫ್ಒಎಲ್ಗಳ (ಇಂಧನ, ತೈಲ, ಲೂಬ್ರಿಕೆಂಟ್) ದಾಸ್ತಾನು ಉತ್ತಮವಾಗಿ ಸಾಗುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ದಪ್ಪ ಜಾಕೆಟ್ಗಳು, ಸದೃಢ ಬೂಟ್ಗಳನ್ನು ಹೆಚ್ಚೆಚ್ಚು ಖರೀದಿಸಲಾಗುತ್ತಿದೆ. ಸೇನಾ ಕಿಟ್ಗಳನ್ನು ಪೂರೈಸುವ 4 ವಿದೇಶಿ ಮಾರಾಟ ಸಂಸ್ಥೆಗಳೊಂದಿಗೆ ಖರೀದಿ ಒಪ್ಪಂದಗಳು ನಡೆಯುತ್ತಿವೆ. ನವೆಂಬರ್ ವೇಳೆಗೆ ಖರೀದಿ ಪೂರ್ಣಗೊಳ್ಳಲಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲೆನೋವಾದ ಬಿಎಲ್ಎ
ಬಲೂಚಿಸ್ಥಾನ್ ಲಿಬರೇಶನ್ ಆರ್ಮಿಯ (ಬಿಎಲ್ಎ) ಹೋರಾಟ ಹತ್ತಿಕ್ಕಲು ಚೀನ ಶತ ಪ್ರಯತ್ನ ನಡೆಸುತ್ತಿದೆ. ಬಿಎಲ್ಎಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮುಂದೆ ಚೀನ ಪಟ್ಟುಹಿಡಿದಿದೆ. ಬಲೂಚಿಸ್ಥಾನ್ ಮೂಲಕ ಹಾದು ಹೋಗುವ ಚೀನ- ಪಾಕಿಸ್ಥಾನ್ ಆರ್ಥಿಕ ಕಾರಿಡಾರನ್ನು ಬಲವಾಗಿ ವಿರೋಧಿಸುತ್ತಿರುವ ಬಿಎಲ್ಎ, ಕ್ಸಿ ಜಿನ್ಪಿಂಗ್ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.
5ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ಗಳ ಸಭೆ
ಭಾರತ- ಚೀನ ನಡುವೆ 5ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ಗಳ ಸಭೆ ರವಿವಾರ ನಡೆಯಿತು. ಚೀನ ಗಡಿ ಭಾಗದ ಮೊಲ್ಡೊದಲ್ಲಿ ನಡೆದ ಸಭೆಯಲ್ಲಿ ಪ್ಯಾಂಗಾಂಗ್ ಸರೋವರದ ದಂಡೆಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಪಿ-17, ಪ್ಯಾಂಗಾಂಗ್ ವಲಯದ ಉತ್ತರ ದಂಡೆಯಿಂದ ಚೀನ ಹಿಂದೆ ಸರಿಯಬೇಕು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು