ಅಡುಗೆ ರುಚಿ ಹೆಚ್ಚಿಸುವ ಚಾಪ್ಸ್ಟಿಕ್ಸ್; ಉಪ್ಪು ಕಡಿಮೆ ತಿನ್ನುವವರಿಗೆ ವರದಾನ ಈ ಸಲಕರಣೆ
ಸೋಡಿಯಂ ಶಕ್ತಿಯನ್ನು ಒಂದೂವರೆಪಟ್ಟು ಹೆಚ್ಚಿಸುವ ಸಾಮಗ್ರಿ
Team Udayavani, Apr 21, 2022, 8:00 AM IST
ಟೋಕಿಯೊ: ಅಡುಗೆಗೆ ಉಪ್ಪು ಕಡಿಮೆಯಿದ್ದರೂ ಅದನ್ನು ಒಂದೂವರೆಪಟ್ಟು ರುಚಿಕರಗೊಳಿಸುವಂಥ ಚಾಪ್ಸ್ಟಿಕ್ಸ್ಗಳನ್ನು ಜಪಾನ್ನ ಪೇಯಗಳ ತಯಾರಿಕಾ ಕಂಪನಿ ಕಿರಿನ್ ಹೋಲ್ಡಿಂಗ್ಸ್ ಕೋ. ತಯಾರಿಸಿದೆ.
ಜಪಾನ್ನ ಮೈಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೊಮೈ ಮಿಯಾಶಿತಾ ಅವರ ಸಂಶೋಧನೆಯನ್ನು ಈ ಕಂಪನಿಯು ಪರಿಕರಗಳ ರೂಪದಲ್ಲಿ ಹೊರತಂದಿದೆ. ರಕ್ತದೊತ್ತಡ ಇರುವವರಿಗೆ, ಉಪ್ಪು ಕಡಿಮೆ ತಿನ್ನಲೇಬೇಕಾದ ಪರಿಸ್ಥಿತಿಯಿರುವವರಿಗೆ ಇದು ವರದಾನ ಎಂದು ಹೇಳಲಾಗಿದೆ.
ಯಾರಿಗೆ ಇದರ ಉಪಯೋಗ?
ರಕ್ತದೊತ್ತಡ ಇರುವವರಿಗೆ ಉಪ್ಪು ತಿನ್ನಬಾರದೆಂಬುದು ವೈದ್ಯರ ಸಲಹೆ. ಆದರೆ, ಉಪ್ಪಿಗಿಂತ ರುಚಿ ಬೇರೆಯಿಲ್ಲ ಎಂಬ ನಾಣ್ಣುಡಿಗೆ ಅಂಟಿಕೊಂಡಿರುವವರಿಗೆ ಸಪ್ಪೆ ತಿನ್ನುವುದು ಬಲು ಕಷ್ಟ. ಹೋಗಲಿ ಅಂತ ಉಪ್ಪು ಸ್ವಲ್ಪ ಹಾಕಿದರೂ ಅದು ನಾಲಿಗೆಗೆ ರುಚಿಸದು. ಈ ಉಪ್ಪಿನ ಕೊರತೆಯನ್ನು ಈ ಚಾಪ್ಸ್ಟಿಕ್ಗಳು ತುಂಬಲಿವೆ.
ಇದನ್ನೂ ಓದಿ:ತೋಕೂರು : 800 ವರ್ಷಗಳ ಇತಿಹಾಸವಿರುವ ದೇವಳದ ಗರ್ಭ ಗುಡಿಯಲ್ಲಿ ಚಿನ್ನದ ಜೋಡಿ ಮಯೂರ ಪತ್ತೆ
ಇದು ಕೆಲಸ ಮಾಡುವ ಬಗೆ ಹೇಗೆ?
ಇದು ಬ್ಯಾಟರಿ ವಿದ್ಯುತ್ ಚಾಲಿತ ಸಲಕರಣೆ. ಈ ಚಾಪ್ಸ್ಟಿಕ್ಸ್ಗಳಿಂದ ಪುಟ್ಟದೊಂದು ವೈರ್ ಹೊರಬಂದಿದ್ದು ಅದನ್ನು ನಿಮ್ಮ ಬಲಗೈಯ್ಯಿಗೆ ಅಳವಡಿಸಲಾಗಿರುತ್ತದೆ. ಈ ಚಾಪ್ಸ್ಟಿಕ್ಗಳನ್ನು ಆಹಾರದಲ್ಲಿ ಅದ್ದಿಕೊಂಡು ಆಹಾರ ಸೇವಿಸುವಾಗ, ಆಹಾರದಲ್ಲಿರುವ ಅಲ್ಪಪ್ರಮಾಣದ ಉಪ್ಪಿನ ಅಂಶವನ್ನು, ಅಂದರೆ, ಸೋಡಿಯಂ ಧಾತುಗಳನ್ನು ಹೀರಿಕೊಂಡು, ಅದರ ಶಕ್ತಿಯನ್ನು ಒಂದೂವರೆ ಪಟ್ಟು ಹೆಚ್ಚಿಸಿ, ನಾಲಿಗೆಗೆ ಉಪ್ಪಿನ ರುಚಿಯನ್ನು ಗ್ರಹಿಸುವ ಜಾಗಕ್ಕೆ ತಲುಪಿಸುತ್ತದೆ. ಅದರಿಂದ ಬಾಯಿಯಲ್ಲಿ ಇಟ್ಟುಕೊಂಡ ಆಹಾರದಲ್ಲಿ ಉಪ್ಪಿನ ಪ್ರಮಾಣ ಸರಿಯಾಗಿದೆ ಎಂದು ಎನಿಸುತ್ತದೆ. ಇದರಿಂದ ಊಟ ಸಲೀಸಾಗುತ್ತದೆ ಎನ್ನುತ್ತಾರೆ ಇದರ ತಯಾರಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Iran; ರೈಸಿ ಅಂತ್ಯಕ್ರಿಯೆಯಲ್ಲಿ ಹಮಾಸ್, ಹೌತಿ, ತಾಲಿಬಾನ್ ನಾಯಕರು ಭಾಗಿ
Palestine ‘ರಾಷ್ಟ್ರ’: ಐರ್ಲೆಂಡ್, ನಾರ್ವೆ, ಸ್ಪೇನ್ ನಿಂದ ಇಸ್ರೇಲ್ ರಾಯಭಾರಿ ಹಿಂದಕ್ಕೆ
West Bank ಮೇಲೆ ಇಸ್ರೇಲ್ ದಾಳಿ; ವೈದ್ಯ ಸೇರಿ ಕನಿಷ್ಠ 7 ಮೃತ್ಯು
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು
U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್ ಪ್ರಧಾನಿ ಸುನಕ್ ಚಿಂತನೆ!
MUST WATCH
ಹೊಸ ಸೇರ್ಪಡೆ
Court; ನಿರಂತರ ರೇಪ್ ಮಾಡಿ ಮಲ ಮಗಳನ್ನು ಗರ್ಭಿಣಿಯಾಗಿಸಿದವನಿಗೆ ಜೀವಾವಧಿ ಶಿಕ್ಷೆ
Koppa: ಪಾಕ್ ಪರ ಪೋಸ್ಟ್; ಯುವಕನ ವಿರುದ್ಧ ಪ್ರಕರಣ ದಾಖಲು
Air India; ಕೊನೆಗೂ ಸಿಬಂದಿಗೆ ವೇತನ ಹೆಚ್ಚಳ; ಪೈಲಟ್ಗಳಿಗೆ ಕಾರ್ಯಕ್ಷಮತೆಯ ಗುರಿ
Shimoga: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಯುವಕರು ಸಾವು
Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ