ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?
ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡೆನ್ ನಡುವೆ ನಡೆದ ಚರ್ಚೆಯು ಇದುವರೆಗಿನ ಅತ್ಯಂತ ಕಳಪೆ ಚರ್ಚೆ ಎಂದು ಕರೆಯಿಸಿಕೊಂಡಿದೆ.
Team Udayavani, Oct 23, 2020, 11:52 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕೊನೆಯ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದು, ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ಅವರ ಹವಾಮಾನ ಬದಲಾವಣೆಯ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ. ಭಾರತ, ರಷ್ಯಾ ಮತ್ತು ಚೀನಾದ ಹವಾಮಾನ ತುಂಬಾ ಕಲುಷಿತಗೊಂಡಿರುವುದಾಗಿ ಟ್ರಂಪ್ ಅಕ್ಟೋಬರ್ 22ರ ರಾತ್ರಿ ನಡೆದ ಚರ್ಚೆಯಲ್ಲಿ ಆರೋಪಿಸಿದ್ದಾರೆ.
ಅಮೆರಿಕದಲ್ಲಿ ಚುನಾವಣೆಗೂ ಮುನ್ನ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ. ನಾಲ್ಕರಿಂದ ಐದು ವಿಷಯಗಳನ್ನು ಆಯ್ಕೆ ಮಾಡಿ ಅದರ ಮೇಲೆ ಅಭ್ಯರ್ಥಿಗಳಿಬ್ಬರೂ ತಮ್ಮ ವಾದ ಮಂಡಿಸಬೇಕು. ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡೆನ್ ನಡುವೆ ನಡೆದ ಚರ್ಚೆಯು ಇದುವರೆಗಿನ ಅತ್ಯಂತ ಕಳಪೆ ಚರ್ಚೆ ಎಂದು ಕರೆಯಿಸಿಕೊಂಡಿದೆ.
ಅಕ್ಟೋಬರ್ 22ರ ರಾತ್ರಿ 9ಗಂಟೆಗೆ (ಭಾರತೀಯ ಕಾಲಮಾನ:ಶುಕ್ರವಾರ ಬೆಳಗ್ಗೆ 7.30ಕ್ಕೆ) ಟ್ರಂಪ್ ಮತ್ತು ಬೈಡೆನ್ ನಡುವೆ ಕೊನೆಯ ಅಧ್ಯಕ್ಷೀಯ ಚರ್ಚೆ ನಡೆಯುತ್ತಿದ್ದು, ಈ ಚರ್ಚೆಯನ್ನು ಎನ್ ಬಿಸಿಯ ವರದಿಗಾರ್ತಿ ಕ್ರಿಸ್ಟನ್ ವೆಲ್ಕರ್ ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ:ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?
ಭಾರತದ ಹವಾಮಾನದ ವಿರುದ್ಧ ಟ್ರಂಪ್ ಟೀಕೆ:
ಎರಡನೇ ಹಾಗೂ ಕೊನೆಯ ಸುತ್ತಿನ ಅಧ್ಯಕ್ಷೀಯ ಚರ್ಚೆಯಲ್ಲಿ, ಹವಾಮಾನ ವೈಪರೀತ್ಯದ ಕುರಿತು ಕೈಗೊಂಡ ಕ್ರಮದಲ್ಲಿ ಅಮೆರಿಕಕ್ಕೆ ಅನ್ಯಾಯವಾಗಿದೆ ಎಂಬ ಟೀಕೆಯನ್ನು ಪುನರ್ ವಿಮರ್ಶಿಸಬೇಕು ಎಂದ ಟೊನಾಲ್ಡ್ ಟ್ರಂಪ್, ಚೀನಾ ದೇಶವನ್ನು ನೋಡಿ ಅದರ ಹವಾಮಾನ ಹೊಲಸಾಗಿದೆ, ರಷ್ಯಾ, ಭಾರತದ ಹವಾಮಾನ ಕೂಡಾ ಕಲುಷಿತಗೊಂಡಿದೆ ಎಂದು ಅಮೆರಿಕದ ನ್ಯಾಶ್ ವಿಲ್ಲೆಯಲ್ಲಿ ಆಯೋಜಿಸಿದ್ದ ಚರ್ಚೆಯಲ್ಲಿ ಆರೋಪಿಸಿದರು.
ಪ್ರಮುಖವಾದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಭಾರತ, ಚೀನಾ ಮತ್ತು ರಷ್ಯಾ ಹವಾಮಾನ ವೈಪರೀತ್ಯದ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಪ್ಯಾರಿಸ್ ಒಪ್ಪಂದದಿಂದ ಚೀನಾ ಮತ್ತು ಭಾರತದಂತಹ ದೇಶಗಳು ಹೆಚ್ಚಿನ ಲಾಭ ಪಡೆಯುತ್ತಿದೆ ಎಂದು ಟ್ರಂಪ್ ನಿರಂತರವಾಗಿ ವಾದ ಮಂಡಿಸುತ್ತಿದ್ದಾರೆ. ಕಳೆದ ವಾರ ಉತ್ತರ ಕರೋಲಿನಾದಲ್ಲಿ ನಡೆದ ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತ, ಜಾಗತಿಕ ವಾಯುಮಾಲಿನ್ಯಕ್ಕೆ ಚೀನಾ, ರಷ್ಯಾ ಮತ್ತು ಭಾರತದಂತಹ ದೇಶಗಳ ಕೊಡುಗೆ ಹೆಚ್ಚಿದೆ ಎಂದು ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು