ಹಾಂಕಾಂಗ್ ಜನರ ಪ್ರಜಾಪ್ರಭುತ್ವದ ಕೂಗಿಗೆ ಮನ್ನಣೆ ನೀಡಿದ ಜಿ7

ಜಿ7 ರಾಷ್ಟ್ರಗಳ ವಿರುದ್ಧ ಚೀನ ಕೆಂಡಾಮಂಡಲ

Team Udayavani, Aug 29, 2019, 6:30 AM IST

hang-kong-2

ಬೀಜಿಂಗ್: ಚೀನದ ಪ್ರಾಬಲ್ಯದಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಹಾಂಕಾಂಗ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ಹಿಂಸೆಯ ರೂಪವನ್ನು ಪಡೆದುಕೊಂಡಿದೆ. ಹಾಂಕಾಂಗ್ ನ ಪ್ರತಿ ರಸ್ತೆಯಲ್ಲಿ ಚೀನ ವಿರುದ್ಧ ಆಕ್ರೋಶ ಬಲವಾಗಿ ಕೇಳಿಬರುತ್ತಿದೆ. ಆದರೆ ಚೀನ ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸುಮ್ಮನಾಗಿದೆ. ಇದೀಗ ಜಿ7 ರಾಷ್ಟ್ರಗಳು ಒಕ್ಕೊರಲಿನಿಂದ ಹಾಂಕಾಂಗ್ ನ ಪ್ರತಿಭಟನೆಯನ್ನು ಬೆಂಬಲಿಸಿ ನೀಡಿದ ಹೇಳಿಕೆ ಚೀನದ ಕಣ್ಣನ್ನು ಕೆಂಪಗಾಗಿಸಿದೆ. ಹಾಂಕಾಂಗ್ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭನೆ ನಡೆಯುತ್ತಿದ್ದ ಜಿ7 ಆ ಕಾರಣಕ್ಕೆ ಬೆಂಬಲಿಸಿದೆ.

ಪ್ರತಿಭಟನೆ ಯಾಕೆ ?
ಆರೋಪಿಗಳನ್ನು ಮತ್ತು ಸಂಶಯಾಸ್ಪದ ವ್ಯಕ್ತಿಗಳನ್ನು ಚೀನಕ್ಕೆ ಗಡಿಪಾರು ಕುರಿತಾದ ವಿವಾದಾತ್ಮಕ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾಗಿರುವ ಹಾಂಕಾಂಗ್ ಸರಕಾರದ ವಿರುದ್ಧ ಅಲ್ಲಿನ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಂಕಾಂಗ್ ನ ಯಾವ ರಸ್ತೆಯಲ್ಲಿ ನೋಡಿದರೂ ಮೈಲುದ್ದದ ಜನರ ಸಾಲುಗಳೇ ಕಾಣಸಿಗುತ್ತಿದೆ. 3 ತಿಂಗಳುಗಳಿಂದ ಪ್ರಕ್ಷುಬ್ದಗೊಂಡ ಪರಿಸ್ಥಿತಿ ಅಲ್ಲಿನ ಬೀದಿಗಳಲ್ಲಿ ಸೃಷ್ಟಿಯಾಗಿದೆ.

ಏನಿದು ವಿಧೇಯಕ ವಿವಾದ ?
1997ರವರೆಗೆ ಬ್ರಿಟಿಷ್ ಕಾಲೊನಿ ಎಂದು ಕರೆಯಲಾಗುತ್ತಿದ್ದ ಹಾಂಕಾಂಗ್ ನಗರ ಬಳಿಕ ಚೀನದೊಂದಿಗೆ ಗುರುತಿಸಿಕೊಂಡಿತ್ತು. ಇಲ್ಲಿ ರಾಷ್ಟ್ರ ಒಂದಾಗಿದ್ದರೂ ಎರಡು ವ್ಯವಸ್ಥೆ ಎಂಬ ಆಡಳಿತ ಸೂತ್ರದನ್ವಯ ಎಲ್ಲ ವಿಧದಲ್ಲಿ ಸ್ವಾಯತ್ತತೆಯಿರುವ ಪ್ರಾಂತ್ಯ ಎಂಬ ಸ್ಥಾನಮಾನವನ್ನು ಹಾಂಕಾಂಗ್ ಗೆ ನೀಡಲಾಗಿತ್ತು.

ಕಾನೂನು ಏನು ಹೇಳುತ್ತೆ?
ಇಷ್ಟಕ್ಕೂ ವಿವಾದಕ್ಕೆ ಕಾರಣವಾಗಿರುವ ಅಲ್ಲಿನ ಒಂದು ಕಾನೂನು. “ಫುಜಿಟಿವ್ ಅಫೆಂಡರ್ಸ್ ಆ್ಯಂಡ್ ಮ್ಯೂಚುಯೆಲ್ ಲೀಗಲ್ ಅಸಿಸ್ಟೆನ್ಸ್ ಇನ್ ಕ್ರಿಮಿನಲ್ ಮ್ಯಾಟರ್ಸ್ ಲೆಜಿಸ್ಲೇಷನ್’ ಎಂಬ ತಿದ್ದುಪಡಿ ವಿಧೇಯಕ ಹಾಂಕಾಂಗ್ ಜನರಲ್ಲಿ ಭಯ ಮೂಡಿಸಿದೆ. ಇದರನ್ವಯ ಇಲ್ಲಿನ ಆರೋಪಿಗಳು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಹಾಕಿಕೊಂಡರೆ ಇಂತಹವರ ವಿಚಾರಣೆಯನ್ನು ಚೀನದಲ್ಲಿ ನಡೆಸಲಾಗುತ್ತದೆ. ಈ ಒಂದು ಕಾನೂನಿನ ಅಂಶ ಹಾಂಕಾಂಗ್ ನ ಕಾನೂನಿನ ಸ್ವಾಯತ್ತತೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂಬುದು ಅಲ್ಲಿನ ಜನರ ಆತಂಕ.

ಅಷ್ಟಕ್ಕೂ ಕಾರಣ ಆ ಒಂದು ಕೊಲೆ
ಹಾಂಕಾಂಗ್ ನಿವಾಸಿಯೊಬ್ಬ ಗರ್ಭಿಣಿಯಾಗಿದ್ದ ಸ್ನೇಹಿತೆಯನ್ನು ತೈವಾನ್ ನಲ್ಲಿ ಕೊಲೆಮಾಡಿದ್ದ. ಈ ಆರೋಪಿಯನ್ನು ಬಂಧಿಸಿ ಕೊಂಡೊಯ್ಯಲು ಚೀನ ಪೊಲೀಸರು ಬೇಡಿಕೆ ಇಟ್ಟಾಗ ಹಾಂಕಾಂಗ್ ತಿರಸ್ಕರಿಸಿತು. ಈ ಹಕ್ಕನ್ನು ಹಾಂಕಾಂಗ್ ಬಳಸಿಕೊಂಡಿತು. ಈ ಒಂದು ಕಾನೂನಿನ ರಕ್ಷಣೆ ಪಡೆಯುತ್ತಿರುವ ಹಾಂಕಾಂಗ್ ಅನ್ನು ತನ್ನ ಸುಪರ್ಧಿಗೆ ಒಳಪಡಿಸಲು ಚೀನ ಆ ಕಾನೂನಿನ ಮೊರೆ ಹೋಗಿದೆ. ಹಾಂಕಾಂಗ್ ನ ವಿಪಕ್ಷ ಪ್ರತಿಭಟನೆಗೆ ಬೆಂಬಲಿಸಿದ್ದಾರೆ.

ಟಾಪ್ ನ್ಯೂಸ್

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.