ಏನಾಗಲಿದೆ ಒಲಿ ಭವಿಷ್ಯ?
Team Udayavani, Jan 26, 2021, 6:39 AM IST
ಕಳೆದೊಂದು ವರ್ಷದಿಂದ ಚೀನಾದ ತಾಳಕ್ಕೆ ಕುಣಿದು ಭಾರತಕ್ಕೆ ಕಿರಿಕಿರಿಯುಂಟುಮಾಡುತ್ತಾ ಬಂದಿದ್ದ ನೇಪಾಳದ ಕೆ.ಪಿ.ಒಲಿ ಭವಿಷ್ಯವೀಗ ಅತಂತ್ರಕ್ಕೆ ಸಿಲುಕಿದೆ. ಪ್ರಚಂಡ ನೇತೃತ್ವದ ಬಣವೀಗ ಕೆ.ಪಿ. ಶರ್ಮ ಒಲಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಿದೆ. ಇದರಿಂದಾಗಿ ನೇಪಾಳದ ರಾಜಕೀಯದಲ್ಲಿ ಆಗಬಹುದಾದ ಪರಿಣಾಮವೇನು?
ಚೀನ ಪರ ವಾಲಿಕೆ, ಅಧಿಕಾರದಾಹ :
ಒಂದೆಡೆ ಚೀನ ಪರ ವಾಲುತ್ತಾ, ಭಾರತದ ವಿರೋಧ ಕಟ್ಟುಕೊಳ್ಳುತ್ತಲೇ ಬಂದ ಓಲಿ, ಇನ್ನೊಂದೆಡೆ ಪಕ್ಷದಲ್ಲೂ ವೈರತ್ವ ಕಟ್ಟಿಕೊಳ್ಳುತ್ತಾ ಸಾಗಿದರು. 2017ರಲ್ಲಿ ಪ್ರಚಂಡ ನೇತೃತ್ವದ ನೇಪಾಲ ಕಮ್ಯುನಿಸ್ಟ್ ಪಾರ್ಟಿ(ಮಾವೋವಾದಿ)ಯೊಂದಿಗೆ ತಮ್ಮ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಲ (ಮಾರ್ಕ್ಸಿಸ್ಟ್ ಲೆನಿನಿಸ್ಟ್) ಪಕ್ಷವನ್ನು ಬೆಸೆದು ಏಕೀಕೃತ ಎನ್ಸಿಪಿ ರಚಿಸಿ ಅಧಿಕಾರಕ್ಕೇರಿದ್ದ ಒಲಿ, ಮೈತ್ರಿಗೂ ಮುನ್ನ ಪ್ರಚಂಡ ಅವರಿಗೆ ನೀಡಿದ್ದ ಅಧಿಕಾರ ಹಸ್ತಾಂತರದ ಭರವಸೆಯನ್ನೂ ಈಡೇರಿಸಲಿಲ್ಲ. ಅಲ್ಲದೇ ಅವರು ಅತಿಯಾಗಿ ಸರ್ವಾಧಿಕಾರಿ ಧೋರಣೆ ತಾಳುತ್ತಿರುವುದು ಮಾಜಿ ಪ್ರಧಾನಿ ಪ್ರಚಂಡ ಅವರಿಗೂ ನುಂಗಲಾರದ ತುತ್ತಾಗಿ ಬದಲಾಗಿತ್ತು.
ಮುಂದೇನಾಗಬಹುದು? :
ಒಲಿ ಈಗ ಮತ್ತೆ ತಮ್ಮ ಪಕ್ಷವನ್ನು ಪುನರುಜ್ಜೀವಗೊಳಿಸಲು ಪ್ರಯತ್ನಿಸಬಹುದು. ಆದರೆ ಹಿಂದಿನ ಬಾರಿಯಂತೆ, ಈಗ ಅವರಿಗೆ ಚೀನದ ಬೆಂಬಲ ಸಿಗುವುದೋ ಇಲ್ಲವೋ ಎನ್ನುವ ಅನುಮಾನಗಳೆದ್ದಿವೆ. ಏಕೆಂದರೆ ವರ್ಷದಿಂದ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಬದಲಾಗಿದ್ದ ಅವರು, ಕೆಲವು ದಿನಗಳಿಂದ ಏಕಾಏಕಿ ಭಾರತದ ಪರ ಮಾತನಾಡಲಾರಂಭಿಸಿದ್ದು ಚೀನದ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಈಗ ಓಲಿ ಪ್ರತಿಪಕ್ಷ ನೇಪಾಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಬಲಿಷ್ಠರಾಗಲು ಪ್ರಯತ್ನಿಸಬಹುದು ಎಂದೂ ವರದಿಗಳು ಹೇಳುತ್ತಿವೆ. ಆದರೆ ವಿಪಕ್ಷ ಮಾತ್ರ ಈ ವಿಚಾರದಲ್ಲಿ ಇನ್ನೂ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಒಲಿ ಆಡಳಿತದಲ್ಲಿ ಎದುರಾದ ವೈಫಲ್ಯಗಳು(ಕೋವಿಡ್ ತಡೆಯುವಲ್ಲಿ ವೈಫಲ್ಯ, ಚೀನದೊಂದಿಗಿನ ಅತಿಯಾದ ಮೈತ್ರಿ) ಹಾಗೂ ಕಮ್ಯುನಿಸ್ಟ್ ಪಾರ್ಟಿಯಲ್ಲಿನ ಭ್ರಷ್ಟಾಚಾರದ ಆರೋಪಗಳಿಂದಾಗಿ ಜನರು ಬೇಸತ್ತಿದ್ದು, ಎಪ್ರಿಲ್ ತಿಂಗಳಲ್ಲೇ ಚುನಾವಣೆ ನಡೆದರೆ ತಾನು ಮೇಲುಗೈ ಸಾಧಿಸುವುದು ಖಚಿತ ಎಂಬ ಭರವಸೆಯಲ್ಲಿದೆ ವಿಪಕ್ಷ. ಆದರೆ ಕಮ್ಯುನಿಸ್ಟರು ಚುನಾವಣೆಯ ದಿನ ಮುಂದೂಡಲು ಪ್ರಯತ್ನಿಸಬಹುದು ಎನ್ನುವ ಭಯವೂ ಅದಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ