ಭಾಷೆಗಳನ್ನು ಕಲಿಯುವ ಉತ್ಸಾಹ ಇರಲಿ
Team Udayavani, Nov 21, 2018, 12:49 PM IST
. ಆಂಗ್ಲಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೇಗಿದೆ?
ಆಂಗ್ಲಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆದರೆ ಹಲವಾರು ಉದ್ಯೋಗಾವಕಾಶ ಇದೆ. ಆ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾಗಿದೆ. ಕೋಪಿ ರೈಟರ್, ಆನ್ಲೈನ್ ಎಡಿಟಿಂಗ್, ಟೂರಿಸ್ಟ್ ಗೈಡ್ ಇದೆಲ್ಲಾ ಇತ್ತೀಚೆಗೆ ಹುಟ್ಟಿಕೊಂಡ ಉದ್ಯೋಗಗಳು. ಉದ್ಯೋಗ ಅವಕಾಶ ಇದೆ. ಆದರೆ ಆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವ ಉತ್ಸುಕತೆ ಇಲ್ಲ.
. ವಿದ್ಯಾರ್ಥಿಗಳು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವಂತೆ ಯಾವ ರೀತಿಯ ಸುಧಾರಣೆಗಳನ್ನು ತರಬಹುದು?
ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡುವ ಸಮಸ್ಯೆ ಕೇವಲ ಸರಕಾರಿ ಶಾಲೆಯ ಮಕ್ಕಳಿಗಲ್ಲ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೂ ಇರುತ್ತದೆ. ಈಗ ಬಹುತೇಕ ಕಾಲೇಜುಗಳಲ್ಲಿ ಕಮ್ಯೂನಿಕೇಟಿವ್ ಇಂಗ್ಲಿಷ್, ಫಂಕ್ಷನಲ್ ಇಂಗ್ಲಿಷ್, ಸೋ³ಕನ್ ಇಂಗ್ಲಿಷ್ ಮುಂತಾದ ಹೆಚ್ಚುವರಿ ಕೋರ್ಸ್ಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ಯುಜಿಸಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ.
. ಇಂಗ್ಲಿಷ್ ಕಠಿನ ಭಾಷೆ ಎಂಬ ಮಾತಿದೆ…ನಿಜವೇ?
ಖಂಡಿತವಾಗಿಯೂ ಇಲ್ಲ. ನಮಗೆ ಯಾವ ಭಾಷೆ ತಿಳಿದಿಲ್ಲವೋ ಆ ಭಾಷೆ ನಮಗೆ ಕ್ಲಿಷ್ಟಕರವಾಗಿ ಕಾಣುತ್ತದೆ. ಕನ್ನಡ ಬಾರದವರಿಗೆ ಕನ್ನಡವೂ ಕಠಿನ ಭಾಷೆಯಾಗಿ ಕಾಣುತ್ತದೆ. ಮನೆ ಹಾಗೂ ನಾವು ವಾಸಿಸುವ ಪ್ರದೇಶದಲ್ಲಿ ಹೆಚ್ಚು ಬಳಸುವ ಭಾಷೆ ನಮಗೆ ಸುಲಭದಲ್ಲಿ ಬರುತ್ತದೆ. ಅದನ್ನು ಹೊರತುಪಡಿಸಿದ ಭಾಷೆ ನಮಗೆ ಕಠಿನವಾಗಿ ಭಾಸವಾಗುತ್ತದೆ.
. ಇಂಗ್ಲಿಷ್ ಭಾಷೆಯಲ್ಲೇ ಬೋಧನೆ ಮಾಡುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟು ಆಗುತ್ತದೆಯೇ?
ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಇಂಗ್ಲಿಷ್ ಬರವಣಿಗೆ ಉತ್ತಮವಾಗಿರುತ್ತದೆ. ಗ್ರಾಮರ್ ಬಗ್ಗೆ ಅರಿವಿರುತ್ತದೆ. ಆದರೆ ಮಾತನಾಡುವ ಸಮಸ್ಯೆ ಇರುತ್ತದೆ. ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಭಾಷೆಯನ್ನು ಕನ್ನಡದಲ್ಲಿ ವಿವರಿಸಿರುವುದರಿಂದ ಅವರಿಗೆ ಸ್ವಲ್ಪ ಸಮಸ್ಯೆ ಇರುತ್ತದೆ. ಇದಕ್ಕಾಗಿ ಇಂಗ್ಲಿಷ್ ಭಾಷೆಯಲ್ಲೇ ಹೆಚ್ಚು ವ್ಯವಹರಿಸಲು ಪ್ರೋತ್ಸಾಹಿಸುವುದು ಉತ್ತಮ.
ಸರಕಾರಿ ಶಾಲೆಗಳು ಮುಚ್ಚುತ್ತಿರುವುದಕ್ಕೆ ಆಂಗ್ಲ ಶಿಕ್ಷಣದ ಅತೀ ವ್ಯಾಮೋಹ ಕಾರಣವೇ?
ಸರಕಾರಿ ಶಾಲೆಗಳು ಮುಚ್ಚುತ್ತಿರುವುದು ಹೌದು. ಆದರೆ ಅದಕ್ಕೆ ಆಂಗ್ಲಶಿಕ್ಷಣದ ಮೇಲಿನ ವ್ಯಾಮೋಹ ಕಾರಣ ಎಂದು ನನಗೆ ಅನ್ನಿಸುವುದಿಲ್ಲ. ಯಾಕೆಂದರೆ ನಾನು ಗಮನಿಸಿದಂತೆ ಮುಚ್ಚುತ್ತಿದ್ದ ಸರಕಾರಿ ಶಾಲೆಗಳಲ್ಲಿ ಅಧ್ಯಾಪಕರ ಸಮಸ್ಯೆ, ಮೂಲ ಸೌಕರ್ಯಗಳ ಸಮಸ್ಯೆ ಇರುತ್ತದೆ. ಆ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಕಲಿಸಲು ಹೆತ್ತವರು ಹಿಂದೇಟು ಹಾಕುತ್ತಾರೆ. ಅವರಿಗೂ ತಮ್ಮ ಮಕ್ಕಳು ಎಲ್ಲ ಸೌಲಭ್ಯಗಳೊಂದಿಗೆ ವಿದ್ಯಾಭ್ಯಾಸ ಮಾಡಬೇಕು ಎಂಬ ಬಯಕೆ ಇರುತ್ತದೆ. ಹಾಗಾಗಿ ಈ ಸಮಸ್ಯೆ ಎದುರಾಗುತ್ತದೆ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ