ದೋಸೆ ವೈವಿಧ್ಯ


Team Udayavani, Mar 10, 2018, 5:02 PM IST

10-March-12.jpg

ದೋಸೆ ಎಂದರೆ ಗಮ್ಮತ್ತು, ಹಲವು ವೈವಿಧ್ಯಗಳ ಕರಾಮತ್ತು. ಹಿಂದೆಲ್ಲ ವಿಶೇಷ ಸಂದರ್ಭಗಳಲ್ಲಿ ಮಾಡುತ್ತಿದ್ದ ದೋಸೆ ಈಗ ಎಲ್ಲರ ಮನೆ ಮನೆಯಲ್ಲೂ ನಿತ್ಯವೂ ನಾನಾ ತೆರನಾದ ದೋಸೆ ಎಂಬಂತಾಗಿದೆ. ನೀರುದೋಸೆ, ಉದ್ದಿನ ದೋಸೆ ಎಲ್ಲರಿಗೂ ಪ್ರಿಯವಾಗಿದ್ದರೂ ದಿನಾ ಒಂದೇ ಬಗೆಯ ದೋಸೆ ತಿನ್ನುವುದು ಬೋರಾಗಬಹುದು. ಅದಕ್ಕಾಗಿ ಇಲ್ಲಿ ಹಲವು ವಿಧದ ದೋಸೆ ರೆಸಿಪಿಗಳಿದ್ದು ಹೊಸದೇನಾದರೂ ಮಾಡಬೇ ಕೆಂದಿದ್ದರೆ ಟ್ರೈ ಮಾಡಿ ನೋಡಬಹುದು.

ಬಾಳೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು
· ಬೆಳ್ತಿಗೆ ಅಕ್ಕಿ -2 ಕಪ್‌ · ಬಾಳೆಕಾಯಿ (ಕದಳಿ, ಗಾಳಿ, ಮೈಸೂರು, ಕ್ಯಾವಂಡಿಷ್‌, ಬೂದು ಹೀಗೆ ಯಾವುದೇ ಬಾಳೆಕಾಯಿ) - 10 · ತೆಂಗಿನ ಕಾಯಿ ತುರಿ – 1 ಕಪ್‌ · ತೆಂಗಿನ ಎಣ್ಣೆ – 5 ಚಮಚ · ನೀರು – 4 ಕಪ್‌ · ಉಪ್ಪು – ರುಚಿಗೆ ತಕ್ಕಷು. ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಿ. ಬಾಳೆಕಾಯಿಯ ಸಿಪ್ಪೆ ತೆಗೆದು ಪ್ರತಿಯೊಂದನ್ನು ಮೂರು- ನಾಲ್ಕು ಹೋಳುಗಳಾಗಿ ಮಾಡಿ, ಅರ್ಧ ಗಂಟೆಯ ಕಾಲ ನೀರಿನಲ್ಲಿ ನೆನೆಸಿ. ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಾಳೆಕಾಯಿ ಹೋಳುಗಳೊಂದಿಗೆ ಹದವಾಗಿ ನೀರು ಬೆರೆಸಿ ರುಬ್ಬಿ. ಹಿಟ್ಟು ತರಿತರಿಯಾಗುತ್ತಾ ಬರುವಾಗ, ಕಾಯಿ ತುರಿ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟನ್ನು ಪಾತ್ರೆಗೆ ಸುರಿದು, ನೀರು ಸೇರಿಸಿ ದಪ್ಪ ದೋಸೆಯ ಹದಕ್ಕೆ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಕಾವಲಿ ಇಡಿ. ಕಾವಲಿ ಕಾದಾಗ ತೆಂಗಿನ ಎಣ್ಣೆ ಸವರಿ ದೋಸೆ ಹೊಯ್ಯಿರಿ.

ಸಾಂಬಾರ್‌ ಸೌತೆ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್‌ · ಸಣ್ಣದಾಗಿ ಕತ್ತರಿಸಿದ ಸಾಂಬಾರ್‌ ಸೌತೆ ಹೋಳು 2 ಕಪ್‌ · ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ. ಅಕ್ಕಿ, ಸೌತೆ ಹೋಳು, ಉಪ್ಪು ಸೇರಿಸಿ ಅರೆಯಿರಿ. ನೀರುದೋಸೆ ಹದಕ್ಕೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹೊಯ್ಯಿರಿ.

ಬೂದು ಕುಂಬಳಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು
· ಬೆಳ್ತಿಗೆ ಅಕ್ಕಿ 2 ಕಪ್‌ · ಸಣ್ಣ ದಾ ಗಿ ಕತ್ತರಿಸಿದ ಬೂದು ಕುಂಬಳಕಾಯಿ ಹೋಳು 2 ಕಪ್‌ · ರುಚಿಗೆ ತಕ್ಕಷ್ಟು ಉಪ್ಪು.  ಮಾಡುವ ವಿಧಾನ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ. ಬೂದು ಕುಂಬಳಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ, ಹಿಟ್ಟು ಸ್ವಲ್ಪ ದಪ್ಪಕ್ಕೆ (ಉದ್ದಿನ ದೋಸೆ ಹಿಟ್ಟಿನಂತೆ) ಇರಲಿ. ಕಾದ ತವಾದ ಮೇಲೆ ಹೊಯ್ಯಿರಿ.

ಸೋರೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು ·
ಬೆಳ್ತಿಗೆ ಅಕ್ಕಿ 2 ಕಪ್‌ · ಸಣ್ಣದಾಗಿ ಕತ್ತರಿಸಿದ ಸೋರೆಕಾಯಿ ಹೋಳ 2 ಕಪ್‌ · ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಸೋರೆಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ. ಹಿಟ್ಟು ಉದ್ದಿನ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ. ಕಾದ ತವಾದ ಮೇಲೆ ಹೊಯ್ಯಿರಿ. ಸೋರೆಕಾಯಿ ದೋಸೆಯನ್ನು ಯಾವುದೇ ಬಗೆಯ ಚಟ್ನಿ ಅಥವಾ ಸಾಂಬಾರ್‌ ನೊಂದಿಗೆ ಸವಿಯಬಹುದು.

ಸಿಹಿ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ – 2 ಕಪ್‌ · ಎಳೆ ತೆಂಗಿನ ಕಾಯಿ ತುರಿ 1 ಕಪ್‌ · ಬೆಲ್ಲ – ಅರ್ಧ ಕಪ್‌ · ಉಪ್ಪು ರುಚಿಗೆ ತಕ್ಕಷ್ಟು · ತುಪ್ಪ – 2 ಚಮಚ. ಮಾಡುವ ವಿಧಾನ: ಅಕ್ಕಿಯನ್ನುನ 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದಕ್ಕೆ ಎಳೆ ತೆಂಗಿನ ಕಾಯಿ ತುರಿ, ಬೆಲ್ಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನೀರು ದೋಸೆ ಹಿಟ್ಟಿಗಿಂತ ದಪ್ಪ ಇರಲಿ. ಕಾದತವಾದ ಮೇಲೆ ತುಪ್ಪ ಸವರಿ ಸ್ವಲ್ಪ ದಪ್ಪಕೆ ಹೊಯ್ಯಿರಿ.

ಕ್ಯಾರೆಟ್‌ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್‌ · ಕ್ಯಾರೆಟ್‌ ತುರಿ – 1 ಕಪ್‌ · ತೆಂಗಿನೆಣ್ಣೆ – 4 ಚಮಚ · ಉಪ್ಪು ರುಚಿಗೆ ತಕ್ಕಷ್ಟು.ಮಾಡುವ ವಿಧಾನ: ಅಕ್ಕಿಯನ್ನುನ 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿಗೆ ಉಪ್ಪು ಸೇರಿಸಿ ಅರೆದು ನೀರು ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ.ಅದಕ್ಕೆ ಕ್ಯಾರೆಟ್‌ ತುರಿ ಮಿಶ್ರ ಮಾಡಿರುಬ್ಬಬೇಕು. ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹೊಯ್ಯಿರಿ. 

ಬೆಂಡೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್‌ · ಬೆಂಡೆಕಾಯಿ ಹೋಳು 1 ಕಪ್‌ · ಉಪ್ಪು ರುಚಿಗೆ ತಕ್ಕಷ್ಟು · ತೆಂಗಿನೆಣ್ಣೆ – 4 ಚಮಚ. ಮಾಡುವ ವಿಧಾನ: ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿಗೆ ಉಪ್ಪು ಸೇರಿಸಿ ಅರೆಯಿರಿ. ಅಕ್ಕಿ ಸಣ್ಣಗಾದಾಗ (ನೀರುದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗಿರಲಿ) ಅದಕ್ಕೆ ಬೆಂಡೆಕಾಯಿ ಹೋಳು ಸೇರಿಸಿ ಸ್ವಲ್ಪ ರುಬ್ಬಿಕೊಳ್ಳಿ. ಕಾದತವಾದ ಮೇಲೆ ಎಣ್ಣೆ ಸವರಿ ಹೊಯ್ಯಿರಿ. ಬೆಂಡೆಕಾಯಿ ದೋಸೆ ಸಿದ್ಧ.

ಹಲಸಿನಕಾಯಿ ದೋಸೆ 
ಬೇಕಾಗುವ ಸಾಮಗ್ರಿಗಳು: · ಬೆಳ್ತಿಗೆ ಅಕ್ಕಿ 2 ಕಪ್‌ · ಹಲಸಿನ ಕಾಯಿಯ ಸೊಳೆ ಹೋಳು (ಸಣ್ಣಗೆ ಕತ್ತರಿಸಿದ ಹಲಸಿನ ಕಾಯಿಯ ಸೊಳೆ) ಒಂದು ಕಪ್‌
· ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಮೊದಲು ಅಕ್ಕಿಯನ್ನು ಸ್ವಲ್ಪ ಅರೆಯಿರಿ. ಅಕ್ಕಿ ಸಜ್ಜಿಗೆಯಂತೆ ತರಿತರಿ ಇರುವಾಗ ಹಲಸಿನ ಕಾಯಿ ಸೊಳೆ ಹೋಳು ಮತ್ತು ಉಪ್ಪು ಸೇರಿಸಿ ನುಣ್ಣಗೆ ಅರೆಯಿರಿ. ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹೊಯ್ಯಿರಿ. ಬಿಸಿಬಿಸಿಯಾದ ಹಲಸಿನಕಾಯಿ ದೋಸೆಗೆ ಎಣ್ಣೆ, ಉಪ್ಪಿನ ಕಾಯಿ ರಸ, ಜೇನು ತುಪ್ಪ ಅಥವಾ ಮಾವಿನ ಕಾಯಿ ಚಟ್ನಿ ಸೇರಿಸಿ ಸವಿಯಬಹುದು.

ಕ್ಯಾಬೇಜ್‌ ದೋಸೆ
ಬೇಕಾಗುವ ಸಾಮಗ್ರಿಗಳು 
· ಬೆಳ್ತಿಗೆ ಅಕ್ಕಿ – 2 ಕಪ್‌ · ಸಣ್ಣಕ್ಕೆ ಕತ್ತರಿಸಿದ ಕ್ಯಾಬೇಜ್‌- 1 ಕಪ್‌ · ಒಣಮೆಣಸು -2ರಿಂದ 3 · ಕೊತ್ತಂಬರಿ – 3 ಟೀ ಚಮಚ · ಉಪ್ಪು ರುಚಿಗೆ · ತೆಂಗಿನ ಎಣ್ಣೆ – 4 ಚಮಚ. ಮಾಡುವ ವಿಧಾನ: ಅಕ್ಕಿಯನ್ನು 1- 2ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದರೊಂದಿಗೆ ಕ್ಯಾಬೇಜ್‌, ಕೊತ್ತಂಬರಿ, ಒಣಮೆಣಸು, ಉಪ್ಪು ಸೇರಿಸಿ ರುಬ್ಬಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ಹೊಯ್ಯಿರಿ. ಇದೇ ಅಳತೆಯಲ್ಲಿ ಕ್ಯಾಬೇಜ್‌ ಬದಲು ಚೀನಿ ಕಾಯಿ ಅಥವಾ ಬಾಳೆ ಕಾಯಿ ಅಥವಾ ಬಾಳೆ ದಿಂಡು ಸೇರಿಸಿ ಕೂಡ ದೋಸೆ ಮಾಡಬಹುದು.

ಮಜ್ಜಿಗೆ ದೋಸೆ
ಬೇಕಾಗುವ ಸಾಮಗ್ರಿಗಳು· ಬೆಳ್ತಿಗೆ ಅಕ್ಕಿ- 1 ಕಪ್‌ · ಕುಚ್ಚಿಗೆ ಅಕ್ಕಿ- 1 ಕಪ್‌ · ಹುಳಿ ಮಜ್ಜಿಗೆ -1 ಕಪ್‌ · ಅವಲಕ್ಕಿ -ಅರ್ಧ ಕಪ್‌ · ತೆಂಗಿನ ಎಣ್ಣೆ -4 ಚಮಚ · ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ: ಬೆಳ್ತಿಗೆ ಹಾಗೂ ಕುಚ್ಚಿಗೆ ಎರಡೂ ಬಗೆಯ ಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಇಡಿ. ಬಳಿಕ ಉಪ್ಪು ಸೇರಿಸಿ ರುಬ್ಬಿ ಹಿಟ್ಟನ್ನು 5- 6 ಗಂಟೆಗಳ ಕಾಲ ಮುಚ್ಚಿ ಇಡಿ. ಅನಂತರ ಹಿಟ್ಟಿಗೆ ಹುಳಿ ಮಜ್ಜಿಗೆ, ಅವಲಕ್ಕಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕಾದ ತವಾದ ಮೇಲೆ ಎಣ್ಣೆ ಸವರಿ ದೋಸೆ (ಉದ್ದಿನ ದೋಸೆಯಂತೆ ದಪ್ಪಗೆ) ಹುಯ್ಯಿರಿ.

ಗಣೇಶ ಕುಳಮರ್ವ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.