ಸೋಲು ಅಭ್ಯಾಸವಾಗದಿರಲಿ


Team Udayavani, Sep 16, 2019, 6:00 AM IST

C-Full

ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ. ಇವೆರಡರ ನಡುವೆ ಒಬ್ಬಿಬ್ಬರು ಇರುತ್ತಾರೆ. ಅವರು ಏನೇ ಮಾಡಿದರೂ ಜೀವನದಲ್ಲಿ ಮೇಲೇಳುವುದೇ ಇಲ್ಲ. ಸೋಲು ಅವರಿಗೆ ಅಭ್ಯಾಸವಾಗಿದೆ ಅನ್ನುವ ಆಳವಾದ ನಂಬಿಕೆಯೇ ನಿಜವಾಗಿ ಅವರ ಸೋಲಿಗೆ ಕಾರಣವಾಗಿರುತ್ತದೆ.

ಜೀ”ವನ’ ಅಗೆದಷ್ಟೂ
ಆಳ ಮತ್ತು ಅದ್ಭುತ
ನಮ್ಮ ಜೀವನ ಅನ್ನುವುದು ಒಂದು ವನ. ಇಲ್ಲಿ ಪ್ರತಿದಿನ ಹೊಸ ಭಾವ, ಭಾವನೆ, ವ್ಯಕ್ತಿ ವ್ಯಕ್ತಿತ್ವ, ವಿಷಯ, ವಿಶೇಷ, ಅವಶೇಷ, ಸಾವು ನೋವು ಆಗಾಗ ಸಿಗುವ ನಲಿವು. ಎಲ್ಲವೂ ಒಂದು ದೊಡ್ಡ ವನದಲ್ಲಿ ಸಿಗುವ ಅದ್ಭುತ ಮತ್ತು ಆಶ್ಚರ್ಯ. ಅಂಬೆಗಾಲಿಟ್ಟು ನಮ್ಮ ಜೀ’ವನ’ದಲ್ಲಿ ಒಬ್ಬಂಟಿಯಾಗಿ ನಡೆಯುವುದು ಕಷ್ಟ. ಆದರೆ ಅಸಾಧ್ಯವಲ್ಲ. ಬಂಧು ಬಳಗ ತಂದೆ-ತಾಯಿ, ಅಕ್ಕ ತಂಗಿ ಎಲ್ಲರೂ ತಮ್ಮ ತಮ್ಮ ಜೀ’ವನ’ ದಲ್ಲೇ ನಡೆಯುವವರು,ಅವರೆಲ್ಲರಿಗೂ ನಾವು ಕತ್ತಲು ದಾಟಿಸಿ ಬೆಳಕಿಗೆ ಬಿಟ್ಟು ಬಿಡುವ ಆಸರೆ ಕೊಂಡಿಗಳಷ್ಟೇ. ಕೆಲವೊಮ್ಮೆ ನಮ್ಮ ಕಷ್ಟದಲ್ಲಿ ಯಾರ ಜೊತೆಯೂ ನೆರವಾಗದು ಆಗ ಬಂಧು ಬಳಗದ ಸಾಂತ್ವನ, ಸ್ನೇಹಿತರ ಹಿತವಚನ ಯಾವುದೂ ನಮ್ಮ ಕಿವಿಗೆ ಕೇಳದು, ಮನಸ್ಸು ಆಲಿಸದು, ಪಾಲಿಸದು. ನಮ್ಮ ಕಷ್ಟದಲ್ಲಿ ನಾವೆಲ್ಲ ಒಂಟಿ ಪಾದಚಾರಿಯಷ್ಟೇ ಅನ್ನುವುದು ಕಹಿ ಸತ್ಯ.

ಸೋಲು ರೋದನೆ, ಗೆಲುವು ಸಾಧನೆ
ನಮ್ಮಲ್ಲಿ ಬಹುತೇಕ ಎಲ್ಲರಿಗೂ ಒಂದು ಅಭ್ಯಾಸ ಹವ್ಯಾಸವಾಗಿ ಬಿಟ್ಟಿದೆ. ಮನೆಯಲ್ಲಿ ಅಪ್ಪ ಅಮ್ಮ ಕಾಲೇಜು ಫೀಸ್‌ ಕೊಟ್ಟಿಲ್ಲ, ನನಗೆ ಕಮ್ಮಿ ಮಾರ್ಕ್ಸ್ ಬಂತು, ಪೆಟ್ರೋಲ್‌ ಹಾಕೋಕೆ ಹಣಯಿಲ್ಲ, ಒಂದು ನೂರು ರೂಪಾಯಿ ಇದ್ರೆ ಕೂಡು ಇತ್ಯಾದಿ ಇತ್ಯಾದಿ.. ನಮ್ಮ ಕೊರತೆಗಳನ್ನು, ನಮ್ಮ ಸೋಲುಗಳನ್ನು ನಾವೇ ಪರಿಹರಿಸಿಕೊಳ್ಳುವ ಮಾರ್ಗವನ್ನು ಹುಡುಕುವ ಬದಲು, ಇನ್ನೊಬ್ಬರ ಬಳಿ ರೋದನೆಯಾಗಿ ಹೇಳಿಕೊಳ್ಳುವ ಅಭ್ಯಾಸ ಹಾಗೂ ಹವ್ಯಾಸ. ನಮ್ಮ ಕಷ್ಟ ಇನ್ನೊಬ್ಬರಿಗೆ ಹೊರೆಯಾಗಿಸುವ ಬದಲು ಗೆಲುವಾಗಿಸುವ ಮಾರ್ಗವಾಗಿ ಮಾರ್ಪಡಿಸಿಕೊಂಡರೆ ಅದು ಸಾಧನೆ. ಸೋತವರು ಗೆಲುವಿನ ಸಿದ್ಧತೆಯಲ್ಲಿರುತ್ತಾರೆ ಅನ್ನುವುದು ನೆನಪಿರಲಿ.

ಆಸೆ, ನಿರಾಶೆ = ದುರಾಸೆ
ಎಲ್ಲರೊಂದಿಗೆ ಬೆರೆತು ಹಾಯಾಗಿ ಇರಬೇಕೆಂಬದು ಆಸೆ.ಎಲ್ಲರನ್ನೂ ಮೀರಿ ಹಾಯಾಗಿ ಇರಬೇಕೆಂಬುದು ದುರಾಸೆ. ಸಾವಿರಾರು ಕೋಟೆಯನ್ನು ದುಡಿದು ಕವಾಟಿನಲ್ಲಿ ಹಣ ತುಂಬಿಸಿ ಇಟ್ಟ ವ್ಯಕ್ತಿ ತನ್ನ ಜೀವಿತದ ಕೊನೆ ಕ್ಷಣದಲ್ಲಿ ಆಸ್ಪತ್ರೆಯ ಬಿಲ…, ಬಿಪಿ, ಶುಗರ್‌ ಅದು ಇದು ಎನ್ನುವುದಕ್ಕೆ ವ್ಯಯ ಮಾಡುತ್ತಾನೆ. ಆಸೆಯಿಂದ ಕೂಡಿಟ್ಟ ಜಮೀನು, ಕಷ್ಟಪಟ್ಟು ಕಟ್ಟಿದ ಕೋಟಿ ಬಂಗಲೆ ಎಲ್ಲವೂ ಇನ್ನೊಬ್ಬರ ಪಾಲಿಗೆ. ನಾವು ನಮ್ಮ ಪಾಲಿನದು ತೆಗೆದುಕೊಂಡು ಹೋಗುವುದು ಮಾನ ಮುಚ್ಚುವ ಎರಡು ತುಂಡು ಬಿಳಿ ಬಟ್ಟೆ ಅಷ್ಟೇ. ಆಸೆಗಳಿರಬೇಕು ಅದು ಕನಸಿನ ಆಸೆಯಾಗಿರ ಬೇಕು ವಿನಃ ಕಲ್ಪನೆಯ ಆಸೆಗಳಲ್ಲ. ಆಸೆ ಹೆಚ್ಚು ಆದರೆ ಅದು ದುರಾಸೆ ಆಗಿ ನಿರಾಶರಾಗುವ ಮುನ್ನ ನಮ್ಮ ಆಸೆಗಳಿಗೂ ಮಿತಿಯಿರಲಿ.

ತಾಳಿದವನು ಸಾಧಿಸಿಯಾನು
ಬಾಲ್ಯದಲ್ಲಿ ಸೈಕಲ್‌ ಕಲಿಯುತ್ತಾ ಎಷ್ಟೋ ಸಾರಿ ಬಿದ್ದು ಗಾಯ ಮಾಡಿಕೊಂಡ ನೆನಪು ನಮ್ಮ ದೇಹದ ಭಾಗದಲ್ಲಿ ಇನ್ನೂ ಕಪ್ಪುಗಟ್ಟಿ ಬಾಲ್ಯವನ್ನು ನೆನಪಿಸುತ್ತದೆ. ಒಂದು ಬಾರಿ ಬಿದ್ದಾಗ ಮತ್ತೆ ಸ್ವಲ್ಪ ಹೆದರಿಕೊಂಡು ಸೈಕಲ್‌ ಏರಿ ಕೂತು, ಅಂತೂ ಹತ್ತು ಬಾರಿ ಬಿದ್ದು- ಎದ್ದು ಸೈಕಲ್‌ ಪೆಡಲ್‌ ತುಳಿದು ಸೈಕಲ್‌ ಅನ್ನು ಸರಾಗವಾಗಿ ತುಳಿಯಲು ಕಲಿತ್ತಿದ್ದೇವೆ ಅಲ್ವಾ? ಹೀಗೆಯೇ ನಮ್ಮ ನಾಲ್ಕು ದಿನದ ಜೀವನದಲ್ಲಿ ನೂರಾರು ಅನಿರೀಕ್ಷಿತ ಆನಂದ, ಆಘಾತ ಎಲ್ಲವೂ ಆಗಾಗ ಅಪ್ಪಳಿಸುತ್ತಲೇ ಇರುತ್ತವೆ. ಆಗ ನಾವು ಎಲ್ಲವನ್ನೂ ಎದುರಿಸಲು ಅಸಾಧ್ಯವಾದಾಗ ಸೋತು ಕೂರುತ್ತೇವೆ, ಕುಗ್ಗುತ್ತೇವೆ. ಇವತ್ತಲ್ಲ ನಾಳೆ, ಅಲ್ಲದಿದ್ರೂ ನಾಡಿದ್ದು ಒಂದು ದಿನ ಗೆಲುತ್ತೇವೆ. ತಾಳಿದವನು ಬಾಳಿಯಾನು ಏನಾದರೂ ಸಾಧಿಸಿಯಾನು.

-  ಸುಹಾನ್‌ ಶೇಕ್‌

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.