ಪೇಪರ್‌ ಹುಡುಗನ ಸಾಧನೆಗೆ ಸಲಾಂ


Team Udayavani, May 13, 2019, 6:00 AM IST

boy

ಜಾಗಿಂಗ್‌ಗಾಗಿ ಗೇಟಿನ ಬಳಿ ಬಂದಾಗ ಪೇಪರ್‌ ಹಾಕುವ ಹುಡುಗ ಬರುವುದು ಕಾಣಿಸಿತು. ಖುಷಿ ಖುಷಿಯಾಗಿದ್ದ. ‘ಏನು ವಿಶೇಷ’ ಎಂದು ಕೇಳಿದೆ. ನಿನ್ನೆ ಸೆಕೆಂಡ್‌ ಪಿಯು ಫ‌ಲಿತಾಂಶ ಬಂತಲ್ಲ? ನಂಗೆ ಶೇ.88 ಅಂಕ ಬಂದಿದೆ ಎಂದ.

‘ಹೋ ಕಂಗ್ರಾಟ್ಸ್‌’ ಎಂದು ಕೈ ಕುಲುಕಿದೆ. ಥ್ಯಾಂಕ್ಯೂ ಅಣ್ಣ. ಆಮೇಲೆ ಸಿಗ್ತೀನೆ. ಇನ್ನೂ ಕೆಲವು ಮನೆಗೆ ಪೇಪರ್‌ ಹಾಕುವುದು ಬಾಕಿ ಇದೆ’ ಎಂದು ಸೈಕಲ್ ಏರಿ ಹೊರಟ.

ಇಡೀ ಸಂಸಾರದ ನೊಗ ಹೊತ್ತು ಬೆಳಗ್ಗೆ, ರಾತ್ರಿ ಕೆಲಸ ಮಾಡುತ್ತಾ ಓದುವ ಹುಡುಗನದ್ದು ಅತ್ಯುತ್ತಮ ಸಾಧನೆ ಎನಿಸಿತು. ಹೌದು, ಆತನದ್ದು ಹೋರಾಟದ ಬದುಕು. ಅವನ ತಂದೆ 3 ವರ್ಷದ ಹಿಂದೆ ನಿಧನರಾದಾಗ ಅವನು ಒಂಬತ್ತನೇ ತರಗತಿಯಲ್ಲಿದ್ದ. 10 ಸೆಂಟ್ಸ್‌ ಹಿತ್ತಿಲು, ಚಿಕ್ಕ ಮನೆ ಅಷ್ಟೇ ಅವರಿಗಿದ್ದ ಆಸ್ತಿ. ಆದರೂ ಅವನು ಧೃತಿಗೆಡಲಿಲ್ಲ. ತಾನೇ ಮುಂದೆ ನಿಂತು ಮನೆಯ ಜವಾಬ್ದಾರಿ ಹೊತ್ತುಕೊಂಡ. ಅಕ್ಕ, ತಮ್ಮ ಜತೆಗೆ ತನ್ನ ಓದಿಗೆ ಕೆಲಸ ನಿರ್ವಹಿಸಲು ಮುಂದಾದ. ಜತೆಗೆ ತಾಯಿ ಬೀಡಿ ಕಟ್ಟಿ ಅವನ ನೆರವಿಗೆ ನಿಂತಳು. ಅಂದಿನಿಂದ ಅವನ ದಿನಚರಿಯೇ ಬದಲಾಗಿತ್ತು. ಮುಂಜಾನೆ 4 ಗಂಟೆಗೇ ಆತ ಎದ್ದೇಳುತ್ತಿದ್ದ. ಸ್ನಾನ ಮಾಡಿ ಸೈಕಲ್ ಏರಿ ಹೊರಟನೆಂದರೆ ಅಂದಿನ ಚಟುವಟಿಕೆ ಆರಂಭವಾದಂತೆ. 7 ಗಂಟೆವರೆಗೆ ಪೇಪರ್‌ ಹಾಕುತ್ತಿದ್ದ. ಮತ್ತೆ ಮನೆಗೆ ಬಂದು ಹೊಟೇಲ್ ಒಂದಕ್ಕೆ ಹೋಗುತ್ತಿದ್ದ. ಅಲ್ಲಿ ಅದು- ಇದು ಕೆಲಸ ಮಾಡಿ ಅಲ್ಲೇ ತಿಂಡಿ ತಿಂದು ಕಾಲೇಜಿಗೆ ತೆರಳುತ್ತಿದ್ದ. ಮತ್ತೆ ರಾತ್ರಿ 9.30ರಿಂದ ಬಸ್‌ ತೊಳೆಯುವ ಕೆಲಸವಿರುತ್ತಿತ್ತು. ಇಷ್ಟಾಗಿಯೂ ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ. ಬಿಡುವಿನ ಸಮಯದಲ್ಲಿ ಏಕಾಗ್ರತೆಯಿಂದ ಅಧ್ಯಯನ ನಡೆಸುತ್ತಿದ್ದ. ಹೀಗೆ ಆತ ಎಸೆಸೆಲ್ಸಿಯಲ್ಲೂ ಉತ್ತಮ ಅಂಕ ಗಳಿಸಿದ್ದ ಪಿಯುನಲ್ಲೂ ಸಾಧನೆ ತೋರಿದ್ದ. ಮುಂದೆ ಲೆಕ್ಚರರ್‌ ಆಗಿ ಓದಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎನ್ನುವ ಕನಸು ಆತನದ್ದು.

ಇಷ್ಟೆಲ್ಲ ಕಷ್ಟಪಡುವ ಆತ ಒಂದು ದಿನವಾದರೂ ಗೊಣಗಿದ್ದಾಗಲೀ, ಸಾಕಪ್ಪ ಜೀವನ ಎಂದು ಹತಾಶೆ ಭಾವ ತೋರಿದ್ದಾಗಲಿ ನಾನು ಕಂಡಿಲ್ಲ. ಹೌದು, ಕೆಲವರೇ ಹಾಗೆ. ತಾವು ಬೇಗೆಯಲ್ಲಿ ಬೇಯುತ್ತಿದ್ದರೂ ತಮ್ಮ ಬಳಿಗೆ ಬರುವವರಿಗೆ ನ ಕೈ ತುಂಬಾ ಸಿಹಿ ಹಣ್ಣು ಕೊಡುವಂತಹವರು.

-ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.