ಮೌನ ಕಲಿಸುವ ಜೀವನ ಪಾಠ


Team Udayavani, May 13, 2019, 6:00 AM IST

pa

ಅದೊಂದು ಹಳ್ಳಿ. ರಸ್ತೆ ಬದಿಯಲ್ಲಿ ಕುಳಿತಿದ್ದ ಒಬ್ಬ ವೃದ್ಧ ನಿತ್ಯವೂ ಭಿಕ್ಷೆ ಬೇಡುತ್ತಿದ್ದ. ಆ ರಸ್ತೆಯಲ್ಲಿ ಯಾರೂ ಬರುತ್ತಿರಲಿಲ್ಲ. ಬಂದರೂ ದಿನದಲ್ಲಿ ಒಂದಿಬ್ಬರಷ್ಟೇ. ಗೊತ್ತಿದ್ದರೂ ಆ ಭಿಕ್ಷುಕ ನಿತ್ಯವೂ ಬೆಳಗ್ಗೆ 8 ಗಂಟೆಗೆ ಬಂದು ಸಂಜೆ 6 ಗಂಟೆಗೆ ತೆರಳುತ್ತಿದ್ದ. ಇದನ್ನೆಲ್ಲ ದೂರದಲ್ಲೇ ನಿಂತು ಗಮನಿಸುತ್ತಿದ್ದ ಯುವಕನೊಬ್ಬ ವೃದ್ಧನ ಬಳಿ ಬಂದು, ತಾತಾ ನೀನು ನಿತ್ಯವೂ ಇಲ್ಲಿ ಬಂದು ಕುಳಿತುಕೊಳ್ಳುತ್ತಿಯಾ. ಆದರೆ ನಿನಗೆ ಸಿಗುವ ಭಿಕ್ಷೆ ಮಾತ್ರ 10- 20 ರೂ. ಮಾತ್ರ. ಅದೂ ಸಿಕ್ಕರೆ ಸಿಕ್ಕಿತ್ತು. ಇಲ್ಲವಾದರೆ ಇಲ್ಲ. ಒಂದು ದಿನವೂ ನಿನಗೆ ಇದು ಬೇಸರ ತರಿಸಲಿಲ್ಲವೇ ? ಎಂದ. ಆಗ ಆ ವೃದ್ಧ ಹೇಳಿದ ಮಗು, ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನನ್ನ ಹೆತ್ತವರು ಭಿಕ್ಷುಕರಾಗಿದ್ದರು.

ಜೀವನದಲ್ಲಿ ನಾನು ಈ ವೃತ್ತಿಯನ್ನು ಮಾಡಲೇಬಾರದು ಎಂದು ತೀರ್ಮಾನಿಸಿ ನಗರಕ್ಕೆ ಹೋಗಿ ಸಾಕಷ್ಟು ಆಸ್ತಿ, ಹಣ ಸಂಪಾದಿಸಿದೆ. ಆದರೆ ತಂದೆ, ತಾಯಿಯನ್ನು ಮರೆತು ಬಿಟ್ಟೆ. ಒಂದು ದಿನ ಹೆಂಡತಿ, ಮಕ್ಕಳೊಂದಿಗೆ ಇದ್ದಾಗ ನನ್ನ ಹುಡುಕಿ ಬಂದ ಹೆತ್ತವರನ್ನು ಮಾತನಾಡಿಸದೆ ಹೋದೆ. ಇದರಿಂದ ಮನನೊಂದು ಅವರು ಹೊರಟು ಹೋದರು. ಆದರೆ ಯಾವುದೋ ಕಾಯಿಲೆ ನನಗೆ ಬಂತೆಂದು ಹೆಂಡತಿ, ಮಕ್ಕಳು ತಿರಸ್ಕರಿಸಿದರು. ನನ್ನ ಆಸ್ತಿ, ಹಣವನ್ನು ದೋಚಿದರು. ನಾನು ಬೀದಿಗೆ ಬಿದ್ದೆ. ಅನಂತರ ಭಿಕ್ಷಾಟನೆಯೇ ನನ್ನ ವೃತ್ತಿಯಾಯಿತು. ಊರೂರು ಸುತ್ತಿ ಈ ಹಳ್ಳಿ ಸೇರಿದೆ. ಇದು ನಾನು ಬೆಳೆದ ಊರು.

ನನ್ನ ಹೆತ್ತವರು ಇಲ್ಲೇ ಕುಳಿತು ಭಿಕ್ಷೆ ಬೇಡಿ ಬಂದ ಹಣದಲ್ಲಿ ನನ್ನ ಹೊಟ್ಟೆ ತುಂಬಿಸುತ್ತಿದ್ದರು. ಹೀಗಾಗಿ ನಾನು ಇಲ್ಲೇ ಭಿಕ್ಷೆ ಬೇಡುತ್ತಿದ್ದೇನೆ. ಇಲ್ಲಿರುವ ನೆನಪು ಖುಷಿ ಕೊಡುತ್ತದೆ. ತಂದೆ, ತಾಯಿಯೊಂದಿಗೆ ಕಳೆದ ಮಧುರ ಬಾಲ್ಯದ ನೆನಪು ಇನ್ನೂ ಹಸಿಯಾಗಿದೆ ಎಂದು ಹೇಳಿ ಮೌನವಾದ.

ಹೌದು ಬದುಕಿನಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು. ಬದುಕಿನ ತಿರುವಿನಲ್ಲಿ ಸಿಗುವ ಪಾಠ ಎಂದಿಗೂ ಮರೆಯಲಾಗದು. ಮುಗ್ಧ ಮನಸ್ಸಿನವರು ನಾವಾಗಿದ್ದರೆ ಅನುಭವಗಳೇ ನಮಗೆ ಖುಷಿಕೊಡುತ್ತದೆ, ಬದುಕಿಗೊಂದು ದಾರಿ ತೋರುತ್ತದೆ. ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋಭಾವ ನಮ್ಮದಾಗಿರಬೇಕು.

-ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.