ಮುಖವಾಡದ ಹಿಂದಿದೆ  ಸತ್ಯ


Team Udayavani, Oct 15, 2018, 2:49 PM IST

15-october-12.gif

ಬದುಕಿನ ದಾರಿ ಸ್ಪಷ್ಟವಾಗಿದೆ ಎಂದುಕೊಳ್ಳುತ್ತೇವೆ. ಆದರೆ ಸ್ಪಷ್ಟತೆಯಲ್ಲಿಯೂ ಅಸ್ಪಷ್ಟತೆಯ ನೆರಳು ಕಾಣಿಸಿಕೊಳ್ಳುತ್ತದೆ. ಅಂತೆಯೇ ಪ್ರತಿಯೊಬ್ಬರಿಗೂ ಒಂದೊಂದು ಮುಖವಿದ್ದಂತೆ ನೂರಾರು ಮುಖವಾಡಗಳಿರುತ್ತವೆ. ಒಂದು ಮುಖ ಬಾಹ್ಯ ರೂಪದಲ್ಲಿ ಶಾರೀರಿಕವಾಗಿದ್ದರೆ, ಮುಖವಾಡಗಳು ಹತ್ತಾರು ಸಂದರ್ಭಗಳಲ್ಲಿ ನೂರಾರು ರೀತಿಯಲ್ಲಿ ಹೊರ ಬರುತ್ತವೆ.

ಮುಖವಾಡಗಳು ಬೇಕೇ?, ಬೇಡವೇ ? ಎಂಬ ಪ್ರಶ್ನೆಗಳು ತೀರಾ ವೈಯಕ್ತಿಕವಾದರೂ ಇದರಲ್ಲಿ ಇನ್ನೊಬ್ಬರೂ ಸೇರಿಕೊಳ್ಳುವುದರಿಂದ ಒಂದಷ್ಟು ಯೋಚನೆ, ಭವಿಷ್ಯದಲ್ಲಿ ಉಂಟಾಗುವ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಯಾವ ಮುಖವಾಡ ಧರಿಸಬೇಕು ಎಂಬ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಅಪಾಯ ಖಂಡಿತ.

ಮುಖವಾಡಗಳು ಮನದ ಕನ್ನಡಿಯಿದ್ದಂತೆ. ನಾವು ಹೇಗಿರುತ್ತೇವೆ ಎಂದು ತಿಳಿಯುವುದೇ ಈ ಮುಖವಾಡದ ಭಾವಗಳನ್ನು ವ್ಯಕ್ತಪಡಿಸುವ ಮೂಲಕ. ಮುಖವಾಡ ಪ್ರದರ್ಶನ ಇನ್ನೊಂದು ತೆರನಾಗಿರುತ್ತದೆ. ಇದು ವ್ಯಕ್ತಿ ವಿಭಿನ್ನತೆಯನ್ನೂ ಪಡೆದಿದೆ.

ಸುಳ್ಳು ಹೇಳಬೇಕಾದರೆ ಮಾತಿನಲ್ಲಿ, ಮುಖದಲ್ಲಿ ಸತ್ಯದ ನೆರಳು ಹುಟ್ಟಿಸುವುದು, ಇನ್ನೊಬ್ಬರನ್ನು ಕಂಡರೆ ಆಗದಿದ್ದರೂ ಅವರು ಎದುರು ಬಂದಾಗ ನಗುವುದು, ಇಷ್ಟವಿಲ್ಲದಿದ್ದರೂ ಹಸ್ತಲಾಘವ ನೀಡುವುದು ಹೀಗೆ ಒಳಗೊಂದು ಹೊರಗೊಂದು ಭಾವನೆಗಳ ಹೊರಸೂಸುವಿಕೆ ಕೆಲವರಿಗೆ ಅನಿವಾರ್ಯವಾಗಿರಬಹುದು, ಇನ್ನು ಕೆಲವರಿಗೆ ನಿತ್ಯ, ಸಹಜ ಸ್ವಭಾವವೇ ಆಗಿ ಬಿಡಬಹುದು. ತೀರಾ ಹತ್ತಿರದವರು ಇಂಥ ವರ್ತನೆ ತೋರಿದರೆ ವಿಶ್ವಾಸ ದ್ರೋಹ ಎಂದೆನಿಸಿಕೊಳ್ಳುತ್ತದೆ. ಆದರೆ ಶಿಕ್ಷಕರು, ಹಿರಿಯರ ಎದುರು ಅತಿಯಾಗಿ ವಿಧೇಯನಾಗಿದ್ದೇನೆ ಎಂದು ಪ್ರದರ್ಶಿಸುವುದು ಇನ್ನೊಂದು ರೀತಿಯಲ್ಲಿ ಅತಿರೇಕತೆಯಾಗಿ ಬಿಡುತ್ತದೆ.

ಮುಖವಾಡ ಇದು ಶಾಶ್ವತವಾಗಿ ಉಳಿಯಲು ಸಾಧ್ಯವೇ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ತೊಟ್ಟುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಯಾವುದೇ ಮಾರ್ಗವಿಲ್ಲ ಎಂದಾಗ ಮಾತ್ರ ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ತೊಟ್ಟುಕೊಳ್ಳಬೇಕು. ನಮ್ಮ ನಡೆ ನುಡಿ ಶುದ್ಧವಾಗಿದ್ದರೆ, ಅದನ್ನು ಬಿಚ್ಚಿಡುವ ಧೈರ್ಯ ಪ್ರದರ್ಶಿಸಿದರೆ ಇಂಥ ಮುಖವಾಡಗಳ ಅನಿವಾರ್ಯತೆಯೇ ನಮಗೆ ಬರುವುದಿಲ್ಲ.

ವ. ಉಮೇಶ್‌ ಕಾರಂತ, ಮಂಗಳೂರು

ಟಾಪ್ ನ್ಯೂಸ್

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.