ಆರೋಗ್ಯ ವರ್ತಮಾನ
Team Udayavani, Mar 26, 2019, 11:16 AM IST
ಮಕ್ಕಳಲ್ಲಿ ಆತಂಕಕ್ಕೆ ಜನನದ ವೇಳೆಯ ತೊಂದರೆಯೇ ಕಾರಣ
ಇಂದು ಹೆಚ್ಚಿನ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿರುತ್ತದೆ. ಇದರ ಹಿಂದಿನ ಕಾರಣವನ್ನು ಇತ್ತೀಚೆಗೆ ಅಧ್ಯಯನವೊಂದು ಕಂಡು ಹಿಡಿದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಯಾವ ಮಕ್ಕಳ ಜನನದ ಸಮಯದಲ್ಲಿ ತೊಂದರೆ ಉಂಟಾಗಿರುತ್ತದೆಯೋ ಅಂಥ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಹೆಚ್ಚಾಗಿ ಕಾಡುತ್ತದೆ ಎಂಬುದು ಈ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ಅಧ್ಯಯನದಲ್ಲಿ 9ರಿಂದ 12 ವರ್ಷದವರೆಗಿನ 149 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಿಸಿ ಚಹಾ ಸೇವನೆಯಿಂದ ಅನ್ನನಾಳ ಕ್ಯಾನ್ಸರ್
ಚಹಾ ಬಿಸಿ ಬಿಸಿಯಾಗಿದ್ದರೆ ಮಾತ್ರ ಸ್ವಾದ ಎನ್ನುತ್ತಾರೆ ಚಹಾ ಪ್ರಿಯರು. ಆದರೆ ಬಿಸಿಯಾದ ಚಹಾ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಂಶೋಧನೆ ಯೊಂದರಿಂದ ದೃಢಪಟ್ಟಿದೆ. ಇಂಟರ್ನ್ಯಾಶನಲ್ ಜರ್ನಲ್ನ ಆಫ್ ಕ್ಯಾನ್ಸರ್ ನಡೆಸಿದ ನೂತನ ಸಂಶೋಧನೆ ಪ್ರಕಾರ ಹೆಚ್ಚು ಬಿಸಿ ಚಹಾ ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್ಗೆ ಆಹ್ವಾನ ಮಾಡಿದಂತೆ ಎಂದು ತಿಳಿಸಿದೆ. ಅಮೆರಿಕ ಕ್ಯಾನ್ಸರ್ ಸೊಸೈಟಿ ನೀಡಿದ ವರದಿ ಪ್ರಕಾರ 17,650 ಅನ್ನನಾಳದ ಕ್ಯಾನ್ಸರ್ ಪತ್ತೆಯಾಗಿದ್ದು, ಇದರಲ್ಲಿ 16,000 ಜನರು ಮರಣ ಹೊಂದಿದ್ದಾರೆ. ಅಲ್ಲದೇ ಆಹಾರದಲ್ಲಿ ಸದಾ ಮಾಂಸ, ಕಡಿಮೆ ಹಣ್ಣು , ತರಕಾರಿ ತಿನ್ನುವುದು ಕೂಡ ಅನ್ನನಾಳದ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ