ವ್ಯಾಯಾಮಕ್ಕೆ ಮೊದಲ ತಯಾರಿ


Team Udayavani, May 21, 2019, 6:03 AM IST

karthik-article-image

ಫಿಟ್‌ನೆಸ್‌ಗಾಗಿ ಯೋಗ, ವ್ಯಾಯಾಮ, ಜಿಮ್‌ ವರ್ಕ್‌ಔಟ್‌ಗೆ ಎಲ್ಲರೂ ಮೊರೆಹೋಗುತ್ತಾರೆ. ಆದರೆ ಮೊದಲ ಬಾರಿಗೆ ಈ ಪ್ರಯತ್ನ ನಡೆ ಸುವವರಿಗೆ ಹೇಗೆ ಅನುಸರಿಸಬೇಕು, ಅದಕ್ಕೆ ಪೂರ್ವ ತಯಾರಿ ಏನು ಎಂಬ ಬಗ್ಗೆ ಅರಿವಿರುವುದಿಲ್ಲ. ಉತ್ತಮ ಆರಂಭ ದೊರಕದೇ ಇದ್ದರೇ ದೇಹವನ್ನು ಫಿಟ್‌ ಆಗಿರಿಸಲು ಸಾಧ್ಯವಿಲ್ಲ.

ಸರಿಯಾದ ಯೋಜನೆ ಇರಲಿ
ನಮ್ಮ ಯಾವುದೇ ಚಟುವಟಿಕೆಗೆ ಒಂದು ನಿರ್ದಿಷ್ಟ ಪ್ಲ್ರಾನಿಂಗ್‌ ಕೈಗೊಂಡಾಗ ಸುಲಭವಾಗಿ ಮತ್ತು ದಿನದ ಎಲ್ಲ ಕೆಲಸಕ್ಕೂ ಸರಿಯಾದ ಸಮಯ ಹೊಂದಾಣಿಕೆ ಮಾಡಬಹುದು. ತರಾತುರಿಯಲ್ಲಿ ಕೈಗೊಂಡರೆ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದೇ ಜಾಸ್ತಿ.

ಮನಸ್ಥಿತಿ
ಯಾವುದೇ ಕಾರ್ಯ ಕೈಗೊಳ್ಳುವ ಮೊದಲಿಗೆ ಆ ಕಾರ್ಯದ ಬಗ್ಗೆ ದೃಢ ಮನಸ್ಥಿತಿ ಬಹಳ ಮುಖ್ಯ. ನಾನು ವ್ಯಾಯಾಮ ಮಾಡಬೇಕು ಎಂಬ ದೃಢ ಮನಸ್ಸು, ಏಕಾಗ್ರತೆ ಬಹಳ ಮುಖ್ಯ. ವಕೌìಟ್‌ ಎಂದಿಗೂ ಹೊರೆ ಎನಿಸದಿರಲಿ. ಮನಸ್ಸಿನಲ್ಲಿ ತೃಪ್ತಿ ಇಲ್ಲದೆ ಮಾಡಿದ ವ್ಯಾಯಾಮ ವ್ಯರ್ಥ.

ಸ್ಥಳಗಳ ಆಯ್ಕೆ
ವ್ಯಾ ಯಾಮದ ಚಟುವಟಿಕೆಗೆ ಸ್ಥಳಗಳ ಆಯ್ಕೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಹೊರಾಂಗಣ ಸೂಕ್ತವೇ ಇಲ್ಲವೇ ಜಿಮ್‌, ಮನೆಗಳಲ್ಲೇ ಒಳಾಂಗಣ ಸ್ಥಳಗಳು ಸಾಕೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇಲ್ಲಿ ಜಾಗಿಂಗ್‌, ವಾಕಿಂಗ್‌ನಂತಹ ವ್ಯಾಯಾವಗಳು ಮುಖ್ಯವಾಗಿ ಹೊರಾಂಗಣ ಸೂಕ್ತ. ಬೆಳಗ್ಗೆ ಬೇಗ,ಸಂಜೆ ವ್ಯಾಯಮಕ್ಕೆ ಸೂಕ್ತ ಸಮಯ.

ಆಹಾರ,ಉಡುಗೆ,ತೊಡುಗೆಕರಿದ ತಿಂಡಿಗಳಿಂದ ದೂರವಿರಬೇಕು. ಹಣ್ಣು ತರಕಾರಿ ಮತ್ತು ನೀರು ಜಾಸ್ತಿ ಸೇವಿಸ ಬೇಕು. ವ್ಯಾಯಾಮಕ್ಕೆ ಟ್ರ್ಯಾಕ್‌ ಪ್ಯಾಂಟ್‌ ಜತೆಗೆ ಕಂಫ‌ಟೇìಬಲ್‌ ಡ್ರೆಸ್‌ಗಳ ಆಯ್ಕೆ ನಿಮ್ಮದಾಗಿರಲಿ. ಸಡಿಲವಾದ ಉಡುಪುಗಳನ್ನು ಆಯ್ಕೆ ಮತ್ತು ಉತ್ತಮ. ಉಡುಪು ಬಿಗಿಯಾದರೆ ವ್ಯಾಯಾಮದ ಚಲನವಲನಗಳಿಗೆ ಹಾಗೂ ರಕ್ತಸಂಚಲನೆಗೂ ತೊಂದರೆಯಾಗುತ್ತದೆ. ಹಾಗಾಗಿ ಸಡಿಲವಾದ, ಬೇಗನೆ ಒಣಗಬಲ್ಲ ಉಡುಗೆಗಳು ಸೂಕ್ತ.

ಇವುಗಳ ಜತೆಗೆ ಸ್ವಚ್ಛತೆಯನ್ನು ಕಾಪಾಡಿ. ವಕೌìಟ್‌ ಮಾಡುವಾಗ ಬೆವರು ಒರೆ ಸಲು ಸದಾ ಟವೆಲ್‌ ಬಳಿ ಇರಲಿ. ಪ್ರತಿ ವಕೌìಟ್‌ನ ನಂತರ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.

ವಾರ್ಮ್ಅಪ್‌
ವಕೌìಟ್‌ ಮುಂಚೆ ವಾರ್ಮ್ ಅಪ್‌ ಅತ್ಯಾವಶ್ಯಕ. ಸ್ನಾಯುಗಳನ್ನು ಸಡಿಲಗೊಳಿಸಲು ಜಾಗಿಂಗ್‌, ಸ್ಟ್ರೆಚಿಂಗ್‌ ನಂತಹ ವಾರ್ಮ್ ಆಪ್‌ ಸಹಕಾರಿ. ಇದರಿಂದ ಭಾರೀ ವ್ಯಾಯಾಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಸ್ನಾಯುಗಳು ಮತ್ತು ದೇಹ ಪಡೆದು ಕೊಳ್ಳುತ್ತದೆ. ವಕೌìಟ್‌ ಮುಂಚೆ ವಾರ್ಮ್ ಅಪ್‌ ಎಷ್ಟು ಮುಖ್ಯವೋ ಕೂಲ್‌ ಡೌನ್‌ ಕೂಡ ಅಷ್ಟೇ ಮುಖ್ಯ.ಸ್ನಾಯು,ದೇಹದ ಮೇಲೆ ಆಗಿರುವ ಒತ್ತಡ ಕಡಿಮೆ ಮಾಡಲು ಕೂಲ್‌ ಡೌನ್‌ ಅವಶ್ಯಕ.

ವಿವಿಧತೆ ಇರಲಿ
ವ್ಯಾಯಾಮದಲ್ಲಿ ವಿವಿಧತೆ ಇರಲಿ. ವಾರದಲ್ಲಿ ಇಂತಹ ದಿನ ಈ ವ್ಯಾಯಾಮ ಎಂದು ನಿಗದಿಪಡಿಸುವುದು ಉತ್ತಮ.
ಸ್ವಿಮ್ಮಿಂಗ್‌, ಬೀಚ್‌ ಸೈಡ್‌ ವಾಲಿಬಾಲ್‌ ಲಾಂಗ್‌ ವಾಕ್‌ ಒಳಾಂಗಣ ವ್ಯಾಯಾಮಗಳಾದ ಏರೋಬಿಕ್ಸ್‌ , ಯೋಗ ವಿವಿಧ ಆಯ್ಕೆ ಇರಲಿ.

-ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.