ರೋಲಿಂಗ್‌ ಬ್ಯಾರಿಯರ್ಸ್‌ ಯೋಜನೆ ನಗರದ ಆದ್ಯತೆಯಾಗಲಿ


Team Udayavani, Oct 27, 2019, 4:24 AM IST

z-15

ನಗರದಲ್ಲಿ ದಿನಕ್ಕೊಂದು ವಾಹನಗಳ ಪರಿಚಯವಾಗುತ್ತಿದೆ. ಗ್ರಾಹಕರು ಕೂಡ ಅದೇ ರೀತಿಯಲ್ಲಿ ಸ್ಪರ್ಧೆಗಿಳಿದು ವಾಹನಗಳನ್ನು ಖರೀದಿಸುತ್ತಿರುವುದು ನಾವು ಕಾಣಬಹುದು. ಹಾಗಾಗಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಗೊಂಡು ರಸ್ತೆ ಟ್ರಾಫಿಕ್‌ ಜಾಮ್‌ ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಅಸಮರ್ಪಕ ರಸ್ತೆಗಳಿಂದಾಗಿ ಅಪಘಾತಗಳ ಸಂಖ್ಯೆ ಏರುತ್ತಿದೆಯೇ ವಿನಾ ಕಡಿಮೆಯಾದ ವರದಿಗಳು ಕೇಳುತ್ತಿಲ್ಲ. ಕಾರಣ ಹುಡುಕಲು ಹೊರಟರೆ ಹೊಸ, ಹಳೆ ರಸ್ತೆಗಳ ಅಸಮರ್ಪಕ, ಆಮೆವೇಗದ ಕಾಮಗಾರಿಗಳೇ ಕಾರಣ ಎನ್ನಬಹುದು.

ಇದು ಸತ್ಯವೂ ಕೂಡ. ಆದರೆ ಹೊರದೇಶಗಳು ರಸ್ತೆ ಅಭಿವೃದ್ಧಿಗೊಳಿಸುವುದರ ಜತೆಗೆ ಅಪಘಾತಗಳ ತಡೆಗೆ ವಿನೂತನ ಯೋಜನೆಗಳನ್ನು ಹೊರ ತಂದಿವೆ. ಹೌದು ಅತಿಯಾದ ವೇಗದಿಂದ ನಿಯಂತ್ರಣ ತಪ್ಪಿ ಕಮರಿಗೆ ಬೀಳುವುದನ್ನು ತಪ್ಪಿಸಲು ಕೊರಿಯಾ ದೇಶದಲ್ಲಿ ಆವಿಷ್ಕರಿಸಿದ ಯುರೆಥೇನ್‌ ರೋಲರ್ಸ್‌ ಎಲ್ಲ ದೇಶಗಳಿಗೂ ಅಳವಡಿಸಲು ಅನುಕರಣೀಯವಾಗಿದೆ. ಇದು ಕೂಡ ಸಂಚಾರ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮಾದರಿ ಯೋಜನೆಯಾಗಿದೆ. ಈ ಯೋಜನೆಯ ಉಪಯೋಗವೇನು, ಇದರ ಬಗೆಗಿನ ಮಾಹಿತಿ ತಿಳಿಯುವುದು ಅತ್ಯಗತ್ಯ.

ಏನಿದು ಯುರೆಥೇನ್‌ ರೋಲರ್ಸ್‌
ರೋಲಿಂಗ್‌ ಬ್ಯಾರಿಯರ್ಸ್‌ ಅನಿಯಂತ್ರಿತ ಚಲಿಸುವ ವಾಹನಗಳನ್ನು ಮರು ನಿರ್ದೇಶಿಸಲು ಮತ್ತು ಅದನ್ನು ಮತ್ತೆ ಸಮತೋಲನಗೊಳಿಸಲು ರಸ್ತೆ ಸುರಕ್ಷತೆಗೆ ಇತ್ತೀಚಿನ ಉದಯೋನ್ಮುಖ ತಂತ್ರಜ್ಞಾನಗಳು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಹೊಸ ಮಾರ್ಗವೇ ಯುರೆಥೇನ್‌ ರೋಲರ್ಸ್‌. ಆದಾಗ್ಯೂ, ಕೊರಿಯಾ ದೇಶದಲ್ಲಿ ಆವಿಷ್ಕರಿಸಿದ ಯುರೆಥೇನ್‌ ರೋಲರ್ಸ್‌ ಅನಿಯಂತ್ರಿತ ಚಲಿಸುವ ವಾಹನಗಳನ್ನು ಮರು ನಿರ್ದೇಶಿಸಲು ಮತ್ತು ಅದನ್ನು ಮತ್ತೆ ಸಮತೋಲನಗೊಳಿಸಲು ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಈ ರೋಲಿಂಗ್‌ ಅಡೆತಡೆಗಳು ಅಪಘಾತದ ಸಮಯದಲ್ಲಿ ಮೆತ್ತನೆಯ ಪರಿಣಾಮವನ್ನು ಒದಗಿಸುತ್ತವೆ. ಹೆಚ್ಚಿನ ವೇಗದ ಪರಿಣಾಮವನ್ನು ಕಡಿಮೆ ಮಾಡುತ್ತವೆ. ಜಿಗಿತದಿಂದ ವಸ್ತು ಸ್ಥಿತಿಸ್ಥಾಪಕತ್ವವನ್ನು ರೂಪಿಸುತ್ತದೆ ಮತ್ತು ಇತರ ಕಾರ್ಯಕ್ಷಮತೆಯ ಗುಣಲಕ್ಷಣಗಳನ್ನು ಹೊಂದಿದ್ದು ಅದು ಪ್ರಯಾಣಿಕರಿಗೆ ಹೆಚ್ಚಿನ ಗಾಯವಾಗುವುದನ್ನು ತಪ್ಪಿಸುತ್ತದೆ. ಇದು ಒಂದು ರೀತಿಯಲ್ಲಿ ಮುಂದುವರಿದ ತಂತ್ರಜ್ಞಾನದಿಂದ ಕೂಡಿದ್ದು ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಯೂ ಎಲ್ಲ ದೇಶಗಳಿಗೆ ಪೂರಕವಾಗಲಿದೆ.

ನಮ್ಮ ನಗರದಲ್ಲೂ ಅಳವಡಿಕೆಯಾಗಲಿ
ರೋಲಿಂಗ್‌ ಬ್ಯಾರಿಯರ್ಸ್‌ ನಮ್ಮ ನಗರದಲ್ಲೂ ಪರಿಚಯ ಮಾಡಿಸಬಹುದು. ನಮ್ಮಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವಾಗ ಇಂತಹ ವಿನೂತನ ಯೋಜನೆಗಳು ಬಂದರೆ ನಗರ ದೃಷ್ಟಿಕೋನದಲ್ಲಿ ಉತ್ತಮವಾಗಬಹುದು.

ಎಲ್ಲಿ ಅಳವಡಿಸಬಹುದು
ಈ ರೋಲರ್‌ ಅಡೆತಡೆಗಳ ಅನುಷ್ಠಾನವು ಸಮತಟ್ಟಾದ ರಸ್ತೆಗಳು, ಬಾಗಿದ ರಸ್ತೆ ವಿಭಾಗಗಳು, ಇಳಿಜಾರುಗಳು, ಪಾರ್ಕಿಂಗ್‌ ಗ್ಯಾರೇಜ್‌ನಲ್ಲಿ ಪ್ರವೇಶದ್ವಾರಗಳು, ನಿರ್ಗಮನ ಇಳಿಜಾರು ಇತ್ಯಾದಿಗಳಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

-  ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.