ತುಂಬಾ ಹತ್ತಿರದಲ್ಲಿರುವ ಆರು ಚೆಂದದ ಜಲಪಾತಗಳು


Team Udayavani, Jan 21, 2017, 4:10 PM IST

6554.jpg

ನದಿ ರಭಸದಿಂದ ಹರಿದು ಜಲಪಾತದಿಂದ ಹಾರಿ ಬೀಳುವ ದೃಶ್ಯ ನೋಡಲು ಎರಡು ಕಣ್ಣು ಸಾಲುವುದಿಲ್ಲ. ಹಾಗಾಗಿ ನೀವು ಈ ವರ್ಷ ನೋಡಬಹುದಾದ ಜಲಪಾತಗಳ ಪಟ್ಟಿ ಇಲ್ಲಿದೆ. ಸಮಯ ನೋಡಿಕೊಂಡು ಪುರ್ಸೊತ್ತಲ್ಲಿ ಹೋಗಿ ಬರಬಹುದು.

1. ಶಿವನ ಸಮುದ್ರ
ಆಕಡೆ ಭರಚುಕ್ಕಿ ಈ ಕಡೆ ಗಗನಚುಕ್ಕಿ. ಸ್ವರ್ಗ ಎಲ್ಲಿದೆ ಎಂದರೆ ಇಲ್ಲೇ ಇದೆ ಅನ್ನಬೇಕು. ಅಷ್ಟು ಚಂದದ ಜಲಪಾತಗಳಿವು. ಹೆಸರು ಬಹುತೇಕರಿಗೆ ಗೊತ್ತಿದೆ. ಆದರೆ ನೋಡಿದವರ ಸಂಖ್ಯೆ ಕಡಿಮೆ ಇದೆ. ಜೀವಮಾನದಲ್ಲಿ ಒಂದ್ಸಲ ಆದ್ರೂ ನೋಡಲೇಬೇಕಾದ, ಮಂಡ್ಯ ಜಿಲ್ಲೆಯಲ್ಲಿರುವ ಈ ಜಲಪಾತ ನಮಗೆ ಹತ್ತಿರದಲ್ಲೇ ಇದೆ.
ದೂರ- ಸುಮಾರು 135 ಕಿಮೀ.

2. ಚುಂಚಿ ಫಾಲ್ಸ್‌
ಹಸಿರು ತುಂಬಿದ ತಾಣದಲ್ಲಿ ನದಿಯೊಂದು ರಂಭಸದಿಂದ ಧಾವಿಸಿ ಕೆಳಕ್ಕೆ ಹಾರಿ ಝರಿಯಾಗುವ ವಿಸ್ಮಯವನ್ನು ಕಣ್ತುಂಬಲು ಚುಂಚಿ ಫಾಲ್ಸ್‌ಗೆ ಹೋಗಬೇಕು. ಕನಕಪುರದಲ್ಲಿರುವ ಈ ಜಲಪಾತ ನೋಡಲು ಫ್ರೆಂಡ್ಸ್‌ ಜೊತೆ ಹೋಗುವುದು ಚೆಂದಾಚೆಂದ. ಎಲ್ಲರೂ ಒಟ್ಟಾಗಿ ಹೋಗಿ ಆನಂದಿಸಿ.
ದೂರ- ಸುಮಾರು 90 ಕಿಮೀ.

3. ಹೊಗೇನಕಲ್‌
ಅದ್ಭುತ ದೃಶ್ಯ ಕಾವ್ಯ ಈ ಜಲಪಾತ. ಕಾವೇರಿಯ ಅಂದವನ್ನು ಸವಿಯಬೇಕಾದರೆ ಒಂದ್ಸಲ ಈ ಜಲಪಾತದ ಕಡೆ ನೀವು ಹೋಗಬೇಕು. ಕಾವೇರಿಯ ಅಂದ ಚೆಂದವನ್ನು ನೋಡಿ ಮೈ ಮರೆಯಬೇಕು. ಇದೊಂದು ಆಕರ್ಷಣೀಯ ಸ್ಥಳ. ತೆಪ್ಪ ಸವಾರಿ ಇಲ್ಲಿನ ಬಹು ಜನಪ್ರಿಯ ಆಟ. 
ದೂರ- ಸುಮಾರು 180 ಕಿಮೀ.

4. ಚುಂಚನಕಟ್ಟೆ ಜಲಪಾತ
ಮೈಸೂರಿಗೆ ಹೋಗುವ ಐಡಿಯಾ ನಿಮಗಿದ್ದರೆ ಮೈಸೂರಿಗೆ ಈ ಜಲಪಾತ ತುಂಬಾ ಹತ್ತಿರದಲ್ಲಿದೆ. ಬೆಂಗಳೂರಿಂದ ಹೋಗುವುದಾದರೂ ಅಂಥಾ ದೂರವೇನಿಲ್ಲ. ಈ ತಾಣಕ್ಕೆ ಒಂದ್ಸಲ ಕಾಲಿಟ್ಟರೆ ನಿಮ್ಮನ್ನೇ ನೀವು ಮರೆತುಹೋಗುತ್ತೀರಿ. ಪ್ರಕೃತಿ ಮಡಿಲಲ್ಲಿ ಕೂರುವುದೆಂದರೆ ಕಳೆದುಹೋಗುವುದೆಂದೇ ಲೆಕ್ಕ.
ದೂರ- ಸುಮಾರು 210 ಕಿಮೀ.

5. ಮುತ್ಯಾಲ ಮಡು ಜಲಪಾತ
ಆನೆಕಲ್‌ ಸಮೀಪ ಇರೋ ಈ ಚಂದದ ತಾಣಕ್ಕೆ ಟ್ರೆಕ್ಕಿಂಗ್‌ ಮಾಡೋಕೆಂದೇ ಹೋಗುವವರಿದ್ದಾರೆ. ಒಬ್ಬರು ಇಬ್ಬರು ಹೋಗುವುದಕ್ಕಿಂತ ಗುಂಪಾಗಿ ಹೋದರೆ ಅದರ ಮಜವೇ ಬೇರೆ. ಹಾಗಾಗಿ ಈ ತಾಣಕ್ಕೆ ಹೋಗುವಾಗ ಫ್ರೆಂಡ್ಸ್‌ ಗುಂಪು ಕಟ್ಟಿಕೊಂಡು ಹೋಗಿ ಖುಷಿ ಪಡಿ.
ದೂರ- ಸುಮಾರು 40 ಕಿಮೀ.

6. ಮಲ್ಲಳ್ಳಿ ಜಲಪಾತ
ಕೊಡಗಿನಲ್ಲಿರುವ ಅತ್ಯಂತ ಚೆಂದದ ಜಲಪಾತಗಳಲ್ಲಿ ಇದು ಒಂದು. ದಟ್ಟ ಕಾನನ ಮಧ್ಯೆ ಇರುವ ಈ ಜಲಪಾತವನ್ನು ನೋಡಲು ಹೋದರೆ ನೀರಿನ ಸದ್ದನ್ನು ಕೇಳುವುದೇ ಹಬ್ಬ. ಅದರ ಜೊತೆಗೆ ಕಾಡಿನ ಸದ್ದನ್ನು ಆಲಿಸುತ್ತಾ ನಿಂತರೆ ಹೊತ್ತು ಸರಿಯುವುದೇ ಗೊತ್ತಾಗದು. ಲೈಫ್ಟೈಮ್‌ ಅನುಭವ ಅದು.
ದೂರ- ಸುಮಾರು 250 ಕಿಮೀ.     

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.