ದಸರಾ ಗೊಂಬೆ ಹಬ್ಬದಲ್ಲಿ ಮದುವೆ ಥೀಮ್‌


Team Udayavani, Oct 13, 2018, 3:30 PM IST

2556.jpg

ವರಪೂಜೆ, ಗೌರಿ ಪೂಜೆ, ಕನ್ಯಾದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ಬಣ್ಣ ಬಣ್ಣದ ವಸ್ತ್ರ ಧರಿಸಿದ ವಧೂ- ವರರು ಹಸೆಮಣೆಯೇರಲು ಸಜ್ಜಾಗಿದ್ದಾರೆ. ಇನ್ನು ಹತ್ತು ದಿನಗಳ ಕಾಲ ಈ ಮನೆಯಲ್ಲಿ ಮದುವೆಯ ಗೌಜು- ಗದ್ದಲ, ಬಂದು ಹೋಗುವವರ ಗಡಿಬಿಡಿ. ಯಾರ ಮದುವೆ ಅಂತೀರಾ? ಉತ್ತರಹಳ್ಳಿಯ “ಸ್ಕಂದ’ ನಿಲಯದಲ್ಲಿ ಗೊಂಬೆಗಳ ಮದುವೆ ನಡೆಯುತ್ತಿದೆ. ನವರಾತ್ರಿಯ ಸಂಪ್ರದಾಯ ಗಳಲ್ಲಿ ಒಂದಾದ “ಗೊಂಬೆ ಪೂಜೆ’ಯ ಅಂಗವಾಗಿ ಈ ಮದುವೆ ನಡೆಯುತ್ತಿದ್ದು, ಪಟ್ಟದ ಗೊಂಬೆಗಳ ಜೊತೆಗೆ ಸುಮಾರು 800ಕ್ಕೂ ಹೆಚ್ಚು ಗೊಂಬೆಗಳು ಪ್ರದರ್ಶನ ಕಾಣುತ್ತಿವೆ

ಉತ್ತರಹಳ್ಳಿಯ ಚಂದ್ರಶೇಖರ್‌
ಕೆ.ಎಸ್‌. ಕುಟುಂಬ ಬಹಳ ಹಿಂದಿನಿಂದಲೂ, ನವರಾತ್ರಿ ಗೊಂಬೆ ಪೂಜೆ ನಡೆಸುತ್ತಾ ಬಂದಿದೆ. ಅವರ ತಂದೆಯ ಕಾಲದಿಂದಲೂ ಆಚರಣೆಯಲ್ಲಿರುವ ಗೊಂಬೆ ಪೂಜೆ, ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ. ಒಂದು ದೊಡ್ಡ ಕೋಣೆಯನ್ನು ಗೊಂಬೆಗಳಿಗೇ ಬಿಟ್ಟುಕೊಡಲಾಗಿ ದ್ದು, ಹತ್ತು ದಿನಗಳ ಕಾಲ ಅಲ್ಲಿ ಗೊಂಬೆಗಳದ್ದೇ ದರ್ಬಾರ್‌! ಈ ಮನೆಯಲ್ಲಿ ಎಲ್ಲರಿಗೂ ಗೊಂಬೆಗಳ ಮೇಲೆ ಅದೇನೋ ಪ್ರೀತಿ. ಮಾಲ್‌ಗೇ ಹೋಗಲಿ, ಟೂರ್‌ಗೆà ಹೋಗಲಿ, ಎಲ್ಲಾದರೂ ಚಂದದ ಗೊಂಬೆಯನ್ನು ಕಂಡರೆ ಮನೆಗೆ ತರದೇ ಬಿಡುವುದಿಲ್ಲ. ಇವರ ಗೊಂಬೆ ಸಂಗ್ರಹಾಲಯದಲ್ಲಿ 3 ಸಾವಿರ ಗೊಂಬೆಗಳಿವೆ!

ಪ್ರತಿ ವರ್ಷವೂ ಹೊಸ ಪರಿಕಲ್ಪನೆ
ಮೊದಲೆಲ್ಲಾ ಎಲ್ಲರ ಮನೆಗಳಂತೆ ಇವರೂ ಬರೀ ಪಟ್ಟದ ಗೊಂಬೆಗಳನ್ನಿಟ್ಟು ಪೂಜಿಸುತ್ತಿದ್ದರು. ಆದರೆ, ಕಳೆದ ಹತ್ತು ವರ್ಷಗಳಿಂದ, ಪ್ರತಿ ವರ್ಷವೂ ಒಂದು ಹೊಸ ಥೀಂ ಇಟ್ಟುಕೊಂಡು, ಆ ಪ್ರಕಾರ

ಗೊಂಬೆ ಪೂಜೆ- ಪ್ರದರ್ಶನ ಮಾಡುತ್ತಾರೆ. ವೆಂಕಟೇಶ ಕಲ್ಯಾಣ, ತಿರುಪತಿ ದೇವಸ್ಥಾನ, ಶೃಂಗೇರಿ ಶಾರದಾಂಬ, ಕೊಲ್ಲೂರು ಮೂಕಾಂಬಿಕೆ, ಕಮಲಶಿಲೆಯ ಬ್ರಾಹ್ಮಿ ದುರ್ಗಾ ಪರಮೇಶ್ವರಿ… ಹೀಗೆ ವಿವಿಧ ಪರಿಕಲ್ಪನೆಯಲ್ಲಿ ಗೊಂಬೆಗಳನ್ನು ಜೋಡಿಸಿ, ಪೂಜೆ ಮಾಡಿದ್ದಾರೆ.

ಮದುವೆಯ ಗಡಿಬಿಡಿ
ಈ ಬಾರಿ ಗಂಡು- ಹೆಣ್ಣು ಪಟ್ಟದ ಗೊಂಬೆಯ ಮದುವೆ ನಡೆಯುತ್ತಿದೆ. ಕಲ್ಯಾಣ ಮಂಟಪ ಅಲಂಕಾರ, ವಾಲಗ, ಗೌರಿ ಪೂಜೆ, ವರಪೂಜೆ, ಮದರಂಗಿ ಶಾಸ್ತ್ರ, ಕಾಶೀಯಾತ್ರೆ, ಕನ್ಯಾದಾನ, ಮೆರವಣಿಗೆ… ಹೀಗೆ ಎಲ್ಲ ಸಂಪ್ರದಾಯಗಳನ್ನೂ ಬಿಂಬಿಸುವ ಗೊಂಬೆಗಳನ್ನು ಕ್ರಮಬದಟಛಿವಾಗಿ ಜೋಡಿಸಲಾಗಿದೆ.

ಹಬ್ಬ ಮುಗಿದ ನಂತರ…
ದಸರಾ ಸಂಭ್ರಮ ಮುಗಿದ ಮೇಲೆ, ಎಲ್ಲ ಗೊಂಬೆಗಳನ್ನು ಜೋಪಾನವಾಗಿ ಎತ್ತಿ ಇಡಬೇಕು. ಪ್ರತಿಯೊಂದು ಗೊಂಬೆಗಳನ್ನೂ ಒರೆಸಿ, ಹತ್ತಿ ಅಥವಾ ಬಟ್ಟೆಯಲ್ಲಿ ಸುತ್ತಿ, ಪ್ರತ್ಯೇಕ ಬಾಕ್ಸ್‌ಗಳಲ್ಲಿ ಇಡಲಾಗುತ್ತದೆ. ಪ್ರತಿ ಬಾಕ್ಸ್‌ನ ಮೇಲೂ, ಒಳಗಿರುವ ಗೊಂಬೆಯ ಹೆಸರು ಬರೆಯುತ್ತಾರೆ.

ಕೂಡು ಕುಟುಂಬ
ಚಂದ್ರಶೇಖರ್‌ ಅವರದ್ದು ಕೂಡು ಕುಟುಂಬ. ಅವರು ಹಾಗೂ ಪತ್ನಿ ಇಂದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರೆ, ತಮ್ಮ ಸತೀಶ್‌ ಹಾಗೂ ಹೆಂಡತಿ ಸವಿತಾ ಸತೀಶ್‌, ಸಾಫ್ಟ್ವೇರ್‌ ಎಂಜಿನಿಯರ್‌ಗಳು. ಕೆಲಸದೊತ್ತಡ, ಟೈಮ್‌ ಇಲ್ಲ ಅಂತೆಲ್ಲಾ ಯಾವತ್ತೂ ಸಂಪ್ರದಾಯವನ್ನು ಮರೆಯದ ಇವರು, ದಸರಾಕ್ಕೂ ಮೊದಲಿನ ಒಂದು ತಿಂಗಳು, ಪ್ರತಿ ರಾತ್ರಿ ಹನ್ನೆರಡವರೆಗೆ ಒಟ್ಟಾಗಿ ಸೇರಿ ಪೂಜೆಗೆ ಸಿದಟಛಿತೆ ಮಾಡಿಕೊಳ್ಳುತ್ತಾರೆ. ಪ್ರತಿ ಬಾರಿಯ ಪ್ರದರ್ಶನಕ್ಕೆ 30-35 ಸಾವಿರ ಖರ್ಚು ಮಾಡುತ್ತಾರೆ.

ಹತ್ತು ದಿನವೂ ಪೂಜೆ
ಮೊದಲ ದಿನ ಕಲಶವನ್ನಿಟ್ಟು ಪೂಜೆ ಪ್ರಾರಂಭಿಸಿದರೆ, ಮುಂದಿನ ಹತ್ತು ದಿನವೂ ಗೊಂಬೆಗಳ ಪೂಜೆ ನಡೆಯುತ್ತದೆ. ಕೊನೆಯ ದಿನ ಪಟ್ಟದ ಗೊಂಬೆಗಳಿಗೆ ಆರತಿ ಮಾಡಿ, ಕಲಶವನ್ನು ತೆಗೆದು, ಗೊಂಬೆಗಳನ್ನು ಮಲಗಿಸಿಬಿಟ್ಟರೆ ಪೂಜೆ ಮುಗಿದಂತೆ.ಗೊಂಬೆಗಳನ್ನು ನೋಡಲು ಬರುವ ಸ್ನೇಹಿತರಿಗೆ ಬನ್ನಿ, ತಾಂಬೂಲ ನೀಡುವ  ಸಂಪ್ರದಾಯವೂ ಇದೆ.

ಪುಟಾಣಿ ಗೊಂಬೆಮನೆ
ಮನೆಯ ಕಿರಿಯ ಸದಸ್ಯೆ, 6ನೇ ತರಗತಿಯ ಧೃತಿ ಕೂಡ ಗೊಂಬೆಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾಳೆ. ಅಷ್ಟೇ ಅಲ್ಲದೆ, ಆಕೆಗೆಂದೇ ಒಂದಷ್ಟು ಗೊಂಬೆ ಹಾಗೂ ಪ್ರತ್ಯೇಕ ಜಾಗವನ್ನು ಬಿಟ್ಟು ಕೊಡಲಾಗಿದ್ದು, ತನ್ನ ಕ್ರಿಯೇಟಿವಿಟಿಗೆ ತಕ್ಕಂತೆ ಪುಟಾಣಿ ಗೊಂಬೆಗಳ ಶಾಲೆಯನ್ನು ರೂಪಿಸಿದ್ದಾಳೆ.

ಗೊಂಬೆಮನೆ? ನಂ.992, ಸ್ಕಂದ, 29ನೇ ಮೇನ್‌, ಪೂರ್ಣಪ್ರಜ್ಞ ಲೇಔಟ್‌, ಉತ್ತರಹಳ್ಳಿ

ಪ್ರಿಯಾಂಕ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.