ಹೊಲದಲ್ಲಿ ಗರಿಕೆ ಕಳೆ

ಕೃಷಿ ಡಾಕ್ಟರ್‌; ಸಮಸ್ಯೆಗೊಂದು ಪರಿಹಾರ

Team Udayavani, Jan 6, 2020, 4:00 AM IST

1

ನಮ್ಮ ಹೊಲದಲ್ಲಿ ಗರಿಕೆ (ಜೇಕು) ಸಮಸ್ಯೆ ತುಂಬಾ ದಿನಗಳಿಂದ ಇದೆ. ಎಷ್ಟೆ ಉಳುಮೆ ಮಾಡಿದರೂ ಹೋಗಲಾಡಿಸಲು ಆಗುತ್ತಿಲ್ಲ.
– ನಾಗರಾಜ ಗೋಣೆಪ್ಪನವರ, ಹಡಗಲಿ, ಬಳ್ಳಾರಿ

ಪರಿಹಾರ-
ಕಳೆ ಮುಖದಲ್ಲಿದ್ದರೆ ಚೆನ್ನ, ಆದರೆ ಹೊಲದಲ್ಲಿ ಬೆಳೆವ ಕಳೆಯಿಂದ ನಷ್ಟವೇ ಹೆಚ್ಚು. “ಗರಿಕೆ’ ಬಹು ಸಮಸ್ಯಾತ್ಮಕ ಬಹುವಾರ್ಷಿಕ ಕಳೆಯಾಗಿದೆ. ಬೀಜಗಳಿಂದ ನೆಲದೊಳಗಿನ ಕಾಂಡದ ತುಂಡುಗಳಿಂದಲೂ, ಗರಿಕೆ ಬೆಳೆಯುವುದು. ಆದುದರಿಂದ ಉಳುಮೆಯಂಥ ಬೇಸಾಯ ಕ್ರಮಗಳಿಂದ ಅದರ ಹತೋಟಿ ಕಷ್ಟ. ಈ ಕ್ರಮಗಳಿಂದ ತಾತ್ಕಾಲಿಕ ಮುಕ್ತಿ ದೊರೆಯುತ್ತದೆ. ಕೆಲ ಸಮಯದ ನಂತರ ಗರಿಕೆ ಮತ್ತೆ ಬೆಳೆಯುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಎಂದರೆ ಕೀಟನಾಶಕ ಸಿಂಪಡಣೆ. ಅದೂ ಮೂರು ಬಾರಿ ಮಾಡಬೇಕಾಗುತ್ತದೆ. ಈ ಕಳೆ (ಕರಿಕೆ/ ಜೇಕು) ಹಸಿರಾಗಿದ್ದಾಗ ಪ್ರತಿ ಲೀಟರ್‌ ನೀರಿಗೆ 12- 15 ಮಿ.ಲೀ. ಗ್ಲೆ„ಫೋಸೇಟ್‌ 41 ಇ.ಸಿ. ಅಥವಾ ಪ್ಯಾರಾಕ್ಟಾಟ್‌ 24 ಇ.ಸಿ. ಹಾಗೂ 20 ಗ್ರಾಂ. ಯೂರಿಯಾವನ್ನು ಬೆರೆಸಿ ಡಬ್ಲೂ ಎಫ್.ಎನ್‌.40 ಅಥವಾ ವಿ.ಎಲ್‌.ವಿ 200 ನಾಝಲ್‌ಅನ್ನು ಕೈಚಾಲಿತ ಪಂಪಿನಿಂದ ಮೂರು ಬಾರಿ ಸಿಂಪರಣೆ ಮಾಡಬೇಕು.

ಮೊದಲನೇ ಸಿಂಪರಣೆಯನ್ನು ಮುಂಗಾರು ಮಳೆಯಾದ ನಂತರ ಹೆಚ್ಚು ಹಸುರಾಗಿದ್ದಾಗ, ಗರಿಕೆ ಮಾತ್ರ ತೊಯುವಂತೆ ಚೆನ್ನಾಗಿ ಸಿಂಪಡಣೆ ಮಾಡಬೇಕು. ಎರಡನೇ ಸಿಂಪರಣೆಯು ಮೊದಲನೆಯ ಸಿಂಪರಣೆಯನ್ನು 3 ತಿಂಗಳ ನಂತರ (90 ದಿನಗಳು) ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು.

ಮೂರನೆ ಹಾಗೂ ಕೊನೆಯ ಸಿಂಪಡಣೆಯನ್ನು ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು. ಕಳೆನಾಶಕ ಸಿಂಪರಣೆ ಮಾಡಿದ 15ರಿಂದ 20 ದಿನಗಳ‌ ನಂತರ ಯಾವುದೇ ಬೆಳೆಯನ್ನು ಬೆಳೆಯಬಹುದು. ಈ ಸಿಂಪಡಣೆ ಮಾಡುವಾಗ ಯಾವುದೇ ಬೆಳೆಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು. ನಂತರ ಸಿಂಪಡಕವನ್ನು ಚೆನ್ನಾಗಿ ತೊಳೆದು ಇಡಬೇಕು. ಕಳೆನಾಶಕಗಳನ್ನು ಸಿಂಪಡಣೆ ಮಾಡಲು ಪ್ರತ್ಯೇಕ ಸಿಂಪಡಕ ಇಡುವುದು ಸೂಕ್ತ.
ಸಂಪರ್ಕ: [email protected]

– ಡಾ. ಅಶೋಕ್‌ ಪಿ., ಹಿರಿಯ ಕೃಷಿ ವಿಜ್ಞಾನಿ

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.