ಮೀನಿನ ಕಥೆ


Team Udayavani, Dec 27, 2018, 6:00 AM IST

24.jpg

ಒಂದು ಕೆರೆಯಲ್ಲಿ ಮೂರು ಮೀನುಗಳಿದ್ದವು. ಆ ಮೂರು ಮೀನುಗಳ ಆಲೋಚನೆಗಳೂ ಬೇರೆ ಬೇರೆ ರೀತಿ ಇದ್ದವು. ಮೊದಲನೆಯ ಮೀನು, ಮುಂದೆ ನಡೆಯಬಹುದಾದ ಘಟನೆಗೆ ಮುಂಚಿತವಾಗಿಯೇ ತಯಾರಾಗಿರುತ್ತಿತ್ತು. ಎರಡನೆಯ ಮೀನು, ಪರಿಸ್ಥಿತಿ ಬಂದಾಗ ಅದನ್ನು ಎದುರಿಸುತ್ತಿತ್ತು. ಮೂರನೆಯ ಮೀನಿದೆಯಲ್ಲ, ಘಟನೆ ನಡೆದಾಗಲೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಸುಮ್ಮನೆ ಇದ್ದುಬಿಡುತ್ತಿತ್ತು. 

ಒಂದು ದಿನ, ಆ ಮೀನುಗಳು ಕೆಲವು ಬೆಸ್ತರು ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡವು. ಬೆಸ್ತರು ಮಾರನೆಯ ದಿನ ಈ ಕೆರೆಯಲ್ಲಿ ಬಲೆ ಹಾಕಿ ಮೀನುಗಳನ್ನು ಹಿಡಿಯುವ ಯೋಚನೆಯಲ್ಲಿದ್ದಾರೆಂದು ತಿಳಿಯಿತು. 

ಆಗ ಮೊದಲನೆಯ ಮೀನು, “ಬೆಸ್ತರು ಬರುವುದಕ್ಕೆ ಮೊದಲೇ ನಾವಿಲ್ಲಿಂದ ಹೊರಟು ಹೋಗುವುದು ಒಳ್ಳೆಯದು’ ಎಂದಿತು. ಎರಡನೆಯ ಮೀನು, “ಬೆಸ್ತರು ಬಲೆ ಬೀಸಲಿ. ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ನನಗೆ ಗೊತ್ತು’ ಎಂದಿತು. “ನಮ್ಮ ಹಣೆಯಲ್ಲಿ ಏನಾಗಬೇಕೆಂದು ಬರೆದಿದೆಯೋ, ಅದೇ ಆಗುತ್ತೆ. ಆದ್ದರಿಂದ ನಾನಂತೂ ಎಲ್ಲೂ ಹೋಗುವುದಿಲ್ಲ’ ಎಂದಿತು ಮೂರನೆ ಮೀನು. 

ಮೊದಲನೆಯ ಮೀನು ಉಳಿದಿಬ್ಬರ ಜತೆ ವಾದ ಮಾಡುತ್ತ ಕೂರಲಿಲ್ಲ. ಕೆರೆಯಿಂದ ಹರಿದುಹೋಗುತ್ತಿದ್ದ ಒಂದು ಸಣ್ಣ ಕಾಲುವೆಯ ಮೂಲಕ ಈಜಿಕೊಂಡು ಅದು ಹೊರಟು ಹೋಯಿತು. ಮಾರನೆಯ ದಿನ ಬೆಸ್ತರು ಬರುವ ಹೊತ್ತಿಗೆ ಮೊದಲನೆ ಮೀನು ಇನ್ನೊಂದು ಕೆರೆಯಲ್ಲಿ ನೆಲೆಸಿತ್ತು. ಎರಡನೆ ಮತ್ತು ಮೂರನೆಯ ಮೀನುಗಳು ಬಲೆಯಲ್ಲಿ ಸಿಕ್ಕಿಬಿದ್ದವು. ಎರಡನೆ ಮೀನು ಸತ್ತ ಹಾಗೆ ಬಿದ್ದುಕೊಂಡಿತು. ಸತ್ತಮೀನನ್ನು ಬೆಸ್ತರು ತೆಗೆದು ಕೆರೆಗೆ ಮತ್ತೆ ಬಿಸಾಡಿದರು. ಎರಡನೆಯ ಮೀನಿಗೂ ಅದೇ ಬೇಕಾಗಿತ್ತು. ಆದದ್ದು ಆಗಲಿ ಎಂದು ಸುಮ್ಮನೇ ಇದ್ದ ಮೂರನೆಯ ಮೀನು ಬೆಸ್ತರ ಆಹಾರವಾಯಿತು.

ಕೃಪೆ: ಓರಿಯೆಂಟಲ್‌ ಲಾಂಗ್‌ಮನ್‌

ಟಾಪ್ ನ್ಯೂಸ್

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.