ಪುರಾಣ ಕತೆ: ಇಂದ್ರಪೂಜೆ


Team Udayavani, Jun 1, 2017, 9:56 AM IST

puraana-kathe2.jpg

ಒಮ್ಮೆ ಬೃಂದಾವನದಲ್ಲಿ ಒಂದು ಉತ್ಸವಕ್ಕೆ ಸಡಗರದಿಂದ ಸಿದ್ಧತೆಗಳಾಗುತ್ತಿದ್ದುದನ್ನು ಕೃಷ್ಣನು ಕಂಡ. ತನ್ನ ತಂದೆ ನಂದನನ್ನು “ಅಪ್ಪ ಯಾವ ಉತ್ಸವಕ್ಕೆ ಈ ಎಲ್ಲಾ ಸಡಗರ?’ ಎಂದು ಕೇಳಿದ. ನಂದನು “ಮಗೂ ಈ ಸಿದ್ಧತೆ ಎಲ್ಲ ಇಂದ್ರಪೂಜೆಗಾಗಿ. ಇಂದ್ರನು ನಮಗೆ ಕಾಲಕಾಲಕ್ಕೆ ಮಳೆಯನ್ನು ಸುರಿಸುವುದರಿಂದ ನಮಗೆ ಹುಲ್ಲು ಬೆಳೆಗಳು ಎಲ್ಲ ಲಭ್ಯವಾಗುತ್ತದೆ. ಆದುದರಿಂದ ಪ್ರತಿ ವರ್ಷವೂ ಇಂದ್ರಪೂಜೆಯನ್ನು ಮಾಡುತ್ತೇವೆ’ ಎಂದು ವಿವರಿಸಿದ.

ಕೃಷ್ಣನು “ಅಪ್ಪಾ ನಾವು ಇಂದ್ರನನ್ನು ಪೂಜಿಸಬೇಕು ಎಂದು ನನಗೆ ತೋರುವುದಿಲ್ಲ. ನಾವು ಮಾಡುವ ಕರ್ಮವು ಫ‌ಲವನ್ನು ಕೊಡುತ್ತದೆ. ನಮ್ಮ ಕಾರ್ಯಕ್ಕೆ ಸರಿಯಾಗಿ ಪ್ರತಿಫ‌ಲ. ಹಾಗೆಯೇ ಇಂದ್ರನೂ ಅ ಮಳೆಯನ್ನು ಸುರಿಸುವುದು. ನಿಜವಾಗಿ ನಮಗೆ ಉಪಕಾರವಾಗುವುದು ಕಾಡು, ಬೆಟ್ಟಗಳಿಂದ ಗೋವುಗಳಿಂದ. ನಾವು ಗೊಲ್ಲರು. ಕಾಡು ಬೆಟ್ಟಗಳಲ್ಲಿ ವಾಸ ಮಾಡುತ್ತೇವೆ. ನಮ್ಮ ಬದುಕಿಗೆ ಗೋವುಗಳೇ ಆಧಾರ. ಆದುದರಿಂದ ನಾವು ಕಾಡು, ಬೆಟ್ಟಗಳನ್ನು ಗೋವುಗಳನ್ನು ಪೂಜಿಸಬೇಕು.’ ಎಂದ. ನಂದನಿಗೂ ಈ ಮಾತು ಸರಿ ಎನಿಸಿತು. ಆ ವರ್ಷ ಗೋವರ್ಧನ ಗಿರಿಗೂ ಗೋವುಗಳಿಗೂ ಪೂಜೆ ಸಲ್ಲಿಸಬೇಕೆಂದು ತೀರ್ಮಾನಿಸಲಾಯಿತು. ಹೀಗೆ ಇಂದ್ರಪೂಜೆಯ ಬದಲು ಗೋವರ್ಧನ ಪೂಜೆ ನಡೆಯಿತು. ಉತ್ಸವವು ಬಹು ಸಂಭ್ರಮದಿಂದ ಜರುಗಿತು. ಗೋಪಾಲರು ಭಕ್ತಿಯಿಂದ ಗೋವರ್ಧನ ಗಿರಿಗೆ ಮತ್ತು ಗೋವುಗಳಿಗೆ ಪೂಜೆ ಮಾಡಿದರು. 

ಇಂದ್ರನಿಗೆ ಇದರಿಂದ ಕೋಪ ಬಂದಿತು. ತನಗೆ ಪೂಜೆ ತಪ್ಪಿತು ಪೂಜೆಯನ್ನು ತಪ್ಪಿಸಿದವನು ಏಳು ವರ್ಷದ ಹುಡುಗ. ಇವನ ಮಾತನ್ನು ಕೇಳಿ ಬೃಂದಾವನದವರು ತನಗೆ ಅಪಮಾನ ಮಾಡಿದರು. ಇಂದ್ರನು ಮೋಡಗಳಿಗೆ ಬೃಂದಾವನದ ಮೇಲೆ ಭಯಂಕರವಾದ ಮಳೆಯನ್ನು ಸುರಿಸುವಂತೆ ಅಪ್ಪಣೆ ಮಾಡಿದ. ಭೀಕರವಾದ ಮಳೆ ಪ್ರಾರಂಭವಾಯಿತು. ಗೋವುಗಳೆಲ್ಲ ನೆನೆದು ಗಡಗಡ ನಡುಗಿದವು. ಮಳೆಯ ಜೊತೆಗೆ ಭಯಂಕರ ಬಿರುಗಾಳಿ. ಎಲ್ಲರೂ ಕೃಷ್ಣನ ಮೊರೆ ಹೊಕ್ಕರು. ಇದು ಕೋಪಗೊಂಡ ಇಂದ್ರನ ಕೃತ್ಯ ಎಂದು ಕೃಷ್ಣನಿಗೆ ಅರ್ಥವಾಯಿತು. ಅವನು ಗೋವರ್ಧನಗಿರಿಯನ್ನೇ ತನ್ನ ಬೆರಳಲ್ಲಿ ಎತ್ತಿಹಿಡಿದ. ಅದೇ ಗೊಲ್ಲರಿಗೆ ಕೊಡೆಯಾಯಿತು. ಜನರು, ಗೋವುಗಳು, ಎಲ್ಲರೂ ಬೆಟ್ಟದ ಕೆಳಗೆ ಆಶ್ರಯ ಪಡೆದರು. ಇಂದ್ರನು ಮಳೆಯನ್ನು ಸುರಿಸಿಯೇ ಸುರಿಸಿದ. ಆದರೆ ಬೃಂದಾವನದಲ್ಲಿ ಕೆಲಸ ಕಾರ್ಯಗಳು ಎಂದಿನಂತೆ ಸಾಗಿದ್ದವು. 

ಇಂದ್ರನಿಗೆ ಜಾnನೋದಯವಾಯಿತು. ನಾಚಿಕೆಯಾಯಿತು. ಸ್ವರ್ಗದಿಂದ ಇಳಿದು ಬಂದು ಕೃಷ್ಣನ ಕ್ಷಮೆ ಕೇಳಿದ. 

ಎಲ್‌. ಎಸ್‌. ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.