ಅಂಗಳದೊಳಗೆ ಚೆಂಡು!
Team Udayavani, Feb 22, 2018, 6:30 AM IST
ಚಂದುವಿಗೆ ಕ್ರಿಕೆಟ್ ಅಂದ್ರೆ ಪ್ರಾಣ. ದಿನಾ ಸಂಜೆ ತನ್ನದೇ ಸಣ್ಣ ಗ್ಯಾಂಗ್ ಜೊತೆ ಗಲ್ಲಿ ಕ್ರಿಕೆಟ್ ಆಡ್ತಿದ್ದ. ಸಣ್ಣವನೆಂದು ಎಲ್ಲರೂ ಇವನಿಗೆ ಚೆಂಡು ಎತ್ತಿಕೊಂಡು ಬರಲು ಹೇಳುತ್ತಿದ್ದರು. ಇವರ ಆಟಕ್ಕೆ ತಲೆನೋವಾಗಿದ್ದು ಎದುರಿನ ಮನೆಯ ಅಜ್ಜ. ಅವರ ದೊಡ್ಡ ಕಾಂಪೌಂಡ್ನೊಳಗೆ ಚೆಂಡು ಬಿದ್ದರೆ, ಮಕ್ಕಳಿಗೆ ಒಳಗೆ ಬರಲೇ ಬಿಡುತ್ತಿರಲಿಲ್ಲ. ಹೀಗೆ ತಿಂಗಳಲ್ಲಿ ನಾಲ್ಕೈದು ಬಾಲ್ ಕಳೆಯುತ್ತಿತ್ತು.
ಆಗ ಚಂದುವಿಗೊಂದು ಉಪಾಯ ಹೊಳೆಯಿತು. ದಿನಾ ಬೆಳಗ್ಗೆ ಪೇಪರ್ನವನು ಅಜ್ಜನ ಮನೆಯೆದುರು ಪೇಪರ್ ಎಸೆಯುವುದನ್ನು ಚಂದು ನೋಡಿದ್ದ. ಮರುದಿನ ಬೆಳಗ್ಗೆ ಅಜ್ಜ ವಾಕಿಂಗ್ ಮುಗಿಸಿ ಬರುವಾಗ ಚಂದು ಪೇಪರ್ ಹಿಡಿದು ನಿಂತಿದ್ದ. “ತಾತ, ತಗೊಳಿ ನಿಮ್ ಪೇಪರ್. ಹೊರಗೆ ಎಸೆದು ಹೋಗಿದ್ರು’ ಅಂತ ಕೊಟ್ಟ. ಅಜ್ಜನಿಗೆ ಖುಷಿಯಾಯ್ತು. ಆಮೇಲಿಂದ ಅಜ್ಜ ಯಾವತ್ತೂ ಮಕ್ಕಳಿಗೆ ಬಾಲ್ ಕೊಡಲು ಸತಾಯಿಸಲೇ ಇಲ್ಲ.
* ಪ್ರಿಯಾಮಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ