ರೆಕ್ಕೆ ಅಲುಗಿಸದೆ ನೂರಾರು ಕಿ.ಮೀ ಕ್ರಮಿಸುವ ಪಕ್ಷಿ

ಕಣ್‌ ತೆರೆದು ನೋಡಿ!

Team Udayavani, Apr 25, 2019, 6:15 AM IST

China-Bird

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ಉಳಿತಾಯ ಎನ್ನುವುದು ದುಡ್ಡಿನ ವಿಷಯದಲ್ಲಷ್ಟೇ ಅಲ್ಲ, ಇತರೆ ವಿಚಾರಗಳಲ್ಲೂ ಬಳಕೆಗೆ ಬರುತ್ತದೆ. ಉದಾಹರಣೆಗೆ, “ಎನರ್ಜಿ ವೇಸ್ಟ್‌ ಮಾಡೋಕೆ’ ಇಷ್ಟ ಇಲ್ಲ ಎನ್ನುವ ಮಾತು ಕೇಳಿರಬಹುದು. ಸುಖಾಸುಮ್ಮನೆ ಜಗಳ ಮಾಡಲು ಇಷ್ಟವಿಲ್ಲದಾಗ ಈ ಮಾತು ಹೇಳುತ್ತಾರೆ. ಆದರೆ, ಎನರ್ಜಿ ಉಳಿತಾಯದ ವಿಷಯ ತುಂಬಾ ದೂರಕ್ಕೆ ಸಾಗುತ್ತದೆ.

ಸೈಕಲ್‌ ತುಳಿಯುವಾಗ ತಗ್ಗು ರಸ್ತೆ ಸಿಕ್ಕರೆ ಆನಂದವೋ ಆನಂದ. ಏಕೆಂದರೆ, ಅಲ್ಲಿಯವರೆಗೆ ಪೆಡಲ್‌ ತುಳಿದೂ ತುಳಿದು ಬಸವಳಿದ ನಮಗೆ ತಗ್ಗಿನಲ್ಲಿ ಪೆಡಲ್‌ ತುಳಿಯದೇ ಸೈಕಲ್‌ ನಡೆಸಬಹುದಲ್ಲ ಎಂಬುದೇ ಖುಷಿ. ಇದನ್ನೂ ಎನರ್ಜಿ ಉಳಿತಾಯದ ಖಾತೆಗೆ ಸೇರಿಸಬಹುದು. ನಾವೋ, ತಗ್ಗಿನಲ್ಲಿ ಒಂದರ್ಧ ಕಿ.ಮೀ ಎನರ್ಜಿ ಉಳಿತಾಯ ಮಾಡಿದ್ದಕ್ಕೇ ಈ ಪರಿ ಸಂತಸಪಟ್ಟುಕೊಳ್ಳುತ್ತೇವೆ.

ಆ ಲೆಕ್ಕದಲ್ಲಿ ಅಲ್ಬಟ್ರಾಸ್‌ ಎನ್ನುವ ಕಡಲ ಪಕ್ಷಿ ನಮಗಿಂತಲೂ ಸಾವಿರ ಪಾಲು ಹೆಚ್ಚು ಸಂತಸಪಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ಅದು ರೆಕ್ಕೆಯನ್ನು ಒಂದಿನಿತೂ ಮಿಟುಕಿಸದೆ 800- 900 ಕಿ.ಮೀ ದೂರವನ್ನು ಕ್ರಮಿಸುತ್ತದೆ! ಅಂಟಾರ್ಟಿಕ್‌ ಸಾಗರ ಮತ್ತು ಉತ್ತರ ಪೆಸಿಫಿಕ್‌ ಸಾಗರದಲ್ಲಿ ಈ ಪಕ್ಷಿಗಳು ಕಂಡು ಬರುತ್ತವೆ. ಸಂಶೋಧಕರು ವರ್ಷಗಳಿಂದ ಈ ಪಕ್ಷಿಯ ಬೆನ್ನು ಬಿದ್ದಿದ್ದಾರೆ. ಅದರ ಹಾರಾಟದ ರಹಸ್ಯವನ್ನು ಕೂಲಂಕಷವಾಗಿ ತಿಳಿದುಕೊಳ್ಳುವುದು ಅವರ ಉದ್ದೇಶ.

ಜಿ.ಪಿ.ಎಸ್‌ ಮತ್ತಿತರ ಆಧುನಿಕ ತಂತ್ರಜ್ಞಾನವನ್ನು ಇದಕ್ಕಾಗಿ ಬಳಸುತ್ತಿದ್ದಾರೆ. ಒಂದುವೇಳೆ, ಈ ರಹಸ್ಯವನ್ನು ತಿಳಿದುಕೊಂಡುಬಿಟ್ಟರೆ ವಿಮಾನಗಳು ಗ್ಯಾಲನ್‌ಗಟ್ಟಲೆ ಇಂಧನವನ್ನು ಉಳಿಸುವಂತೆ ಮಾಡಬಹುದು ಎನ್ನುವುದು ಅವರ ಲೆಕ್ಕಾಚಾರ. ಇದರಿಂದ ಬರೀ ಇಂಧನ ಮಾತ್ರವೇ ಅಲ್ಲ, ಮುಚ್ಚುವ ಹಂತದಲ್ಲಿರುವ ನಮ್ಮ ವಿಮಾನಯಾನ ಸಂಸ್ಥೆಗಳನ್ನು ಕೂಡಾ ಉಳಿಸಿಕೊಳ್ಳಬಹುದೇನೋ…!

ಈ ಹುಳಕ್ಕೆ ಕಣ್ಣು ಯಾಕಿಲ್ಲ?

ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಎನ್ನುವ ನಾಣ್ಣುಡಿಯನ್ನು ಕೇಳಿರಬಹುದು. ಇದು ಮಾನವ ನಿರ್ಮಿತ ಸಮಾಜದ ಸ್ಥಿತಿಯನ್ನು ಸೂಚ್ಯವಾಗಿ ತಿಳಿಸುತ್ತದೆ. ತಾರತಮ್ಯ ಎನ್ನುವುದು ನಮ್ಮಲ್ಲಿರಬಹುದು ಆದರೆ ಪ್ರಕೃತಿಯಲ್ಲಿಲ್ಲ. ಯಾವ ಜೀವಿಗೆ ಏನೇನು ಅಗತ್ಯವೋ ಅದನ್ನು ಅದರ ಭೌಗೋಳಿಕ ಪರಿಸರಕ್ಕೆ ತಕ್ಕಂತೆ, ಅಸ್ತಿತ್ವಕ್ಕೆ ಸಹಾಯವಾಗುವಂತೆ ದಯಪಾಲಿಸಿದೆ ಪ್ರಕೃತಿ.

ಸ್ಪ್ರಿಂಗ್‌ಟೇಲ್‌ ಎಂಬ ಹುಳ ಅದಕ್ಕೆ ಸಾಕ್ಷಿ. ಇಲ್ಲಿಯತನಕ ಚೇಳು ಮತ್ತು ಸಿಲ್ವರ್‌ಫಿಶ್‌ ಭೂಮಿಯ ಅತ್ಯಂತ ಆಳದಲ್ಲಿ (ಮುಕ್ಕಾಲು ಕಿ.ಮೀ) ಪತ್ತೆಯಾದ ಜೀವಿ ಎಂದೇ ಪರಿಗಣಿತವಾಗಿದ್ದವು. ಆದರೆ 2 ಕಿ.ಮೀ ಆಳದ ಗುಹೆಯಲ್ಲಿ ಸಿಕ್ಕ ಸ್ಪ್ರಿಂಗ್‌ಟೇಲ್‌ ಆ ದಾಖಲೆಯನ್ನು ಮುರಿದಿತ್ತು. ಈ ಹುಳಕ್ಕೆ ಕಣ್ಣುಗಳಿಲ್ಲ. ಬಹುತೇಕ ಜೀವಿಗಳಿಗೆ ಹುಳ ಹುಪ್ಪಟೆಗಳಿಗೆ ಕಣ್ಣುಗಳನ್ನು ದಯಪಾಲಿಸಿರುವ ಪ್ರಕೃತಿ ಇದಕ್ಕೆ ಯಾಕೆ ಕಣ್ಣುಗಳನ್ನು ನೀಡಿಲ್ಲ? ಅದಕ್ಕೆ ಕಾರಣ, ಅದು ವಾಸಿಸುವ ಪರಿಸರ.

ಭೂಮಿಯಿಂದ ಎರಡು ಕಿ.ಮೀ ಆಳದಲ್ಲಿ ಬೆಳಕು ಇಲ್ಲವೇ ಇಲ್ಲ. ಬರೀ ಕತ್ತಲು. ಅಲ್ಲಿ ಕಣ್ಣುಗಳಿದ್ದರೂ ಪ್ರಯೋಜನವಿಲ್ಲ. ಸ್ಪ್ರಿಂಗ್‌ಟೇಲ್‌ಗೆ ಕಣ್ಣುಗಳಿಲ್ಲದಿರುವುದಕ್ಕೆ ಕಾರಣ ಈಗ ತಿಳಿಯಿತಲ್ಲ?! ಯಾರಿಗೆ ಏನು ಅಗತ್ಯವೋ ಅದನ್ನು ನೀಡುವಲ್ಲಿ ಸೃಷ್ಟಿ ಹಿಂದೆ ಬಿದ್ದಿಲ್ಲ, ಅದೇ ರೀತಿ ಯಾರಿಗೆ ಏನು ಅಗತ್ಯವಿಲ್ಲವೋ ಅದನ್ನು ಕಿತ್ತುಕೊಳ್ಳುವುದರಲ್ಲಿಯೂ ಸೃಷ್ಟಿ ಹಿಂದೆ ಬಿದ್ದಿಲ್ಲ!

— ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.