ರಾಜಕುಮಾರಿಯ ಶಾಪ ವಿಮೋಚನೆ


Team Udayavani, Jan 10, 2019, 12:30 AM IST

s-7.jpg

ತ್ರಿಪುರಾ ರಾಜ್ಯದ ರಾಜಕುಮಾರಿ ಅರೋರಾ ತ್ರಿಪುರ ಸುಂದರಿಯಾಗಿದ್ದಳು. ಹಾಗೂ ಮಹಾರಾಣಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ದೇವರಿಗೆ ಪೂಜೆ ಪುನಸ್ಕಾರ ಮಾಡಿ ಪಡೆದಿದ್ದರಿಂದ ರಾಜಕುಮಾರಿ ಮೇಲೆ ಹೆಚ್ಚಿನ ಪ್ರೀತಿ ಇತ್ತು. ಅರೋರಾಗೆ ನಿದ್ದೆ ಹೋಗುವ ಶಾಪವಿತ್ತು. ಒಮ್ಮೆ ನಿದ್ದೆ ಹೋದರೆ ವಾರಗಟ್ಟಲೆ, ತಿಂಗಳುಗಟ್ಟಲೆ ಏಳುತ್ತಿರಲಿಲ್ಲ. ರಾಜ ತನ್ನ ಮಗಳ ಶಾಪ ದೂರ ಮಾಡಿದವರಿಗೆ ಇನಾಮು ಘೋಷಿಸಿದ. ದೂರ ದೇಶದಿಂದ ಮಂತ್ರವಾದಿಯೊಬ್ಬ ಬಂದು ಮಂತ್ರಿಸಿದ ಗಿಡಮೂಲಿಕೆಯನ್ನು ರಾಜಕುಮಾರಿಗೆ ಮುಟ್ಟಿಸಿದಾಕ್ಷಣ ಆಕೆಯ ಖಾಯಿಲೆ ಗುಣವಾಗಿತ್ತು. ಆದರೆ ಶಾಶ್ವತವಾಗಿ ಶಾಪ ಹೋಗಿರಲಿಲ್ಲ. ಅರೋರಾಳಿಗೆ 23 ವರ್ಷವಾದಾಗ, ಆದೇ ಗಿಡಮೂಲಿಕೆ ಮೈಗೆ ತಗುಲಿದರೆ ಇಡೀ ರಾಜ್ಯಕ್ಕೆ ಆಪತ್ತು ಒದಗುವುದೆಂದು ಅರಮನೆಯ ಜ್ಯೋತಿಷಿಗಳು ಹೇಳಿದರು. ಹೀಗಾಗಿ ರಾಜ್ಯದೆಲ್ಲೆಡೆ ಆ ಗಿಡಮೂಲಿಕೆ ಬೆಳೆಯುವುದನ್ನು ನಿಷೇಧಿಸಲಾಯಿತು.ರಾಜ ರಾಣಿ, ಅರೋರಾಳನ್ನು ಬಹಳ ಜತನದಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. 

ಅರೋರಾಗೆ 23 ವರ್ಷವಾದಾಗ ಅರಮನೆಯಲ್ಲಿ ಹುಟ್ಟುಹಬ್ಬವನ್ನು ಆಯೋಜಿಸಿದರು. ಬಹಳ ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವಿವಿಧ ರಾಜ್ಯಗಳಿಂದ ಉಡುಗೊರೆಗಳು ಬಂದವು. ಮಾರನೇ ದಿನ ಉಡುಗೊರೆಗಳ ಡಬ್ಬವನ್ನು ತೆರೆದು ನೋಡಿದಳು ಅರೋರಾ. ಶತ್ರು ಪಾಳೆಯದ ರಾಜನೊಬ್ಬ ಯಾವ ಗಿಡಮೂಲಿಕೆಯಿಂದ ತ್ರಿಪುರಾ ರಾಜ್ಯಕ್ಕೆ ಆಪತ್ತು ಒದಗುತ್ತೋ ಅದೇ ಗಿಡಮೂಲಿಕೆಯನ್ನು ಉಡುಗೊರೆಯಾಗಿ ಕಳಿಸಿದ್ದ. ಆ ಉಡುಗೊರೆಯನ್ನು ತೆರೆಯುತ್ತಲೇ ರಾಜಕುಮಾರಿ ಮತ್ತೆ ನಿದ್ದೆ ಹೋದಳು. ಆ ಕ್ಷಣವೇ ಇಡೀ ರಾಜ್ಯದವರಿಗೆಲ್ಲಾ ಶಾಪ ತಟ್ಟಿ ನಿದ್ದೆಗೆ ಶರಣಾದರು.

ಆದರೆ ವಿಧಿ ಮತ್ತಿನ್ನೇನೋ ಬರೆದಿತ್ತು. ತಿಂಗಳುಗಳ ನಂತರ ತ್ರಿಪುರಾ ರಾಜ್ಯಕ್ಕೆ ಯುವ ರಾಜಕುಮಾರನೊಬ್ಬ ಭೇಟಿ ನೀಡಿದನು. ಅಲ್ಲಿ ಎಲ್ಲರೂ ನಿದ್ದೆಗೆ ಶರಣಾಗಿರುವುದನ್ನು ಕಂಡು ಅಚ್ಚರಿಯಾಯಿತು. ಅರಮನೆಯಲ್ಲಿ ಅರೋರಾಳನ್ನು ಕಂಡು ಆಕೆಯ ಸೌಂದರ್ಯಕ್ಕೆ ಮರುಳಾದನು. ಅತ್ಯಂತ ಸುಂದರ ಹಾಗೂ ಆಕರ್ಷಣೆಯಿಂದ ಕೂಡಿದ್ದ ಅರೋರಳನ್ನು ಚುಂಬಿಸುವ ಮನಸ್ಸಾಗಿ ಅವಳ ಹತ್ತಿರ ಬಂದನು. ರಾಜಕುಮಾರನ ಚುಂಬನದಿಂದ ಅರೋರಾಳ ಶಾಪ ವಿಮೋಚನೆಯಾಯಿತು. ಇಡೀ ರಾಜ್ಯವೇ ಶಾಪಮುಕ್ತವಾಯಿತು. ರಾಜಕುಮಾರಿ ಮತ್ತು ರಾಜಕುಮಾರನ ಮದುವೆ ವೈಭವದಿಂದ ನೆರವೇರಿತು. ರಾಜ್ಯದಲ್ಲಿ ಮತ್ತೆ ಶಾಂತಿ ಸಂತಸ ನೆಲೆಸಿತು.  

ಪುಷ್ಪಾ

ಟಾಪ್ ನ್ಯೂಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.