ದೇವರು ಒಬ್ಬನೇ ಅಲ್ಲವೇನಮ್ಮಾ…?


Team Udayavani, Jul 5, 2018, 6:00 AM IST

6.jpg

ಅಂದು ಭಾನುವಾರ. ಬೆಳಿಗ್ಗೆ ಏಳು ಗಂಟೆ. ಮನೆಯಂಗಳದಲ್ಲಿದ್ದ ಹೂಗಿಡಗಳಿಂದ ಅಮ್ಮ ಹೂ ಕೊಯ್ಯುತ್ತಿದ್ದರು. ಸದ್ದಿಲ್ಲದೆ ಮಗಳು ಅನಿತ ಅಮ್ಮನ ಹಿಂದೆ ಬಂದು ನಿಂತಿದ್ದಳು. ಅಮ್ಮ ಗಮನಿಸಿರಲಿಲ್ಲ. ಹೂ ಕೊಯ್ಯುತ್ತ ಅವರು, “ಇವತ್ತೂ ಎದುರುಮನೆ ಅಜ್ಜಿ ನಮ್ಮ ಕಾಂಪೌಂಡಿನ ಹೂಗಳನ್ನು ಕಿತ್ತಿದ್ದಾರೆ. ಮುಂದಿನ ಗಿಡದಲ್ಲಿ ಒಂದು ಕೆಂಪು ದಾಸವಾಳ ಅರಳಿತ್ತು. ಛೇ..’ ಎಂದು ತಮ್ಮಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದರು.  ಅದನ್ನು ಕೇಳಿ ಪುಟ್ಟಿ “ಅಮ್ಮ, ಎದುರುಮನೆ ಅಜ್ಜಿ ತುಂಬ ಕೆಟ್ಟವರು ಅಲ್ಲವೇನಮ್ಮ?’ ಎಂದು ಕೇಳಿದಳು. ಅಮ್ಮ ಹೇಳಿದರು, “ಹಾಗೆಲ್ಲ ಹೇಳಬಾರದು ಪುಟ್ಟಿ. ಅಜ್ಜಿ ದೊಡ್ಡವರು.’ “ದೊಡ್ಡವರಾದರೆ ಏನಮ್ಮ, ಅವರು ಕಳ್ಳತನ ಮಾಡಬಹುದಾ? ಅದು ತಪ್ಪಲ್ಲವ? ಹಿಡಿದು ಪೊಲೀಸಿಗೆ ಕೊಡಬೇಕು. ನಾನೀಗಲೇ ಹೋಗಿ ಜಗಳ ಆಡಿ ಬರಿ¤àನಮ್ಮ. ನಮ್ಮ ಹೂ ನಮಗೆ ಬೇಕು.’. ಪುಟ್ಟಿ ಮುದ್ದುಮುದ್ದಾಗಿ ಜಗಳಕ್ಕೆ ತಯಾರಾಗಿದ್ದೀನಿ ಎಂದು ಹೇಳಿದಳು. ನಗೆ ಬಂದರೂ ಅದನ್ನು ತೋರಗೊಡದೆ ಅಮ್ಮ “ನಾ ಹೇಳಲಿಲ್ಲವ ಪುಟ್ಟಿà. ಹಾಗೆಲ್ಲ ದೊಡ್ಡವರ ಬಗ್ಗೆ ಕೆಟ್ಟದು ಆಡಬಾರದು ಅಂತ. ಅವರು ಹೂ ತೆಗೆದುಕೊಂಡು ಹೋಗಿರೋದು ದೇವರ ಪೂಜೆಗೆ. ನಾವು ಹೂ ಕೀಳ್ಳೋದು ಕೂಡಾ ದೇವರ ಪೂಜೆಗೆ. ಹೂ ನಮ್ಮ ಮನೆಯದಾದರೇನಂತೆ ನಮ್ಮ ದೇವರು ಒಬ್ಬನೇ ತಾನೆ? ಬಾ ಒಳಕ್ಕೆ’ ಎನ್ನುತ್ತ ಅನಿತಾಳನ್ನು ಮನೆಯೊಳಗೆ ಕರೆದುಕೊಂಡು ಬಂದರು.

ಬೆಳಗ್ಗೆ ಗಂಟೆ ಎಂಟಾಗಿತ್ತು. “ಅನಿತ ಪುಟ್ಟಿà, ಎಲ್ಲಿದ್ದೀಯ, ಸ್ನಾನಕ್ಕೆ ಬಾ’ ಎಂದು ಅಮ್ಮ ಕರೆದರು. ಅನಿತ ಎಲ್ಲೂ ಕಾಣಿಸಲಿಲ್ಲ. ಎರಡು- ಮೂರು ಬಾರಿ ಕರೆದರೂ ಅನಿತಳ ಸುಳಿವಿಲ್ಲ. ಮನೆಯ ಗೇಟು ತೆರೆದಿತ್ತು. ಆಶ್ಚರ್ಯವೆಂಬಂತೆ ಎದುರು ಮನೆ ಗೇಟು ಕೂಡ ತೆರೆದಿತ್ತು! ದೇವರಕೋಣೆಗೆ ಬಂದು ನೋಡಿದರು. ಹೂಬುಟ್ಟಿ ಕಾಣಲಿಲ್ಲ. ಅನಿತ ಏನಾದರೂ ಎದುರು ಮನೆ ಅಜ್ಜಿಯನ್ನು ನೋಡಲು ಹೋಗಿರಬಹುದೆ ಎಂದು ಅನುಮಾನಿಸಿದರು. 

ಅಜ್ಜಿಯ ಜೊತೆ ಜಗಳವಾಡಿ ಏನಾದರೂ ರಾದ್ದಾಂತ ಮಾಡಿಕೊಂಡು ಬಂದರೆ ಏನಪ್ಪ ಗತಿ ಎಂದು ಕಸಿವಿಸಿಗೊಂಡರು. ಮನೆಯವರಿಗೆಲ್ಲ ಇರಿಸು-ಮುರಿಸು ಆಗುವುದಲ್ಲಿ ಸಂಶಯವಿಲ್ಲ ಎಂದುಕೊಂಡರು. ಅನಿತಾಳನ್ನು ಕರೆದುಕೊಂಡು ಬರೋಣವೆಂದು ರಸ್ತೆ ದಾಟಿ ಅಮ್ಮ ಎದುರು ಮನೆಯ ಗೇಟಿನ ಮೂಲಕ ಒಳಹೊಕ್ಕರು. ಮುಂದಿನ ಬಾಗಿಲೂ ತೆರೆದಿತ್ತು. ಮುಂದುವರಿದು ಅಮ್ಮ ಆ ಮನೆಯ ದೇವರ ಕೋಣೆಯ ಬಳಿ ಬಂದರು. ಅಲ್ಲೊಂದು ಆಶ್ಚರ್ಯ ಕಾದಿತ್ತು. 

ಅನಿತಾ ಎದುರುಮನೆ ಅಜ್ಜಿಯ ಮಡಿಲಲ್ಲಿ ಹಾಯಾಗಿ ಕುಳಿತಿದ್ದಳು! ಅಜ್ಜಿ ಜೊತೆ ಏನೋ ಹರಟುತ್ತಿದ್ದಾಳೆ? ಮುಗಳ್ನಗುತ್ತ ಅಜ್ಜಿ ಅನಿತಳಿಗೆ ಮುತ್ತು ಕೊಡುತ್ತಿದ್ದಾರೆ! ಅನಿತ ಮುಂದುವರೆಸಿದಳು, “ಅಜ್ಜೀ, ಈ ಎಲ್ಲ ಹೂವನ್ನೂ ಅಮ್ಮ ನಿಮಗಾಗಿ ಕಳಿಸಿದ್ದಾರೆ. ನಿಮ್ಮನೆ ದೇವರು ನಮ್ಮನೆ ದೇವರು ಒಂದೇ ಅಲ್ಲವ, ಅದಕ್ಕೆ. ಇದನ್ನೂ ತೆಗೊಳ್ಳಿ, ನಿಮ್ಮನೆ ದೇವರ ಮೇಲೇ ಇರಿಸಿ. ಆ ಕೆಂಪು ದಾಸವಾಳ ತುಂಬಾ ಚೆನ್ನಾಗಿ ಕಾಣುತ್ತಿದೆ.’

ಇವೆಲ್ಲವನ್ನೂ ಮರೆಯಿಂದಲೇ ನೋಡುತ್ತಿದ್ದ ಅಮ್ಮನ ಕಣ್ಣುಗಳಲ್ಲಿ ಹನಿ ಮೂಡಿತು. ಪುಟ್ಟಿ ಬಗ್ಗೆ ಹೆಮ್ಮೆಯಾಯಿತು.

ಮತ್ತೂರು ಸುಬ್ಬಣ್ಣ 

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.