ಲೋಕಲ್‌ ಹುಡ್ಗನ ಕ್ಲಾಸಿಕ್‌ ಲವ್‌ ಸ್ಟೋರಿ


Team Udayavani, Aug 3, 2018, 6:00 AM IST

s-13.jpg

“ಒಂದು ಸಮುದ್ರ ತೀರ… ದೊಡ್ಡ ದೊಡ್ಡ ಅಲೆಗಳು… ಆ ಅಲೆಗಳಿಗೆ ಮೈಯೊಡ್ಡಿ ನಿಂತ ಕಲ್ಲು ಬಂಡೆಗಳು… ಅವುಗಳ ನಡುವೆ ಇಬ್ಬರು ಪ್ರೇಮಿಗಳು…!
– ಇದಿಷ್ಟೇ ವಿಷಯ ಇಟ್ಟುಕೊಂಡು ಬಂದ ಅದೆಷ್ಟೋ ಚಿತ್ರಗಳು ಇಂದಿಗೂ ಕಾಡುತ್ತಿವೆ. ಆ ರೀತಿಯ ಕಾಡುವ ಕಥೆ ಕಟ್ಟಿಕೊಡಬೇಕೆಂಬ ಕಾರಣಕ್ಕೆ “ಮನಸಿನ ಮರೆಯಲಿ’ ಎಂಬ ಚಿತ್ರ ಮಾಡಿದ್ದಾಗಿ ಹೇಳುತ್ತಾ ಹೋದರು ನಿರ್ದೇಶಕ “ಆಸ್ಕರ್‌’ ಕೃಷ್ಣ. ಸದ್ದಿಲ್ಲದೆಯೇ ಚಿತ್ರ ಮುಗಿಸಿ, ಈಗ ಬಿಡುಗಡೆಗೆ ಸಜ್ಜಾಗಿರುವ ಕೃಷ್ಣ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಮಾಡಿದ್ದಾರೆ. ಮಂಡಳಿ ಕಾರ್ಯದರ್ಶಿ ಭಾ.ಮ.ಹರೀಶ್‌ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

ನಿರ್ದೇಶ ಆಸ್ಕರ್‌ ಕೃಷ್ಣಗೆ ಈ ಚಿತ್ರ ಒಳ್ಳೆಯ ಮೆಚ್ಚುಗೆ ಪಡೆಯುತ್ತೆ ಎಂಬ ವಿಶ್ವಾಸ. ಕಾರಣ, ಇದೊಂದು ಅಪ್ಪಟ ಪ್ರೇಮಕಥೆ. ಇಲ್ಲಿ ಸಾಕಷ್ಟು ಏರಿಳಿತಗಳಿವೆ. ಪ್ರೀತಿ ಅಂದಮೇಲೆ, ವಿರೋಧ ಸಹಜ, ಜಾತಿ, ಧರ್ಮ ಇವೆಲ್ಲವೂ ಅಡ್ಡವಾಗುತ್ತವೆ, ಆಸ್ತಿ, ಅಂತಸ್ತು ಕೂಡ ಮುಖ್ಯವಾಗುತ್ತೆ. ಈ ವಿಷಯಗಳಿಗೆ ಪ್ರೀತಿ ಕಿತ್ತುಹೋಗುತ್ತೆ. ಆದರೆ, ಪ್ರೇಮಿಗಳ ನಡುವೆ ಸಣ್ಣದ್ದೊಂದು ಈಗೋ ಬಂದುಬಿಟ್ಟರೆ, ಅವರ ಪ್ರೀತಿ ಎಲ್ಲಿಗೆ ಬೇಕಾದ್ರೂ ಹೋಗಿಬಿಡುತ್ತೆ. ಅದೇ ಈ ಚಿತ್ರದ ಕಥಾವಸ್ತು’ ಎಂಬುದು ನಿರ್ದೇಶಕರ ಮಾತು.

“ಈ ಹಿಂದೆ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್‌ ಬರಲ್ಲ ಎಂಬ ಮಾತಿತ್ತು. ಅದಕ್ಕೊಂದು ಚಿತ್ರ ಮಾಡಿದೆ. ಆದರೆ, ಫ್ಯಾಮಿಲಿ ಆಡಿಯನ್ಸ್‌ ಬರಲೇ ಇಲ್ಲ. ಆಮೇಲೆ ಇನ್ನೆರೆಡು ಚಿತ್ರ ಮಾಡಿದೆ. ಅದು ವಿನಾಕಾರಣ ವಿವಾದಕ್ಕೆ ಗುರಿಯಾಯ್ತು. ಅದೇಕಾಯೊ¤à ಗೊತ್ತಾಗಲೇ ಇಲ್ಲ. ಈಗ “ಮನಸಿನ ಮರೆಯಲಿ’ ಮಾಡಿದ್ದೇನೆ. ಇದು ರೊಮ್ಯಾಂಟಿಕ್‌ ಲವ್‌ಸ್ಟೋರಿ ಇರುವ ಚಿತ್ರ. ಎಲ್ಲಾ ವರ್ಗಕ್ಕೂ ಬೇಕೆನಿಸುವ ಅಂಶಗಳು ಇಲ್ಲಿವೆ. ಹೊಸ ತಂಡ ಕಟ್ಟಿಕೊಂಡು ಹೊಸದೇನನ್ನೋ ಮಾಡಿದ್ದೇನೆ. ಎಲ್ಲರ ಸಹಕಾರ ಇರಲಿ’ ಅಂದರು ಆಸ್ಕರ್‌ ಕೃಷ್ಣ.

ನಾಯಕ ಕಿಶೋರ್‌ಗೆ ಇದು ಮೊದಲ ಚಿತ್ರ. ನಿರ್ದೇಶಕರ ಕಥೆ ಕೇಳಿ, ಅವಕಾಶ ಬಿಡಬಾರದು ಅಂತ ಒಪ್ಪಿ ಮಾಡಿದ್ದಾರೆ. ಅವರದು ಲವ್ವರ್‌ ಬಾಯ್‌ ಪಾತ್ರ. ಯಾವುದೇ ಕಮರ್ಷಿಯಲ್‌ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ ಚಿತ್ರ ಮಾಡಿರುವ ಬಗ್ಗೆ ಖುಷಿಗೊಳ್ಳುವ ಕಿಶೋರ್‌, ಒಬ್ಬ ಲೋಕಲ್‌ ಹುಡುಗ ಪ್ರೀತಿಗೆ ಬಿದ್ದದಾಗ, ಲೈಫ‌ಲ್ಲಿ ಏನೆಲ್ಲಾ ನಡೆದು ಹೋಗುತ್ತೆ ಎಂಬುದು ಕಥೆ’ ಎಂದರು ಕಿಶೋರ್‌.

ನಾಯಕಿ ದಿವ್ಯಾಗೌಡ ಅವರಿಗೂ ಇದು ಮೊದಲ ಚಿತ್ರವಂತೆ. ಅವರಿಲ್ಲಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾಗಿ ಹೇಳಿಕೊಂಡರು. ನಿರ್ಮಾಪಕ ಕಿಂಗ್‌ ಲಿಂಗರಾಜ್‌ಗೆ ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆ. ಸಂಗೀತ ನಿರ್ದೇಶಕ ತ್ಯಾಗರಾಜ್‌, ಕಥೆಗೆ ಪೂರಕವಾಗಿರುವ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ಮೊದಲ ಸಲ ಹಾಡಿದ್ದಾರೆ. ಮತ್ತೂಬ್ಬ ನಿರ್ಮಾಪಕಿ ಶಬೀನಾ ಚಿತ್ರ ಶುರುವಾಗಿ, ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಗೊಂಡಿದ್ದಾರೆ. ಆನಂದ್‌ ಆಡಿಯೋ ಮಾಲೀಕ ಶ್ಯಾಮ್‌, ಚಿತ್ರ ಗೆಲುವು ಕೊಡಲಿ ಎಂದು ಹಾರೈಸುತ್ತಿದ್ದಂತೆಯೇ, ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ತೆರೆಬಿತ್ತು. 

ಟಾಪ್ ನ್ಯೂಸ್

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

14-

Kundapura ಭಾಗದ ಅಪರಾಧ ಸುದ್ದಿಗಳು

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

14-

Kundapura ಭಾಗದ ಅಪರಾಧ ಸುದ್ದಿಗಳು

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.