ಕಲರ್‌ಫ‌ುಲ್‌ ಚಿಟ್ಟೆಯ ಕಲರ್‌ ಕಲರ್‌ ಹಾಡುಗಳು


Team Udayavani, Jun 1, 2018, 7:23 PM IST

su-6.jpg

“ಜನರಿಗೂ ಈ ಕಲರ್‌ಫ‌ುಲ್‌ “ಚಿಟ್ಟೆ’ ಮೇಲೆ ಕ್ರಶ್‌ ಆಗಲಿ…’
– ಹೀಗೆ ನಗುಮೊಗದಲ್ಲೆ ಹೇಳುತ್ತಾ ಹೋದರು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ. ಅವರು ಹೇಳಿಕೊಂಡಿದ್ದು “ಚಿಟ್ಟೆ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ. ಅಂದಹಾಗೆ, ಹಂಸಲೇಖ ಅವರಿಗೆ ಆಡಿಯೋ ಕಂಪೆನಿಯೊಂದನ್ನು ಆರಂಭಿಸಬೇಕು ಎಂಬ ಕನಸು ಮಗನ ಸ್ಟಿಂಗ್ಸ್‌ ಕಂಪೆನಿ ಮೂಲಕ ಈಡೇರಿದೆ. 

“ಚಿಟ್ಟೆ’ ಚಿತ್ರದ ಹಾಡುಗಳನ್ನು ಹೊರತಂದ ಹಂಸಲೇಖ, “ನಿರ್ದೇಶಕ ಪ್ರಸನ್ನ ಒಳ್ಳೆಯ ಬರಹಗಾರ. ಈ ಚಿತ್ರ ಅವರಿಗೆ ಗೆಲುವು ತಂದುಕೊಡಬೇಕು. ಇಲ್ಲಿರುವ ಹಾಡುಗಳಲ್ಲಿ ಒಂದು ರಿದಂ ಇಷ್ಟವಾಗಲಿಲ್ಲ. ಇನ್ನು, ತೆರೆ ಮೇಲೆ ನಾಯಕ, ನಾಯಕಿಯನ್ನು ನೋಡಿದಾಗ, ಎಲ್ಲೂ ಮುಜುಗರಕ್ಕೆ ಒಳಪಡದೆ ಖುಷಿಯಾಗಿ ಕೆಲಸ ಮಾಡಿರುವುದು ಕಾಣುತ್ತದೆ. ಈ ಚಿತ್ರದ ಮೇಲೆ ಜನರಿಗೂ ಕ್ರಶ್‌ ಆಗಲಿ. ಆ ಮೂಲಕ ಚಿತ್ರಕ್ಕೆ ಹಾಕಿದ ಬಂಡವಾಳ ಹಿಂದಿರುಗಲಿ’ ಎಂದು ಶುಭ ಹಾರೈಸಿದರು ಹಂಸಲೇಖ.

ಅಂದು ಗಣೇಶ್‌ ಕೂಡ ಕಾರ್ಯಕ್ರಮದ ಅತಿಥಿಯಾಗಿದ್ದರು. ಚಿತ್ರದ ಹಾಡು ಮತ್ತು ಟ್ರೇಲರ್‌ ವೀಕ್ಷಿಸಿದ ಗಣೇಶ್‌, “ಹಂಸಲೇಖ ಅವರ ಹಾಡುಗಳನ್ನು ಕೇಳಿ ಬೆಳೆದವನು ನಾನು. ಇಂದು ನಾನು ಎಷ್ಟೇ ಚೆನ್ನಾಗಿ ಮಾತಾಡಿದರೂ ಅದಕ್ಕೆ ಹಂಸಲೇಖ ಅವರ ಹಾಡುಗಳಲ್ಲಿರುವ ಬರವಣಿಗೆ ಕಾರಣ. ಅವರು ಶುರುಮಾಡಿರುವ ಆಡಿಯೋ ಕಂಪೆನಿ ಅಂಗಡಿಗೆ ನೆಂಟರು ಜಾಸ್ತಿ ಬರಲಿ. ಇನ್ನು, ತೆರೆ ಮೇಲೆ ಯಶಸ್‌ ಸೂರ್ಯ ಚೆನ್ನಾಗಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ರೊಮ್ಯಾನ್ಸ್‌ ಸೀನ್‌ನಲ್ಲಿ ಖುಷಿಯಾಗಿ ನಟಿಸಿದ್ದಾರೆ. ಬಹುಶಃ, ಅವರ ರೊಮ್ಯಾನ್ಸ್‌ ದೃಶ್ಯಗಳಂತೆ ನಾನು ಮಾಡಿಲ್ಲ’ ಎನ್ನುತ್ತಲೇ ನಗೆಚಟಾಕಿ ಹಾರಿಸಿದರು ಗಣೇಶ್‌.

ನಿರ್ದೇಶಕ ಪ್ರಸನ್ನ, ಅಂದು ಡಬ್ಬಲ್‌ ಖುಷಿಯಲ್ಲಿದ್ದರು. ಒಂದು ಚಿತ್ರದ ಆಡಿಯೋ ಸಿಡಿ ಬಿಡುಗಡೆ. ಇನ್ನೊಂದು ಹಂಸಲೇಖ ಅವರ ಆಡಿಯೋ ಕಂಪೆನಿ ಮೂಲಕ ಹಾಡು ಹೊರಬರುತ್ತಿರುವುದು. ಚಿತ್ರದ ಕಥೆ ಬಗ್ಗೆ, ಹಾಕಿದ ಶ್ರಮ ಬಗ್ಗೆ. ಕಲಾವಿದರು, ತಂತ್ರಜ್ಞರ ಕೆಲಸದ ಬಗ್ಗೆ ಒಂದೇ ಉಸಿರಿನಲ್ಲಿ ಹೇಳಿಕೊಂಡರು. ಅಂದು ಸಮಾರಂಭಕ್ಕೆ ಆಗಮಿಸಿದ್ದ ಗಣೇಶ್‌ ಅವರಿಗೂ ಇದೇ ವೇಳೆ ಅಭಿನಂದಿಸಿದರು.

ನಾಯಕ ಯಶಸ್‌ ಸೂರ್ಯ ತಮ್ಮ ಪಾತ್ರ ಹಾಗೂ ಚಿತ್ರತಂಡದ ಬಗ್ಗೆ ಮಾತನಾಡಿದರು. ನಾಯಕಿ ಹರ್ಷಿಕಾ ಪೂಣಚ್ಚಾ ಪಾತ್ರದಲ್ಲಿರುವ ಗಟ್ಟಿತನದ ಕುರಿತು ಹೇಳಿಕೊಂಡರು. ಮತ್ತೂಬ್ಬ ನಾಯಕಿ ಪ್ರಿಯಾಂಕ, ಆರ್ಯವರ್ಧನ್‌ ತಮ್ಮ ಪಾತ್ರ ಕುರಿತು ಹೇಳಿಕೊಂಡರು. ಎಲ್ಲರೂ ಮಾತನಾಡುವ ಮುನ್ನ, ಚಿತ್ರದ ಮೂರು ಹಾಡುಗಳನ್ನು ತೋರಿಸಲಾಯಿತು.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.