ಹಾರರ್‌ ಅಮವಾಸೆ


Team Udayavani, Jul 27, 2018, 6:00 AM IST

30.jpg

“ನಾನಿಲ್ಲಿ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಂದು ಭರತನಾಟ್ಯ ಡ್ಯಾನ್ಸರ್‌ ಆಗಿ, ಇನ್ನೊಂದು ಸತ್ತ ನಂತರ ಕಾಡುವ ದೆವ್ವವಾಗಿ …’

– “ಅಮವಾಸೆ’ ಚಿತ್ರದ ನಾಯಕಿ ಧರಣಿ ತುಂಬಾ ಜೋಶ್‌ನಿಂದ ಹೀಗೆ ಒಂದೇ ಉಸಿರಿನಲ್ಲಿ ಹೇಳಿಬಿಟ್ಟರು. ಪಕ್ಕದಲ್ಲಿ ಕುಳಿತಿದ್ದ ನಿರ್ದೇಶಕ ಪ್ರಶಾಂತ್‌ಗೆ ಸಿಟ್ಟು ಸರ್ರನೆ ಏರಿದಂತಾಯಿತು. ಮುಖ ಕೆಂಪಗಾಯ್ತು. ಒಳಗೊಳಗೆ ಏನೋ ಗೊಣಗಿಕೊಂಡರು. ಇಡೀ ಸಿನಿಮಾದ ಸಾರವನ್ನ ಬಿಟ್ಟುಕೊಟ್ಟರೇ ಹೇಗೆ ಎಂಬ ಟೆನ್ಸ್ ನ್‌ನೊಂದಿಗೆ ಬೆವರು ಕಿತ್ತುಕೊಂಡು ಬಂತು. 

ಬಹುತೇಕ ಎಲ್ಲಾ ನಿರ್ದೇಶಕರು ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ಸಿನಿಮಾದ ಗುಟ್ಟು ಬಿಟ್ಟು ಕೊಡುವುದಿಲ್ಲ. “ತೆರೆಮೇಲೆ ನೋಡಿ’, “ಆ ಅಂಶವನ್ನು ಬಿಟ್ಟುಕೊಡುವಂತಿಲ್ಲ’ ಹೀಗೆ ಹೇಳಿ ಸಸ್ಪೆನ್ಸ್‌ ಕಾಯ್ದಿರಿಸುತ್ತಾರೆ. ಇದೇ ರೀತಿ ತಮ್ಮ “ಅಮವಾಸೆ’ ಚಿತ್ರದ ಬಗ್ಗೆಯೂ ನಿರ್ದೇಶಕ ಪ್ರಶಾಂತ್‌ ಏನನ್ನು ಬಿಟ್ಟುಕೊಡದೇ “ಇದು ಫ್ರೆಂಡ್‌ಶಿಪ್‌ ಹಾಗೂ ಲವ್‌ ಸುತ್ತ ನಡೆಯುವ ಸಿನಿಮಾ. ಒಂದಷ್ಟು ಹಾರರ್‌ ಅಂಶವೂ ಚಿತ್ರದಲ್ಲಿ ಬಂದು ಹೋಗುತ್ತದೆ. ಅದು ಹೇಗೆ ಎಂಬುದನ್ನು ನೀವು ತೆರೆಮೇಲೆ ನೋಡಿ’ ಎಂದಿದ್ದರು. ಆದರೆ, ನಟಿ ಧರಣಿ ಇಡೀ ಸಿನಿಮಾ ಹೇಗೆ ಹಾರರ್‌ ಆಗುತ್ತದೆ, ಆ ಅಂಶ ಏನು ಎಂಬು ದನ್ನು ಬಿಟ್ಟು ಕೊಡುವ ಮೂಲಕ ನಿರ್ದೇ ಶಕರ ಟೆನÒನ್‌ಗೆ ಕಾರಣ ವಾಗಿದ್ದು ಸುಳ್ಳಲ್ಲ. 

ಅದು ಬಿಟ್ಟರೆ “ಅಮ ವಾಸೆ’ ಒಂದು ಫ್ರೆಂಡ್‌ಶಿಪ್‌, ಲವ್‌ ಕುರಿತಾದ ಸಿನಿಮಾವಂತೆ. ಇಲ್ಲಿ “ಅಮವಾಸೆ’ ಎಂದು ಟೈಟಲ್‌ ಇಡಲು ಕಾರಣವೂ ಇದೆ. ಅದು ಚಿತ್ರದ ನಾಲ್ವರ ಹೆಸರು. ಅಮರ್‌, ಮಹೇಶ್‌, ವಾಸು ಹಾಗೂ ಸೇಂದಿ ಎನ್ನುವ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಚಿತ್ರಕ್ಕೆ ಟೈಟಲ್‌ ಇಡಲಾಗಿದೆ. ಈ ಚಿತ್ರವನ್ನು ಜಗದೀಶ ಹಾಗೂ ಡಾ.ಚಂದ್ರಶೇಖರ್‌ ನಿರ್ಮಿಸಿದ್ದಾರೆ.

ಡಾ.ಚಂದ್ರಶೇಖರ್‌ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಮಕ್ಕಳ ಸ್ಪೆಷಲಿಸ್ಟ್‌. ಹೊಸಬರ ತಂಡ ಬಂದು ಕಥೆ ಹೇಳಿ, ಸಹಾಯ ಮಾಡಿ ಎಂದು ಕೇಳಿ ಕೊಂಡರಂತೆ. ಹಾಗಾಗಿ, ಈ ಸಿನಿಮಾ ನಿರ್ಮಿಸಿದರಂತೆ. “ಕತೆ ಇಷ್ಟವಾಗಿ ಈ ಸಿನಿಮಾ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ನೋಡಿದೆ. ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎನಿಸಿತು. ಮುಂದೆ ಸಿನಿಮಾ ಮಾಡುವುದಾದರೆ ಆ ಬಗ್ಗೆ ಯೋಚಿಸುತ್ತೇನೆ’ ಎಂದರು. ಚಿತ್ರದಲ್ಲಿ ಅವರು ಕೂಡಾ ನಟಿಸಿದ್ದು, ವೈದ್ಯರಾಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೊಬ್ಬ ನಿರ್ಮಾಪಕ ಜಗದೀಶ್‌, “ಈ ಚಿತ್ರ ಪ್ರೀತಿ, ಸ್ನೇಹ ಹಾಗೂ ಸಂಘರ್ಷದ ಸುತ್ತ ಸುತ್ತುತ್ತದೆ’ ಎಂದರು. ಅವರು ಕೂಡಾ ಚಿತ್ರದಲ್ಲಿ ನಟಿಸಿದ್ದಾರಂತೆ. 

ಚಿತ್ರಕ್ಕೆ ಹರಿಬಾಬು ಅವರ ಸಂಗೀತವಿದೆ. ಚಿತ್ರದ ರೀ-ರೆಕಾರ್ಡಿಂಗ್‌ ಭಿನ್ನವಾಗಿದ್ದು, ಪ್ರೇಕ್ಷಕರಿಗೆ ಹೊಸ ಫೀಲ್‌ ನೀಡಲಿದೆಯಂತೆ. ಅಂದಹಾಗೆ, ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಾಜೀವ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ನಿರ್ಮಾಪಕರಾದ ಕನಕಪುರ ಶ್ರೀನಿವಾಸ್‌ ಹಾಗೂ ಕರಿಸುಬ್ಬು ಬಿಡುಗಡೆ ಮಾಡಿ ಶುಭಕೋರಿದರು. ನವರತ್ನ ಪ್ರಸಾದ್‌ ಈ ಸಿನಿಮಾದ ವಿತರಕರು. 

ಟಾಪ್ ನ್ಯೂಸ್

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.