ಜಾನಿ ಹಾಡು ಬಂತಪ್ಪಾ…!


Team Udayavani, Mar 16, 2018, 8:15 AM IST

a-24.jpg

ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಇಬ್ಬರೂ “ಜಾನಿ ಜಾನಿ ಎಸ್‌ ಪಪ್ಪಾ’ ಚಿತ್ರದ ಕೆಲಸ ಶುರು ಮಾಡಿದಾಗ, ಒಬ್ಬರನ್ನೊಬ್ಬರು ಸಾರ್‌ ಎಂದು ಸಂಬೋಧಿಸುತ್ತಿದ್ದರಂತೆ . ಆದರೆ, ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬರುತ್ತಿದ್ದಂತೆಯೇ, ಇಬ್ಬರೂ ಮಚ್ಚಾ ಅಂತ ಕರೆದುಕೊಳ್ಳೋಕೆ ಶುರು ಮಾಡಿದ್ದಾರೆ. ಇದನ್ನು ಹೇಳಿದ್ದು ಯಾರೋ ಅಲ್ಲ, 
ಖುದ್ದು ನಿರ್ದೇಶಕ ಪ್ರೀತಂ ಗುಬ್ಬಿ. ಹಾಗೆ ಹೇಳುವ ಮೂಲಕ ಚಿತ್ರ ಮುಗಿಯುವ ಹೊತ್ತಿಗೆ ತಾವೆಷ್ಟು ಹತ್ತಿರವಾಗಿದ್ದೇವೆ ಮತ್ತು ಹಾಗೆ ಹತ್ತಿರವಾಗುವ ಮೂಲಕ ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೇವೆ ಎಂಬುದು ಅವರ ಮಾತಿನ ತಾತ್ಪರ್ಯ.

ಅಂದಹಾಗೆ, ಪ್ರೀತಂ ಈ ಮಾತು ಹೇಳಿದ್ದು “ಜಾನಿ ಜಾನಿ ಎಸ್‌ ಪಪ್ಪಾ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಹಾಡುಗಳು
ಬಿಡುಗಡೆಯಾಗಿದ್ದು ಗಾಲ್ಫ್ ಕೋರ್ಸ್‌ನಲ್ಲಿ. ಬಿಡುಗಡೆ ಮಾಡಿದ್ದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌. ಸಚಿವರು ಬಂದು ಹಾಡುಗಳು
ಬಿಡುಗಡೆ ಮಾಡುವ ಹೊತ್ತಿಗೆ ಚಿತ್ರತಂಡದವರು ಮಾತನಾಡಿ ಮುಗಿಸಿದ್ದರು. ಮೊದಲಿಗೆ ಮಾತನಾಡಿದ್ದು ಪ್ರೀತಂ. ಒಂದು ಫೋನ್‌
ಮತ್ತು ಒಂದು ಮೀಟಿಂಗ್‌ನಲ್ಲಿ ಈ ಚಿತ್ರ ಮಾಡುವ ಮಾತಾಯಿತಂತೆ. “ನನಗೆ ವಿಜಿ ಜೊತೆಗೆ ಇದು ಎರಡನೆಯ ಚಿತ್ರ. ದುನಿಯಾ ಟಾಕೀಸ್‌ ಬ್ಯಾನರ್‌ನಲ್ಲೇ ಚಿತ್ರ ಮಾಡೋಕೆ ಅವಕಾಶ ಸಿಕ್ಕಿತು. ಒಂದು ಫೋನ್‌ ಮತ್ತು ಒಂದು ಮೀಟಿಂಗ್‌ನಲ್ಲಿ ಈ ಚಿತ್ರ
ಮಾಡುವ ಮಾತಾಯಿತು. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಈ ಚಿತ್ರಕ್ಕೆ ಮೊದಲ ಬಾರಿಗೆ ರಚಿತಾ ರಾಮ್‌ ಡಬ್‌ ಮಾಡಿದ್ದಾರೆ. ಎಲ್ಲಾ ಹಾಡುಗಳಿಗೆ ಧನಂಜಯ್‌ ರಂಜನ್‌ ಸಾಹಿತ್ಯ ಬರೆದರೆ, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳ ಸೌಂಡಿಂಗ್‌ ಬೇರೆ ತರಹವೇ ಇದೆ’ ಎಂದರು.

ಅಜನೀಶ್‌ ಮತ್ತು ಧನಂಜಯ್‌ಗೆ ಥ್ಯಾಂಕ್ಸ್‌ ಹೇಳುತ್ತಲೇ ಮಾತು ಪ್ರಾರಂಭಿಸಿದರು “ದುನಿಯಾ’ ವಿಜಯ್‌. “ಧನಂಜಯ್‌ಗೆ ಇವತ್ತಿನ ಯುವಕರ ಪಲ್ಸ್‌ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸರಿಯಾಗಿ ಅಜನೀಶ್‌ ಸಹ ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ನಾನು ಮತ್ತು ಪ್ರೀತು ಹಳೆಯ ಸ್ನೇಹಿತರು. ಜಯಣ್ಣ ಫಿಲಂಸ್‌ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಹೇಳಿದರು.

ವಿಜಯ್‌ ಮೈಕಿಟ್ಟು ಮೂರೂವರೆ ನಿಮಿಷದೊಳಗೆ ಇನ್ನಿಬ್ಬರು ಮಾತಾಡಿ ಮುಗಿಸಿದ್ದರು. ಮೊದಲು ಮಾತನಾಡಿದ್ದು ಅಜನೀಶ್‌. ಈ
ಚಿತ್ರಕ್ಕೆ ಅವರು ಪುನೀತ್‌ರಿಂದ ಒಂದು ಹಾಡನ್ನು ಹಾಡಿಸಿದ್ದಾರಂತೆ. “ವಿಜಯ್‌ ಅವರ ಮ್ಯಾನರಸಿಂಗೆ ತಕ್ಕ ಹಾಗೆ ಹಾಡುಗಳನ್ನು ಮಾಡಲಾಗಿದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳುತ್ತಲೇ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿ ಮುಗಿಸಿದರು ಅಜನೀಶ್‌. ಇನ್ನು “ಕಿರಿಕ್‌ ಪಾರ್ಟಿ’ ಚಿತ್ರಕ್ಕೆ ಅಜನೀಶ್‌ ಜೊತೆಗೆ ಕೆಲಸ ಮಾಡಿರುವ ಧನಂಜಯ್‌, ಅದನ್ನು ಮೆಲಕು ಹಾಕುತ್ತಲೇ, ಈ
ಅವಕಾಶವನ್ನು ಕೊಟ್ಟ ವಿಜಯ್‌ಗೆ ಥ್ಯಾಂಕ್ಸ್‌ ಹೇಳಿದರು. ಅಷ್ಟೇ ಅಲ್ಲ, “ಅಂಜೋದಿಲ್ಲ ಗಿಂಜೋದಿಲ್ಲ …’ ಎಂಬ ಹಾಡು ತಮ್ಮ
ಇಷ್ಟವಾದ ಹಾಡು ಎಂದು ಹೇಳಿಕೊಂಡರು. ಅಷ್ಟರಲ್ಲಿ ಸಚಿವರು ಬಂದು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ
ಶುಭ ಕೋರಿದರು. ಅವರ ಹಿಂದೆ ಬಂದ ರಚಿತಾ ರಾಮ್‌ ಸಹ ತಮ್ಮ ಅನುಭವ ಗಳನ್ನು ಹಂಚಿ ಕೊಂಡರು. 

ಟಾಪ್ ನ್ಯೂಸ್

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.