ಬಹುಮುಖಿ ದೆವ್ವ !

ಹಾರರ್‌ ಚಿತ್ರದಲ್ಲಿ ನೀತು

Team Udayavani, Jul 12, 2019, 5:00 AM IST

u-20

‘ಇಲ್ಲೊಂದು ದೆವ್ವ ಇದೆ. ಅದಕ್ಕೂ ನೋವಿದೆ, ದ್ವೇಷವೂ ಇದೆ. ಅದು ಅಳುತ್ತೆ, ಅಳಿಸುತ್ತೆ, ಬೆಚ್ಚಿ ಬೀಳಿಸುತ್ತೆ. ಅಷ್ಟೇ ಅಲ್ಲ, ಮನುಷ್ಯನಿಗೆ ಇರಬೇಕಾದ ಎಲ್ಲಾ ಸಂಕಷ್ಟಗಳೂ ಅದಕ್ಕಿವೆ…’

– ದೆವ್ವದ ಕುರಿತು ಹೀಗೆ ಹೇಳುತ್ತಾ ಹೋದರು ನಟಿ ನೀತು. ಅವರು ಹೇಳಿದ್ದು, ‘ವಜ್ರಮುಖೀ’ ಸಿನಿಮಾದಲ್ಲಿ ಬರುವ ದೆವ್ವದ ಬಗ್ಗೆ. ಹೌದು, ‘ವಜ್ರಮುಖೀ’ ಹಾರರ್‌ ಕಥಾಹಂದರ ಹೊಂದಿರುವ ಸಿನಿಮಾ. ಜುಲೈ 19 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಆ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.

ನಟಿ ನೀತು, ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಂದರೆ, ಅದು ದೆವ್ವದ ಪಾತ್ರವಂತೆ. ಆ ಬಗ್ಗೆ ಹೇಳಿಕೊಂಡ ನೀತು, ‘ನಾನಿಲ್ಲಿ ದೆವ್ವದ ಪಾತ್ರ ಮಾಡಿದ್ದೇನೆ. ಆ ಬಗ್ಗೆ ಹೆಚ್ಚು ಹೇಳು­ವಂತಿಲ್ಲ. ಹಾರರ್‌ ಚಿತ್ರಗಳಲ್ಲಿ, ಈಗಾಗಲೇ ನಾಗವಲ್ಲಿ, ಕಾಂಚನಾ ಹೆಸರಿನ ದೆವ್ವಗಳು ಫೇಮಸ್‌ ಆಗಿವೆ. ಆ ಸಾಲಿಗೆ ‘ವಜ್ರಮುಖೀ’ ದೆವ್ವ ಕೂಡ ಸೇರುವ ನಂಬಿಕೆ ಇದೆ ಎಂದು ಹೇಳಿಕೊಂಡ ನೀತು, ನಾನು ಇದುವರೆಗೆ 39 ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ 35 ನೇ ಸಿನಿಮಾ. ನನಗಿದು ವಿಶೇಷ ಚಿತ್ರ. ಕಾರಣ, ಇದೇ ಮೊದಲ ಸಲ ನಾನು ದೆವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ನನಗೆ ಸಾಕಷ್ಟು ಫ್ರೀಡಮ್‌ ಕೊಟ್ಟಿದ್ದರು. ಹಾಗಾಗಿ, ಆ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು. ಒಟ್ಟಾರೆ ‘ವಜ್ರಮುಖೀ’ ಸಿನಿಮಾದ ಉದ್ದೇಶವಿಷ್ಟೇ, ನೋಡುಗರಿಗೆ ಒಂದು ಹೊಸ ಥ್ರಿಲ್ ಮತ್ತು ಫೀಲ್ ಸಿಗಬೇಕು. ಎಷ್ಟೋ ಹಾರರ್‌ ಚಿತ್ರಗಳು ಬಂದಿವೆಯಾದರೂ, ಇದೊಂದು ಕಲ್ಪನೆಯ ದೆವ್ವದ ಕಥೆ ಇದೆ. ಹಾರರ್‌ ಇಷ್ಟಪಡುವ ಜನರಿಗೆ ಖಂಡಿತ ‘ವಜ್ರಮುಖೀ’ ಬೇಸರ ತರಿಸಲ್ಲ ‘ ಎಂಬುದು ನೀತು ಮಾತು.

ನಿರ್ಮಾಪಕ ಶಶಿಕುಮಾರ್‌ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು ‘ಸಿಗಂಧೂರು ಚೌಡೇಶ್ವರಿ ‘ ಚಿತ್ರ ನಿರ್ಮಿಸಿದ್ದರು. ಈಗ ‘ವಜ್ರಮುಖೀ’ ನಿರ್ಮಿಸಿದ್ದಾರೆ. ‘ಇಲ್ಲಿ ತ್ರಿಕೋನ ಪ್ರೇಮಕಥೆ ಇದೆ. ಅದರೊಂದಿಗೆ ಹಾರರ್‌ ಅಂಶಗಳೂ ಇವೆ. ಎನ್‌.ಕುಮಾರ್‌ ಅವರ ಸಹಕಾರದೊಂದಿಗೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ದಿಲೀಪ್‌ ಪೈ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸಂಜನಾ ಎಂಬ ಹೊಸ ಪ್ರತಿಭೆಯೂ ಇಲ್ಲಿದೆ. ನೀತು ಸಿನಿಮಾದ ಹೈಲೈಟ್. ಪಿಕೆಎಚ್ ದಾಸ್‌ ಅವರ ಛಾಯಾಗ್ರಹಣವಿದೆ. ರೆಗ್ಯುಲರ್‌ ಫಾರ್ಮೆಟ್‌ನಲ್ಲಿ ಈ ಚಿತ್ರವಿಲ್ಲ. ಒಂದು ಮರ್ಡರ್‌ ಮಿಸ್ಟರಿಯಿಂದ ಏನೆಲ್ಲಾ ಆಗುತ್ತೆ ಎಂಬುದು ಸಸ್ಪೆನ್ಸ್‌’ ಎಂದರು ಶಶಿಕುಮಾರ್‌.

ವಿತರಕ ಎನ್‌.ಕುಮಾರ್‌ ಅವರಿಗೆ ನಿರ್ಮಾಪಕ ಶಶಿಕುಮಾರ್‌ ಬಂದು, ‘ವಜ್ರಮುಖೀ’ ಚಿತ್ರ ವಿತರಣೆ ಮಾಡಿಕೊಡಿ ಅಂದಾಗ, ಸದ್ಯಕ್ಕೆ ನಾನು ವಿತರಣೆ ಬಗ್ಗೆ ಹೆಚ್ಚು ಗಮನಕೊಡುತ್ತಿಲ್ಲ. ನಿಮಗೆ ನಾನು ಸಹಕಾರ ಕೊಡುತ್ತೇನೆ ನೀವೇ ರಿಲೀಸ್‌ ಮಾಡಿ ಅಂತ, ಸಾಥ್‌ ನೀಡಿದ್ದಾರಂತೆ. ಇಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ ಎಂಬುದು ಮುಖ್ಯ ಅಲ್ಲ, ಎಷ್ಟು ದಿನ ಚಿತ್ರಮಂದಿರದಲ್ಲಿರುತ್ತೆ ಎಂಬುದು ಮುಖ್ಯ. ಸಿನಿಮಾ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಹೊಸಬರ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ’ ಎಂದರು ಕುಮಾರ್‌.

ನಿರ್ದೇಶಕ ಆದಿತ್ಯ ಕುಣಿಗಲ್ ಹೆಚ್ಚು ಮಾತನಾಡಲಿಲ್ಲ. ಎಲ್ಲರೂ ನಮಗೆ ಬೆಂಬಲ ಕೊಡಬೇಕು ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರದ ಸಹನಿರ್ಮಾಪಕಿ ಗೀತಾ ಅವರಿಗೆ ಇದು ಹೊಸ ಅನುಭವವಂತೆ. ಸಿನಿಮಾ ನೋಡಿದ್ದೇನೆ. ಅಂದುಕೊಂಡಂತೆ ಮೂಡಿಬಂದಿದೆ.ಹಾರರ್‌ ಇಷ್ಟಪಡುವ ವರ್ಗಕ್ಕೆ ಇದು ಇಷ್ಟವಾಗುತ್ತೆ ಎಂಬ ನಂಬಿಕೆ ನಮಗಿದೆ ಎಂದಷ್ಟೇ ಹೇಳಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.