ನಕುಲ್ ಕೇರ್ ಆಫ್ ಅರ್ಜುನ್
Team Udayavani, Feb 23, 2018, 11:34 AM IST
ಚಿತ್ರರಂಗಕ್ಕೆ ಬರಬೇಕಾದರೆ ಯಾರಾದರೊಬ್ಬರೂ ಬೆಂಬಲಕ್ಕೆ ಇದ್ದರೆ ಹೊಸಬರಿಗೆ ಸಹಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾರ್ಗದರ್ಶನದ ಜೊತೆಗೆ ಚಿತ್ರರಂಗದ ಬಗ್ಗೆ ಮಾಹಿತಿ ಕೂಡಾ ನೀಡುತ್ತಾರೆ. ಚಿತ್ರರಂಗದಲ್ಲಿ ಬಿಝಿ ಇರುವ ಅನೇಕರು ತಮ್ಮ ಪರಿಚಯದವರನ್ನು, ಸ್ನೇಹಿತರನ್ನು ಚಿತ್ರರಂಗಕ್ಕೆ ಕರೆತರುತ್ತಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೂಡಾ ಪರಿಚಯದ ಹುಡುಗನೊಬ್ಬನನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಅವರೇ ನಕುಲ್. “ಪ್ರೀತಿಯ ರಾಯಭಾರಿ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಮಾರ್ಚ್ 2 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದವರೇ ನಕುಲ್.
ನಕುಲ್ಗೆ ಇದು ಮೊದಲ ಸಿನಿಮಾ. ಅರ್ಜುನ್ ಜನ್ಯಾ ಅವರು ನಕುಲ್ ಅವರ ಫ್ಯಾಮಿಲಿ ಫ್ರೆಂಡ್ ಅಂತೆ. ಅದೇ ಕಾರಣದಿಂದ ನಕುಲ್ಗೆ ಸಾಕಷ್ಟು ಬೆಂಬಲ ನೀಡಿದ್ದಾರಂತೆ ಅರ್ಜುನ್ ಜನ್ಯಾ. ಹಾಗಾಗಿ, ನಕುಲ್, ಅರ್ಜುನ್ ಜನ್ಯಾ ಅವರ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ. ಕ್ಯಾಮರಾ ಮುಂದೆ ನಿಲ್ಲುವ ಮೊದಲು ನಕುಲ್ ಚೆನ್ನೈನಲ್ಲಿ ಒಂದು ವರ್ಷಗಳ ಕಾಲ ನಟನೆ, ಫೈಟ್, ಡ್ಯಾನ್ಸ್ ತರಬೇತಿ ಪಡೆದರಂತೆ.
“ಪ್ರೀತಿಯ ರಾಯಭಾರಿ’ ಸಿನಿಮಾ ನೈಜ ಘಟನೆಯನ್ನಾಧರಿಸಿ ಮಾಡಿದ್ದರಿಂದ ಆ ಪಾತ್ರಕ್ಕಾಗಿ ವಿಶೇಷವಾಗಿ ತಯಾರಾ ನಕುಲ್ ಕ್ಯಾಮರಾ ಮುಂದೆ ಅದು ಸಹಾಯವಾಯಿತಂತೆ. “ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಸಿನಿಮಾ ನೋಡಿರುವ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡಾ ಒಳ್ಳೆಯ ಬೆಲೆಗೆ ಮಾರಾಟವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ನಕುಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ