ಸಮ್ಮರ್‌ ಹಾಲಿಡೇಸ್‌


Team Udayavani, Aug 3, 2018, 6:00 AM IST

s-8.jpg

ನಿರ್ದೇಶಕಿ ಕವಿತಾ ಲಂಕೇಶ್‌ ಅವರು “ಸಮ್ಮರ್‌ ಹಾಲಿಡೇಸ್‌’ ಎಂಬ ಮಕ್ಕಳ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಈ ಚಿತ್ರ ತಯಾರಾಗಿದೆ. ಈಗ ಮೊದಲ ಹಂತವಾಗಿ “ಸಮ್ಮರ್‌ ಹಾಲಿಡೇಸ್‌’ನ ಇಂಗ್ಲೀಷ್‌ ಅವತರಣಿಕೆ ಇಂದು ಬಿಡುಗಡೆಯಾಗುತ್ತಿದೆ. ಪಿವಿಆರ್‌ನ ಸಹಭಾಗಿತ್ವದಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಪಿವಿಆರ್‌ಗಳಲ್ಲಿ ಮಾತ್ರ “ಸಮ್ಮರ್‌ ಹಾಲಿಡೇಸ್‌’ ಬಿಡುಗಡೆಯಾಗುತ್ತಿದೆ. ಇಂಗ್ಲೀಷ್‌ ಅವತರಣಿಕೆ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ  ಕನ್ನಡ ಅವರಣಿಕೆಯನ್ನು ಬಿಡುಗಡೆ ಮಾಡಲಿದ್ದಾರಂತೆ ಕವಿತಾ.

ಇನ್ನು ಸಿನಿಮಾ ಮೂಡಿಬಂದಿರುವ ಬಗ್ಗೆ ಕವಿತಾ ಲಂಕೇಶ್‌ ಖುಷಿಯಾಗಿದ್ದಾರೆ. “ನಾವು ಸಿನಿಮಾ ಮಾಡುತ್ತಿರುವುದು ಮಕ್ಕಳಿಗೆ. ಅವರ ಖುಷಿಗೆ. ಮಕ್ಕಳ ಸಿನಿಮಾ ಎಂದು ನಾವು ಯೋಚನೆ ಮಾಡುವಂತೆ ಸ್ಕ್ರಿಪ್ಟ್ ಮಾಡೋದು ಸರಿಯಲ್ಲ ಎಂದು, ಕಥೆ ಮಾಡುವಾಗಲೇ ನಾನು ಮಕ್ಕಳನ್ನು ಜೊತೆಗೆ ಕೂರಿಸಿಕೊಂಡಿದ್ದೆ. ಕೆಲವು ದೃಶ್ಯ ಬರೆಯುವಾಗಲೇ “ನೀವು ಈ ತರಹ ಮಾತನಾಡುತ್ತೀರಿ, ಈ ರೀತಿ ಆಲೋಚಿಸುತ್ತೀರಾ’ ಎಂದು ಮಕ್ಕಳಲ್ಲಿ ಕೇಳುತ್ತಿದ್ದೆ. ಏಕೆಂದರೆ, ನಮ್ಮ ಯೋಚನೆಯನ್ನಿಟ್ಟುಕೊಂಡು ಮಕ್ಕಳ ಸಿನಿಮಾ ಮಾಡಬಾರದು. ಅದೇ ಕಾರಣದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದರು ಕವಿತಾ ಲಂಕೇಶ್‌. ಈಗಾಗಲೇ ಚಿತ್ರವನ್ನು ಶಾಲಾ ಮಕ್ಕಳು ಹಾಗೂ ಪೋಷಕರು ನೋಡಿದ್ದು, ಖುಷಿಯಿಂದ ಚಪ್ಪಾಳೆ ತಟ್ಟಿದರಂತೆ. ಜೊತೆಗೆ ಒಂದೇ ಒಂದು ದೃಶ್ಯ ಬೇಡವಾಗಿತ್ತೆಂದು ಸೂಚಿಸಿದರಂತೆ. ಅದನ್ನು ಸಿನಿಮಾದಿಂದ ತೆಗೆದಿದ್ದಾಗಿ ಹೇಳಿದರು ಕವಿತಾ. 

ಚಿತ್ರದಲ್ಲಿ ಸುಮನ್‌ ನಗರ್‌ಕರ್‌ ತಾಯಿ ಪಾತ್ರ ಮಾಡಿದ್ದಾರೆ. ಇಶಾ ಅವರ ತಾಯಿಯಾಗಿ ನಟಿಸಿದ್ದು, ಇದೊಂದು ಒಳ್ಳೆಯ ಅನುಭವ ಎನ್ನುವುದು ಅವರ ಮಾತು. “ಈ ಸಿನಿಮಾ ಮುಂಚೆ ನನಗೆ ಕವಿತಾ ಅವರ ಜೊತೆ ಅಷ್ಟೊಂದು ನಂಟಿರಲಿಲ್ಲ. ಆದರೆ, ಈ ಚಿತ್ರದ ನಂತರ ಅವರ ಕೆಲಸದ ಬಗ್ಗೆ, ಪಕ್ವತೆ ಬಗ್ಗೆ ಗೊತ್ತಾಯಿತು. ಸಿನಿಮಾವನ್ನು ತುಂಬಾ ಪ್ರೀತಿಸುವ ವ್ಯಕ್ತಿ ಅವರು’ ಎಂದರು ಸುಮನ್‌.

ಚಿತ್ರದಲ್ಲಿ ಕವಿತಾ ಲಂಕೇಶ್‌ ಅವರ ಪುತ್ರಿ ಇಶಾ ಪ್ರಮುಖ ಪಾತ್ರ ಮಾಡಿದ್ದಾರೆ. ಅವರು ಕೂಡಾ ಸಿನಿಮಾದಲ್ಲಿ ನಟಿಸಿದ ಖುಷಿ ಹಂಚಿಕೊಂಡರು. ಚಿತ್ರಕ್ಕೆ ರೋಹಿತ್‌ ಅಂಡ್‌ ಟೀಂ ಸಂಗೀತ ನೀಡಿದ್ದು, ಕವಿತಾ ಲಂಕೇಶ್‌ ಅವರು ತಮ್ಮಿಂದ ಕೆಲಸ ತೆಗೆಸುತ್ತಿದ್ದ ಬಗ್ಗೆ ಮಾತನಾಡಿದರು.  n

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.