ಮತ್ತೊಂದು ಪ್ರೇಮಕಥೆ ಹೇಳುವ ಸಮಯ; ಇಂದು ತಾಜ್ಮಹಲ್-2 ತೆರೆಗೆ
Team Udayavani, Sep 2, 2022, 12:48 PM IST
ಸ್ಯಾಂಡಲ್ವುಡ್ನಲ್ಲಿ ಈ ಹಿಂದೆ “ತಾಜ್ ಮಹಲ್’ ಎಂಬ ಪ್ರೇಮ್ ಕಹಾನಿ ಬಂದು ಸೂಪರ್ ಹಿಟ್ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅಂಥದ್ದೇ ಮತ್ತೂಂದು ಪ್ರೇಮ್ ಕಹಾನಿಯ ಸಿನಿಮಾ “ತಾಜ್ಮಹಲ್-2′ ಈ ವಾರ ಬಿಡುಗಡೆಯಾಗುತ್ತಿದೆ.
“ಶ್ರೀಗಂಗಾಂಭಿಕೆ ಎಂಟರ್ಪ್ರೈಸೆಸ್’ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ “ತಾಜ್ಮಹಲ್-2′ ಸಿನಿಮಾಕ್ಕೆ, ಚಿತ್ರರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದ ದೇವರಾಜ್ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದು, ಈ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ.
ಸದ್ಯ “ತಾಜ್ಮಹಲ್-2′ ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ, ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾದ ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾತನಾಡಿತು.
ಮೊದಲಿಗೆ ಮಾತನಾಡಿದ ನಿರ್ದೇಶಕ ಕಂ ನಾಯಕ ದೇವರಾಜ್, “ಸಿನಿಮಾದ ಟೈಟಲ್ ಹೇಳುವಂತೆ, “ತಾಜ್ ಮಹಲ್-2′ ಒಂದು ಅಪ್ಪಟ ಪ್ರೇಮಕಥೆಯ ಸಿನಿಮಾ. ಕೆಲ ವರ್ಷಗಳ ಹಿಂದೆ ಕೊಯಮತ್ತೂರಿನಲ್ಲಿ ಕಬ್ಬಿನ ಜ್ಯೂಸ್ ಮಾರಿ ಜೀವನ ನಡೆಸುವ ಹುಡುಗನೊಬ್ಬನ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಲವ್, ಸೆಂಟಿಮೆಂಟ್ಫ್ರೆಂಡ್ಶಿಪ್, ಎಮೋಶನ್ಸ್ ಹೀಗೆ ಎಲ್ಲ ಥರದ ಎಲಿಮೆಂಟ್ಸ್ ಇರುವ ಸಿನಿಮಾ ಇದಾಗಿದೆ. ಈಗಾಗಲೇ ರಿಲೀಸ್ ಆಗಿರುವ ನಮ್ಮ ಸಿನಿಮಾದ ಸಾಂಗ್ಸ್, ಟ್ರೇಲರ್ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದ್ದು, ಎಲ್ಲರೂ ಗುರುತಿಸಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಸಿನಿಮಾದಿಂದ, ಒಬ್ಬ ಮೇಕಪ್ ಮ್ಯಾನ್ ಇಂದು ಅನುಪಮಾ ಥಿಯೇಟರ್ನಲ್ಲಿ ಕಟೌಟ್ ಆಗಿ ನಿಲ್ಲುವ ಮಟ್ಟಿಗೆ ಆಗಿದೆ’ ಎಂದರು.
“ತಾಜ್ಮಹಲ್-2′ ಬಿಡುಗಡೆಯ ಬಗ್ಗೆ ಮಾತನಾಡಿದ ವಿತರಕ ರಮೇಶ್ ಬಾಬು, “ಸಿನಿಮಾಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದ್ದು, 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು. ಇದೇ ವೇಳೆ ಹಾಜರಿದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ತಾಜ್ಮಹಲ್-2′ ಸಿನಿಮಾದಲ್ಲಿ ಸಮೃದ್ಧಿ ಶುಕ್ಲಾ ನಾಯಕಿಯಾಗಿದ್ದು, ಉಳಿದಂತೆ ತಬಲನಾಣಿ, ಶೋಭಾರಾಜ್, ವಿಕ್ಟರಿ ವಾಸು, ಕಡ್ಡಿಪುಡಿ ಚಂದ್ರು, ರಾಜ್ ಉದಯ…, ವಾಣಿಶ್ರೀ, ಸಿಲ್ಲಿಲಲ್ಲಿ ಆನಂದ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ
ಅಭಿನಯಿಸಿದ್ದಾರೆ. “ತಾಜ್ಮಹಲ್-2′ ಸಿನಿಮಾದ ಹಾಡುಗಳಿಗೆ ವಿಕ್ರಂ ಸೆಲ್ವ ಸಂಗೀತವಿದ್ದು, ಧನಂಜಯ್ ಬಿ ನೃತ್ಯ, ಚಂದ್ರು ಬಂಡೆ ಸಾಹಸ ಸಂಯೋಜನೆಯಿದೆ. ಚಿತ್ರಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯ್ ಎಂ. ಕುಮಾರ್ ಸಂಕಲನವಿದೆ. ಮನ್ವರ್ಷಿ ನವಲಗುಂದ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ