ನಿಗೂಢ ರಾಂಚಿ
ಧೋನಿ ಊರ ಹೆಸರಲ್ಲೊಂದು ಸಿನಿಮಾ
Team Udayavani, Sep 27, 2019, 5:00 AM IST
ರಾಂಚಿ – ಈ ಊರಿನ ಹೆಸರು ಕೇಳುತ್ತಿದ್ದಂತೆ ನಿಮಗೆ ಕ್ರಿಕೆಟಿಗ ಎಂ.ಎಸ್.ಧೋನಿ ನೆನಪಾಗುತ್ತಾರೆ. ಈಗ ಅವರ ಊರ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾವೊಂದು ತಯಾರಾಗಿದೆ. ಹೌದು, “ರಾಂಚಿ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿರುವ ಪ್ರಭು ಮುಂಡುರ್ ಈ ಚಿತ್ರದ ನಾಯಕ. ಶಶಿಕಾಂತ್ ಗಟ್ಟಿ ಈ ಚಿತ್ರದ ನಿರ್ದೇಶಕರು. ರಾಂಚಿಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದೆ ಎಂಬ ವಿವರ ಚಿತ್ರತಂಡದ್ದು. 2009ರಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕರ್ನಾಟಕದ ಒಂದಷ್ಟು ಮಂದಿ ತಂತ್ರಜ್ಞರನ್ನು ಕರೆಸಿಕೊಂಡು ಕೊಲ್ಲಲಾಗಿತ್ತು. ಈ ಅಂಶದ ಸುತ್ತ “ರಾಂಚಿ’ ಸಿನಿಮಾ ಸಾಗುತ್ತದೆಯಂತೆ.
ಚಿತ್ರದಲ್ಲಿ ಪ್ರಭು ಮುಂಡುರ್ ನಿರ್ದೇಶಕನ ಪಾತ್ರ ಮಾಡಿದ್ದಾರಂತೆ. ದಿವ್ಯ ಉರುಡುಗ ಈ ಚಿತ್ರದ ನಾಯಕಿ. ಅವರಿಲ್ಲಿ ಸಹಾಯಕ ನಿರ್ದೇಶಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಪಾತ್ರ ಪ್ರಮುಖವಾಗಿದ್ದು, ಆ ಪಾತ್ರವನ್ನು ಬಾಲಿವುಡ್ ನಟ ತೋತಾರಾಯ್ ಚೌಧರಿ ನಿರ್ವಹಿಸಿದ್ದಾರೆ. ಇನ್ನು, ಕಿರುತೆರೆಯಲ್ಲಿ ವಿಲನ್ ಆಗಿ ಮಿಂಚಿರುವ ಲಕ್ಷ್ಮಣ್ ಇಲ್ಲೂ ವಿಲನ್ ಆಗಿ ಅಬ್ಬರಿಸಿದ್ದಾರೆ.
ಚಿತ್ರಕ್ಕೆ ಮಣಿಕಾಂತ್ಕದ್ರಿ ಸಂಗೀತ, ಸಂದೀಪ್ ಚೌಟ -ಆಲ್ವಿನ್ ಫರ್ನಾಂಡೀಸ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. “ಡಬ್ಬಲ್ ಇಂಜಿನ್’ ಚಿತ್ರ ನಿರ್ಮಾಣ ಮಾಡಿರುವ ಅರುಣ್ಕುಮಾರ್.ಎನ್. ಅವರು ಗೆಳೆಯ ರುದ್ರಾನಂದ.ಆರ್.ಎನ್ ಅವರೊಂದಿಗೆ ಸೇರಿಕೊಂಡು ಸಿನಿಮಾ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ