ಒಂದು ಸೂಫಿ ಕತೆ: ಮಾಲೀಕರು ಯಾರು?


Team Udayavani, Jan 5, 2020, 3:59 AM IST

Udayavani Kannada Newspaper

ಬಹುಪುರಾತನ ಕುಟುಂಬವೊಂದರಲ್ಲಿ ಒಂದು ಹಳೆಯ ಸಂಗೀತ ಉಪಕರಣವಿತ್ತು. ಅದನ್ನು ನುಡಿಸುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಅದನ್ನು ಬಹಳ ಜೋಪಾನವಾಗಿ ಎತ್ತಿಟ್ಟುಕೊಂಡಿದ್ದರು.

ಕೆಲವು ತಲೆಮಾರುಗಳು ಕಳೆದ ಬಳಿಕ ಆ ಉಪಕರಣವನ್ನು ಎತ್ತಿ ಅಟ್ಟಕ್ಕೆ ಹಾಕಲಾಯಿತು. ಅದು ಅಲ್ಲಿ ಧೂಳು ತಿನ್ನುತ್ತ ಬಿದ್ದಿತ್ತು. ಅದೊಂದು ಬೃಹತ್‌ ಉಪಕರಣವಾದ್ದರಿಂದ ಅದನ್ನು ಎತ್ತಿಟ್ಟುಕೊಳ್ಳಲು ಬಹಳ ಜಾಗ ಬೇಕಾಗಿತ್ತು. ಒಂದು ದಿನ ಆ ಕುಟುಂಬದ ಹೊಸ ತಲೆಮಾರಿನ ಮಕ್ಕಳು, ಅದನ್ನು ಗುಜರಿಗೆ ಹಾಕಲು ನಿರ್ಧರಿಸಿದರು.

“ಇದೊಂದು ಹಳೇ ಸಂಗೀತ ಉಪಕರಣ ಧೂಳು ಮೆತ್ತಿಕೊಂಡಿದ್ದು, ಬಹಳ ಜಾಗ ತಿನ್ನುತ್ತದೆ’ ಎನ್ನುತ್ತ ಅದನ್ನು ಕಸದ ರಾಶಿಗೆ ಬಿಸಾಕಿದರು.

ಹಾಗೆ ಕಸದ ರಾಶಿಯ ಬಳಿಯಿಂದ ಅವರು ಕೆಲವು ಹೆಜ್ಜೆ ದೂರ ನಡೆಯುವಷ್ಟರಲ್ಲಿ ಒಬ್ಬ ಭಿಕ್ಷುಕ ಆ ಆರ್ಗನ್‌ ನುಡಿಸಲು ಶುರು ಮಾಡಿದ. ಆ ಆರ್ಗನ್‌ನ ಇಂಪು ಧ್ವನಿಗೆ ಇಡೀ ಬೀದಿಯ ಜನರು ಮಾರು ಹೋದರು. ಒಂದು ಗಂಟೆ ಹೊತ್ತು ಈ ಇಂಪಾದ ಸಂಗೀತ ಕೇಳಿ ಬಂತು. ಆ ಬೀದಿಯ ಜನರ ಕಣ್ಣಲ್ಲಿ ಭಿಕ್ಷುಕ ದೊಡ್ಡ ಸಂಗೀತಗಾರನಾಗಿಬಿಟ್ಟ.

ಇದನ್ನು ಗಮನಿಸಿದ ಪುರಾತನ ಕುಟುಂಬದ ಮಕ್ಕಳು, ಆರ್ಗನ್‌ ವಾಪಸ್‌ ಕೊಡುವಂತೆ ಭಿಕ್ಷುಕನ ಬಳಿ ವಿನಂತಿಸಿದರು.

ಭಿಕ್ಷುಕ ಹೇಳಿದ: “ಇದು ನಿಮ್ಮದಲ್ಲ. ಇದನ್ನು ಯಾರು ನುಡಿಸಬಲ್ಲರೋ, ಅವರಿಗೆ ಇದು ಸೇರುತ್ತದೆ. ನಿಮ್ಮ ಮನೆಯಲ್ಲಿ ಬಹುಕಾಲ ಇದ್ದ ಮಾತ್ರಕ್ಕೆ ಅದು ನಿಮ್ಮದಾಗುವುದಿಲ್ಲ. ಸಂಗೀತವೇ ಗೊತ್ತಿಲ್ಲದ ನಿಮಗೆ ಅದು ಸಲ್ಲುವುದಿಲ್ಲ ‘ ಎಂದು ಹೇಳಿದ.

ಆ ಬೀದಿಯ ಜನರೆಲ್ಲ ಭಿಕ್ಷುಕನ ಮಾತಿಗೆ ಸಮ್ಮತಿಸಿದರು.
ಹೌದು. ಯಾರಿಗೆ ಸಂಗೀತ ತಿಳಿದಿದೆಯೋ ಅವರಿಗೆ ಆ ಸಂಗೀತ ಉಪಕರಣ ಸಲ್ಲುತ್ತದೆ.
ಹಾಗೆಯೇ ಜೀವನ ಕೂಡ. ಯಾರು ಚಂದವಾಗಿ ಬಾಳಬಲ್ಲರೋ, ಅವರಿಗೆ ಜೀವನದ ಆಳ-ಅಗಲ ತಿಳಿಯುತ್ತ ಸಾಗುತ್ತದೆ.

ಟಾಪ್ ನ್ಯೂಸ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.