ಒಂದು ಕತೆಯ ಹಾಗೆ: ಆ ಮರ


Team Udayavani, Oct 20, 2019, 4:54 AM IST

c-12

ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು ಇಲ್ಲದಿದ್ದರೂ ಗಿಡ ದೊಡ್ಡದಾಗಿ ಮರವಾಗುತ್ತ ಬಂತು. ಮರ ಎತ್ತ¤ರೆತ್ತರಕ್ಕೆ ನಳನಳಿಸಿ ಬೆಳೆಯತೊಡಗಿದಂತೆ ಹಲವರ ತಲೆನೋವಿಗೆ ಕಾರಣವಾಯಿತು, ಸಲ್ಲದ್ದನ್ನು ಆಲೋಚಿಸುವ ಮನುಷ್ಯನಿಗೆ ಮಾತ್ರ ತಲೆನೋವು ಬರುತ್ತದೆ. “”ಇಲ್ಲೇ ಪಕ್ಕದಲ್ಲಿ ನನ್ನ ಕಾರನ್ನು ನಿಲ್ಲಿಸುತ್ತಿದ್ದೇನೆ, ಮುಂದಿನ ವರ್ಷದ ಮಳೆಗಾಲದಲ್ಲಿ ಇದರ ಕೊಂಬೆ ನನ್ನ ಕಾರಿನ ಮೇಲೆ ಬೀಳುವ ಸಾಧ್ಯತೆ ಇದೆ, ಇದರ ಕೊಂಬೆಯನ್ನಾದರೂ ಕಡಿಸಬೇಕು” ಎಂದರು ಲಂಚವನ್ನು ಬಲ ಕೈಯಲ್ಲಿ ಮುಟ್ಟದ ದೊಡ್ಡ ಕಾರಿನ ಒಡೆಯ ! ಅವರ ಹೆದರಿಕೆ ನಿವಾರಿಸಲು ಮರದ ಕೆಲವು ಕೊಂಬೆಗಳಿಗೆ ಕತ್ತಿ ಪ್ರಯೋಗವಾಯಿತು.

“”ನೋಡ್ರಿ ನಮ್ಮ ಮನೆಯ ಅಂಗಳಕ್ಕೆ ಮರದ ಎಲೆಗಳೆಲ್ಲ ಬಿದ್ದು ಕಸವೋ ಕಸ, ಮನೆಯ ಸುತ್ತಮುತ್ತ ಮರಗಳೇಕೆ ಬೇಕು?” ಎಂದರು ಮತ್ತೂಬ್ಬ ಮನೆಯೊಡೆಯ.

“”ಮರವನ್ನು ಹೀಗೆ ಬಿಟ್ಟರೆ ಇನ್ನೂ ಎತ್ತರಕ್ಕೆ ಬೆಳೆದು ಒಂದು ದಿನ ಗಾಳಿಗೆ ನಮ್ಮ ಮನೆಯ ಮೇಲೆ ಬೀಳುವುದು ಗ್ಯಾರಂಟಿ” ಎಂದರು ನಾಲ್ಕಂತಸ್ತಿನ ಮನೆಯ ರಾಯರು.

ಮನುಷ್ಯರ ಟೀಕೆಗಳು ಜಾಸ್ತಿಯಾದಂತೆ ಮತ್ತೆ ಕತ್ತಿ ಪ್ರಯೋಗವಾಯಿತು, ಈ ಸಲ ಮರದ ಪುಟ್ಟ ಒಂದೆರಡು ಕೊಂಬೆಗಳನ್ನು ಮಾತ್ರ ಬಿಟ್ಟು ಬೋಳಿಸಲಾಯಿತು.

ಮರದ ಪುಟ್ಟ ಒಂದು ಕೊಂಬೆಯೇ ದೊಡ್ಡದಾಯಿತು, ಅದರಲ್ಲೊಂದು ದಿನ 3-4 ಕೆಂಡಸಂಪಿಗೆ ಹೂವುಗಳು ಅರಳಿದವು. ಜೇನುನೊಣ, ದುಂಬಿ, ಚಿಟ್ಟೆಗಳು ಹಾರಾಡಿದವು. ಕೋಗಿಲೆಯೂ ಮನೆ ಮಾಡಿತು ಆ ಮರದಲ್ಲಿ. ಈಗ ಮರದಲ್ಲಿ ಬಿಡುವ ಸಂಪಿಗೆ ಹೂವುಗಳು ಲೇಔಟಿನ ಜನರ ದೇವರ ಕೋಣೆ ಸೇರುತ್ತಿವೆ.
ಮರ ಎಂದರೆ ಮನುಷ್ಯನಲ್ಲ , ಅದು ಬೇಗನೆ ಕ್ಷಮಿಸಿಬಿಡುತ್ತದೆ.

ಗೀತಾ ಕುಂದಾಪುರ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.