ಗುರುತರದ ವ್ಯಕ್ತಿತ್ವ


Team Udayavani, Dec 29, 2019, 4:10 AM IST

80

ಹಿರಿಯರಾದ ಎಂ. ರಾಮಚಂದ್ರರನ್ನು ಹಲವು ಬಾರಿ ನೋಡಿದ್ದೆ, ಅವರ ಚಿಂತನಗಳನ್ನು ರೇಡಿಯೋದಲ್ಲಿ ಕೇಳಿದ್ದೆ. ಹಲವು ಬರಹಗಳನ್ನು ಪತ್ರಿಕೆಯಲ್ಲಿ, ಕೆಲವು ಪುಸ್ತಕಗಳನ್ನು ಅಲ್ಲಿ-ಇಲ್ಲಿ ಓದಿದ್ದೆ. ಭಾಷಣಗಳನ್ನು ಕೇಳಿದ್ದೆ. ಆದರೆ, ನನಗವರು ಆತ್ಮೀಯರಾದದ್ದು ಇತ್ತೀಚೆಗೆ. ಅವರ ಹತ್ತು ಹಲವು ಪುಸ್ತಕದ ಒಂದು ಪ್ಯಾರಾವನ್ನು ನಾನು ನನ್ನ ಒಂದು ಬರಹದಲ್ಲಿ ಬಳಸುವ ಯೋಚನೆ ಮಾಡಿದ್ದೆ. ಅದಕ್ಕಾಗಿ ಅನುಮತಿ ಕೇಳ್ಳೋಣ ಎಂದು ನೀಲಾವರ ಸುರೇಂದ್ರ ಅಡಿಗರಿಗೆ ಫೋನ್‌ ಮಾಡಿ, ರಾಮಚಂದ್ರರವರ ಮೊಬೈಲ್‌ ಸಂಖ್ಯೆ ಪಡೆದೆ.

ವಯೋವೃದ್ದರೂ, ಜ್ಞಾನ‌ವೃದ್ದರೂ ಆಗಿದ್ದ ರಾಮಚಂದ್ರ ಸರ್‌ ಜೊತೆ ನನ್ನ ಪರಿಚಯ ಹೇಳಿಕೊಂಡು ಫೋನ್‌ ಮಾಡಿ ಮಾತನಾಡಿದೆ. ವಿಷಯ ತಿಳಿಸಿದೆ, ಅನುಮತಿ ಬೇಡಿದೆ. “”ಅಯ್ಯೋ ಪೂರ್ಣಿಮಾ! ಅದೊಂದು ನಾಣ್ನುಡಿ. ಅದನ್ನು ಯಾರು ಬೇಕಾದರೂ ಬಳಸಬಹುದು. ಅನುಮತಿಯ ಅಗತ್ಯ ಇಲ್ಲ ನಿಮಗೆ” ಎಂದರು ಬಹುವಚನದಲ್ಲಿ. ನಾನೆಂದೆ, “”ಸರ್‌, ನಾನು ತುಂಬಾ ಕಿರಿಯಳು. ನೀವು ನನ್ನನ್ನು “ನೀನು’ ಎನ್ನುವುದೇ ಚಂದ” ಎಂದೆ.

“”ಹೋ, ಹಾಗಾ! ನಿನ್ನ ಉಪಯೋಗಕ್ಕಾಗಿ ಮತ್ತು ನೀನಾಡಿದ ಈ ಕಿರಿಯಳು ಎಂಬ ಪದಕ್ಕಾಗಿ ನಿನಗೊಂದು ಪುಸ್ತಕ ಕಳುಹಿಸುವೆ. ಅದನ್ನು ನೀನು ನಿನ್ನ ಯಾವುದೇ ಬರವಣಿಗೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು” ಎಂದವರೇ ನನ್ನ ವಿಳಾಸ ಪಡೆದು ಉಷಾಸೂಕ್ತಿ ಎಂಬ ಅಮೂಲ್ಯ ಪುಸ್ತಕವನ್ನು ನನಗೆ ಕಳುಹಿಸಿ ಕೊಟ್ಟರು.

ಆ ಚಿಕ್ಕ ಚೆಂದದ ಪುಸ್ತಕವು ರಾಮಚಂದ್ರರವರು ಮಂಗಳೂರು ಆಕಾಶವಾಣಿಯಲ್ಲಿ ನೀಡಿದ ಚಿಂತನಗಳ ಸಂಗ್ರಹ! ಎಷ್ಟು ಅದ್ಭುತ ವಿಷಯಗಳನ್ನು ಒಳಗೊಂಡ ಹೊತ್ತಗೆಯದು. ಅದನ್ನು ತೆರೆದೊಡನೆ ರಾಮಚಂದ್ರರು ಹಸ್ತಾಕ್ಷರದಲ್ಲಿ ಬರೆದ ಶುಭಹಾರೈಕೆ. ಉಷಾ ಸೂಕ್ತಿ ನೋಡಿ ಮನ ತುಂಬಿ ಬಂತು. ಕಣ್ಣು ಹನಿಗೂಡಿತು. ನಾನು ಯಾರೆಂದೇ ತಿಳಿಯದ ಹಿರಿಯ ಸಾಹಿತಿಯೊಬ್ಬರ ಅಕ್ಕರೆಯನ್ನು ಅಕ್ಷರಗಳಲ್ಲಿ ಬಣ್ಣಿಸಲು ಪದ ಇಲ್ಲವಾಯಿತು. ಒಂದೇ ಗುಟುಕಿಗೆ ಉಷಾಸೂಕ್ತಿ ಓದಿದೆ. ರಾಮಚಂದ್ರರಿಗೆ ಫೋನ್‌ ಮಾಡಿದೆ. “”ಗುರುಗಳೇ, ಎಷ್ಟು ಅಮೂಲ್ಯ ಪುಸ್ತಕವನ್ನು ಕಳುಹಿಸಿದ್ದೀರಿ. ಓದಿ ಮುಗಿಸಿದೆ. ನನಗಂತೂ ಇದೊಂದು ನೆನಪಿನ ಬುತ್ತಿ ಮತ್ತು ಪ್ರೀತಿಯ ಆಸ್ತಿ” ಎಂದೆ.

ಹಾಗೆ, ನನಗೆ ಆ ಹಿರಿಯರ ಸತ್ಸಂಗ ದೊರೆಯಿತು. ಅವಳ ಉಳಿದ ಪುಸ್ತಕಗಳನ್ನು ಓದಲು ಹೇಳಿದರು. ಕೆಲವನ್ನು ಕಳುಹಿಸಿಕೊಟ್ಟರು.  ಒಮ್ಮೆಯಂತೂ, “”ನೋಡು ಪೂರ್ಣಿಮಾ, ನಮ್ಮ ಸಾಹಿತ್ಯ ಸಂಘದ ಕಾರ್ಯಕ್ರಮಕ್ಕೆ ನೀನೂ ಅತಿಥಿಯಾಗಿ ಬರಬೇಕು” ಎಂದಿದ್ದರು. ವಾರದಲ್ಲಿ ಒಂದೆರಡು ಬಾರಿ ನಾವು ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಅವರೇ ಹೇಳುತ್ತಿದ್ದಂತೆ ಕೈಬರಹದಲ್ಲಿಯೇ ಒಂದು ಪತ್ರ ಬರೆದಿಟ್ಟಿದ್ದೆ. “ತೀರ್ಥರೂಪ ಸಮಾನರಾದ…’ ಎಂದು ಆರಂಭಿಸಿದ ಆ ಪತ್ರದಲ್ಲಿ ಅವರ ಗುರುತ್ವದ ಕುರಿತು ಕೃತಜ್ಞತೆಯ ನುಡಿಗಳನ್ನು ಬರೆದಿದ್ದೆ. ಹೇಗೆ ಕಳುಹಿಸಲಿ ಈಗ ಈ ಪತ್ರವನ್ನು !

ಪೂರ್ಣಿಮಾ ಕಮಲಶಿಲೆ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.