ಓಡಿ ಹೋಗುವ ಮುನ್ನ!


Team Udayavani, Apr 18, 2018, 5:06 PM IST

odi-hoguva.jpg

ದೇಹದ ತೂಕ ಇಳಿಸೋಕೆ, ಆರೋಗ್ಯವನ್ನು ಕಾಪಾಡಿಕೊಳ್ಳೋಕೆ ಎಲ್ಲರೂ ಪಾಲಿಸುವ ಸುಲಭ ವ್ಯಾಯಾಮವೆಂದರೆ ಜಾಗಿಂಗ್‌. ವೈದ್ಯರು ಕೂಡ, “ದಿನಾಲೂ ಅರ್ಧ ಗಂಟೆ ಬಿರುಸಾಗಿ ವಾಕ್‌ ಮಾಡಿ ಅಥವಾ ಜಾಗ್‌ ಮಾಡಿ. ಒಂದೇ ತಿಂಗಳಲ್ಲಿ ಸ್ಲಿಮ್‌ ಆಗ್ತಿàರ’ ಅಂತ ಹೇಳುತ್ತಾರೆ. ದಿನಾಲೂ ಅರ್ಧ ಗಂಟೆ ಓಡಿದ್ರೆ ಮೂವತ್ತೇ ದಿನದಲ್ಲಿ 3 ಕೆ.ಜಿ ಕಡಿಮೆಯಾಗಬಹುದು ಎಂಬ ಮಾತು ಕೇಳಿದ್ದೇ ತಡ, ಜಾಗಿಂಗ್‌ ಶೂ ಹಾಕಿ ಓಡೋಕೆ ತಯಾರಾಗಿ ಬಿಡ್ತೀರಿ. ಸ್ವಲ್ಪ ತಾಳಿ, ಓಡುವ ಮುನ್ನ ಈ ಒಂದಷ್ಟು ವಿಚಾರಗಳು ನಿಮಗೆ ಗೊತ್ತಿರಲಿ.

1. ವಾರ್ಮ್ ಅಪ್‌ ವ್ಯಾಯಾಮ ಮಾಡಿ
ಡಾಕ್ಟರ್‌ ಹೇಳಿದ್ದಾರೆ ಅಂತ ಸುಮ್ಮನೆ ಓಡಿದರೆ ಸಾಲದು! ಓಡುವುದಕ್ಕೂ ಮುನ್ನ ಒಂದಷ್ಟು ವಾರ್ಮ್ ಅಪ್‌ ವ್ಯಾಯಾಮಗಳನ್ನು ಮಾಡಬೇಕು. ಆಗ ದೇಹದ ಸ್ನಾಯುಗಳು ಸಡಿಲವಾಗಿ, ಓಡುವುದು ಸುಲಭವಾಗುತ್ತದೆ. ಇಲ್ಲದಿದ್ದರೆ ಸ್ನಾಯುಗಳು ಇದ್ದಕ್ಕಿದ್ದಂತೆ ಹಿಡಿದುಕೊಳ್ಳುವ ಅಪಾಯವೂ ಇರುತ್ತದೆ. 

2. ಜಾಸ್ತಿ ತಿನ್ನೋದು ಒಳ್ಳೇದಲ್ಲ
ಅರ್ಧ ಗಂಟೆ ಓಡಿದರೆ ಸುಸ್ತಾಗುತ್ತೆ ಅಂತ ಯೋಚಿಸಿ, ಹೊಟ್ಟೆ ತುಂಬಾ ತಿಂದು ಆಮೇಲೆ ಜಾಗಿಂಗ್‌ ಹೋಗುವವರಿದ್ದಾರೆ. ಅದು ತಪ್ಪು. ಓಡುವಾಗ ನಮ್ಮ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಷ್ಟೇ ಅಲ್ಲದೆ, ಜೀರ್ಣಾಂಗ ವ್ಯವಸ್ಥೆಗೆ ಪೂರೈಕೆಯಾಗುವ ರಕ್ತ ಸಂಚಲನದಲ್ಲಿಯೂ ಏರುಪೇರಾಗುತ್ತದೆ. ಹಾಗಾಗಿ ಓಡುವ ಮುನ್ನ ಹೊಟ್ಟೆ ಆದಷ್ಟು ಖಾಲಿಯಿರಲಿ.

3. ಲೀಟರ್‌ಗಟ್ಟಲೆ ನೀರು ಕುಡೀಬೇಡಿ
ಬೆಳಗ್ಗೆ ಎದ್ದು ನೀರು ಕುಡಿದು ನಂತರ ಜಾಗಿಂಗ್‌ ಮಾಡುವ ಅಭ್ಯಾಸ ಕೆಲವರಿಗಿದೆ. ಹಾಗೆ ಮಾಡುವುದೂ ದೇಹಕ್ಕೆ ಒಳ್ಳೆಯದಲ್ಲ. ಲೀಟರ್‌ಗಟ್ಟಲೆ ನೀರು ಕುಡಿದರೆ ಹೊಟ್ಟೆ ಭಾರವಾಗಿ ಜಾಗ್‌ ಮಾಡುವುದು ಕಷ್ಟ ಅನಿಸುತ್ತದೆ. ಜಾಗಿಂಗ್‌ಗೂ ಮುನ್ನ ಅರ್ಧ ಗಂಟೆ ಏನನ್ನೂ ಸೇವಿಸಬೇಡಿ. ಹಾಗೇ ಕಾಫಿ, ಟೀ ಅಥವಾ ಹೆಚ್ಚಿನ ಸಕ್ಕರೆ ಅಂಶವಿರುವ ಎನರ್ಜಿ ಡ್ರಿಂಕ್ಸ್‌ಗಳ ಸೇವನೆಯೂ ಹಿತವಲ್ಲ. 

4. ಹೊಟ್ಟೆ ಖಾಲಿ ಇರಲಿ
ಕೆಲವರು ಎದ್ದ ಕೂಡಲೇ ನೇರ ಗ್ರೌಂಡಿಗೇ ಇಳಿದುಬಿಡುತ್ತಾರೆ. ಉಹೂಂ, ಹಾಗೆ ಮಾಡೋದು ತಪ್ಪು. ನಿತ್ಯ ಕರ್ಮಗಳನ್ನು ಮುಗಿಸದೇ ಜಾಗ್‌ ಮಾಡುವುದರಿಂದ ಕಿಡ್ನಿಯ ಆರೋಗ್ಯಕ್ಕೆ ತೊಂದರೆ ಆಗುವ ಸಾಧ್ಯತೆಗಳಿವೆ.  

5.  ದೇಹದ ಮಾತು ಕೇಳಿಸಿಕೊಳ್ಳಿ
ನಮ್ಮ ದೇಹ ಕೂಡ ಮಾತಾಡುತ್ತದೆ. ಆದರೆ, ನಾವದನ್ನು ಕೇಳಿಸಿಕೊಳ್ಳಬೇಕು ಅಷ್ಟೆ. ಯಾವುದೋ ಹೊಸ ಆಹಾರ, ವ್ಯಾಯಾಮ ದೇಹಕ್ಕೆ ಒಗ್ಗದಿದ್ದರೆ ಅದು ನಮಗೆ ಸೂಚನೆಗಳನ್ನು ನೀಡುತ್ತದೆ. ಹಾಗೆಯೇ, ಜಾಗಿಂಗ್‌ ಮಾಡಿದ ನಂತರ ಕೈಕಾಲು ನೋವು, ಅತಿಯಾದ ಸುಸ್ತು ಕಾಣಿಸಿಕೊಂಡರೆ ಜಾಗಿಂಗ್‌ಅನ್ನು ನಿಲ್ಲಿಸಿಬಿಡಿ. ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ವಯಸ್ಸು, ತೂಕ, ಆರೋಗ್ಯ ಸ್ಥಿತಿಯನ್ನು ಆಧರಿಸಿ ಸೂಕ್ತವಾದ ವ್ಯಾಯಾಮ ಮಾಡಿ. 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.