ಕನಸಿನೂರಿಗೆ ಪಯಣ


Team Udayavani, Jan 3, 2020, 4:35 AM IST

1

ಸಾಂದರ್ಭಿಕ ಚಿತ್ರ

ಪ್ರವಾಸ ಹೋಗಲಿಕ್ಕಿದೆ ಅಂತ ಹೇಳಿದರೆ ಸಾಕು; ಯಾವ ಸ್ಥಳಕ್ಕೆ, ಎಷ್ಟು ದಿನ, ಎಷ್ಟು ಖರ್ಚು ಅಂತ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೂ ತಲೆಕೆಡಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ನಮ್ಮ ಕಾಲೇಜಿನಲ್ಲೂ “ಪ್ರವಾಸ’ಕ್ಕೆ ಹೋಗಲಿಕ್ಕಿದೆ ಅಂತ ತೀರ್ಮಾನ ಮಾಡಿದ ಮೇಲೆ, ಒಂದಷ್ಟು ಚರ್ಚೆಗಳಾದ ಮೇಲೆ ದೆಹಲಿ, ಜೈಪುರ, ಆಗ್ರಾಗಳಿಗೆ ಪ್ರವಾಸ ಹೋಗುವುದು ಅಂತ ತೀರ್ಮಾನಕ್ಕೆ ಬರಲಾಯಿತು. ಅದೂ ನನ್ನ‌ ಕನಸಿನಂಥ ಊರಿಗೆ ಪಯಣ ಬೆಳೆಸುವ ಪ್ರವಾಸ ಅಂದ್ರೆ ಕೇಳಬೇಕೆ? ಅಲ್ಲಿ ಏನೆಲ್ಲಾ ನೋಡೋಕಿದೆ, ಯಾವಾಗ ಹೊರಡೋದು ಹೀಗೆ ಉಪನ್ಯಾಸಕರ ತಲೆ ತಿನ್ನುವುದಕ್ಕೆ ಶುರು ಮಾಡಿದೆವು.

ಮೊದಲೇ ಇವೆಲ್ಲಾ ಸೂಪರ್‌ ಆಗಿರೋ ಸ್ಥಳಗಳು. ನಮ್ಮ ಕಾಟ ತಡೆಯಲಾರದೆ ಪ್ರಾಧ್ಯಾಪಕರು ಒಂದಷ್ಟು ಸ್ಥಳಗಳ ಪಟ್ಟಿ ಕೊಟ್ಟರು. ಅದರಲ್ಲಿ ಆಗ್ರಾದ ತಾಜ್‌ಮಹಲ್‌ ಕೂಡ ಇದ್ದದ್ದನ್ನು ನೋಡಿ ನಮಗಂತೂ ತುಂಬಾ ಖುಷಿ. “ರೈಲಿನಲ್ಲಿ ಎರಡು ದಿನದ ಪ್ರಯಾಣವಿದೆ’ ಎಂದು ಹೇಳಿದಾಗ ಸ್ವಲ್ಪ ತಲೆಬಿಸಿ ಆಯಿತು. ಆದರೆ, ಅದನ್ನೆಲ್ಲ ಬದಿಗಿಟ್ಟು ಪ್ರವಾಸದ ದಿನ ಬರೋವರೆಗೂ ಕನಸು ಕಾಣುತ್ತಾ ಕೂತೆವು.

ಅಂತೂ ಇಂತೂ ಪ್ರವಾಸದ ದಿನ ಬಂದೇ ಬಿಟ್ಟಿತು. ಗಂಟುಮೂಟೆ ಎಲ್ಲಾ ಹಿಡ್ಕೊಂಡು ನಾವು ರೈಲಿನಲ್ಲಿ ಹೊರಟೆವು. “ಹೇಗಪ್ಪಾ ರೈಲಿನಲ್ಲಿ ಎರಡು ದಿನ ಪ್ರಯಾಣ ಮಾಡೋದು ಅಂತ ಅಂದುಕೊಂಡಿದ್ದ ನಾವು ರೈಲಿನಲ್ಲಿ ಕೂತು ಒಂದಷ್ಟು ದೂರ ಹೋದ ಮೇಲೆ ಗೊತ್ತಾದದ್ದು ರೈಲಿನ ಪ್ರಯಾಣ ಎಷ್ಟು ಮಜಾ ಕೊಡುತ್ತದೆ ಅಂತ! ಸುಂದರ ಪರಿಸರ, ಸುರಂಗ ಮಾರ್ಗಗಳು, ಬೆಟ್ಟಗುಡ್ಡಗಳು… ಹೀಗೆ ಇವೆಲ್ಲವನ್ನು ನೋಡುವ ಸದವಕಾಶ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಾತ್ರ ಸಿಗುವಂತಹ ಅಪೂರ್ವವಾದ ದೃಶ್ಯಗಳು.

ಪ್ರಕೃತಿಯ ಒಳಹೊಕ್ಕು ಪ್ರಯಾಣ ಬೆಳೆಸುವ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಹೀಗೆ ಒಂದೆರಡು ದಿನದ ರೈಲಿನ ಪ್ರಯಾಣ ಮುಗಿದು ಹೊಟೇಲ್‌ನತ್ತ ನಮ್ಮ ಪ್ರಯಾಣ ಸಾಗಿತು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ನಂತರ ದೆಹಲಿಯತ್ತ ನಮ್ಮ ಪಯಣ ಆರಂಭವಾಯಿತು. ದೆಹಲಿಯ ಕೆಂಪುಕೋಟೆ, ಇಂಡಿಯಾಗೇಟ್‌, ಕುತುಬ್‌ಮಿನಾರ್‌ನಂತಹ ಅಪರೂಪದ ಸ್ಥಳಗಳನ್ನು ನೋಡಿ ನಮಗೆ ಅಚ್ಚರಿಯುಂಟಾಯಿತು. ಮಾರನೆಯ ದಿನ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್‌ಮಹಲ್‌ನ್ನು ನೋಡಿ ಕಣ್ಣುಗಳಿಗೆ ಹಬ್ಬವುಂಟಾಯಿತು. ಮನಸ್ಸಿಗೆ ರೋಮಾಂಚನವೂ ಆಯಿತು. ಅಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ತಾಜ್‌ಮಹಲ್‌ನ ಸೌಂದರ್ಯವನ್ನು ಸವಿದುಕೊಂಡು, ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆವು. “ಬಂದೂ ಆಯಿತು. ಹೋಗಿಯೂ ಆಯಿತು’ ಎಂಬಂತೆ ಕೊನೆಯ ದಿನ ಜೈಪುರದಲ್ಲಿರುವ ಅರಮನೆಯನ್ನು ನೋಡಿದೆವು.

“ಪ್ರವಾಸ’ ಅನ್ನುವುದು ಕೇವಲ ಸ್ಥಳಗಳ ಭೇಟಿಯಲ್ಲ. ಸ್ನೇಹದ ಕೊಂಡಿಯನ್ನು ಇನ್ನಷ್ಟು ಬಿಗಿಗೊಳಿಸುವ, ಅಪೂರ್ವ ಕ್ಷಣವನ್ನು ಸೃಷ್ಟಿಸುವ, ಸಂತೋಷದ ಸವಿ ಪಯಣ.

ವಾಣಿ ಕಿನ್ನಿಗೋಳಿ
ಸರಕಾರಿ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.