ಇನ್ಫೋಸಿಸ್ ನಿಂದ ಕ್ಲೌಡ್ ರಾಡಾರ್ 2021 ಅನಾವರಣ
Team Udayavani, May 27, 2021, 4:26 PM IST
ಬೆಂಗಳೂರು: ಭವಿಷ್ಯದ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್ ನಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಇನ್ಫೋಸಿಸ್ (NYSE: INFY) ಇನ್ಫೋಸಿಸ್ ಕ್ಲೌಡ್ ರಾಡಾರ್ 2021 ಅನ್ನು ಅನಾವರಣಗೊಳಿಸಿದೆ.
ಇದು ಉದ್ದಿಮೆ ಕ್ಲೌಡ್ ಬಳಕೆ ಮತ್ತು ವ್ಯಾಪಾರ ಬೆಳವಣಿಗೆ ನಡುವಿನ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ. 6 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಒಂದು ಸ್ವತಂತ್ರ ಅಧ್ಯಯನದ ಪ್ರಕಾರ ಸಮರ್ಪಕವಾದ ಕ್ಲೌಡ್ ಅಳವಡಿಕೆ ಮಾಡಿಕೊಂಡಲ್ಲಿ 414 ಬಿಲಿಯನ್ ಡಾಲರ್ ವರೆಗೆ ನಿವ್ವಳ ಲಾಭಗಳನ್ನು ಗಳಿಸಲು ಸಾಧ್ಯವಾಗುತ್ತದೆ.
ಇನ್ಫೋಸಿಸ್ ನ ಸಂಶೋಧನಾ ವಿಭಾಗವಾಗಿರುವ ಇನ್ಫೋಸಿಸ್ ನಾಲೆಜ್ ಇನ್ ಸ್ಟಿಟ್ಯೂಟ್ (ಐಕೆಐ) ಈ ಕ್ಲೌಡ್ ರಾಡಾರ್ 2021 ರ ಸಮೀಕ್ಷೆಯನ್ನು ಕೈಗೊಂಡಿದೆ. ಈ ಸಮೀಕ್ಷೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ 2,500 ಕ್ಕೂ ಅಧಿಕ ಕಂಪನಿಗಳು ಕ್ಲೌಡ್ ಬಳಕೆ ವಿಚಾರದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿವೆ. ಇದು ಕ್ಲೌಡ್ ಗೆ ಸಂಬಂಧಿಸಿದಂತೆ ವ್ಯಾಪಾರ ಕಾರ್ಯದಕ್ಷತೆಯ ಗುರಿಗಳ ವ್ಯಾಪ್ತಿಯನ್ನು ಒಳಗೊಂಡಿದೆ ಮತ್ತು ಮಾರುಕಟ್ಟೆಯ ವೇಗ ಹಾಗೂ ಸಾಮರ್ಥ್ಯಗಳ ನಿರ್ದಿಷ್ಟವಾದ ಸಂಪರ್ಕಗಳನ್ನು ಪತ್ತೆ ಮಾಡಿದೆ. ಹೊಸ ಪರಿಹಾರಗಳು ಮತ್ತು ಸೇವೆಗಳನ್ನು ಕ್ಷಿಪ್ರವಾಗಿ ಮಾರುಕಟ್ಟೆಗೆ ತರುವಾಗ ಕ್ಲೌಡ್ ಬಳಸಿಕೊಂಡಾಗ ಪ್ರಬಲವಾದ ಲಾಭದ ಸಂಪರ್ಕ ಅಂದರೆ ಲಿಂಕ್ ಅನ್ನು ಗುರುತಿಸಲಾಗಿದೆ. ಈ ಹೂಡಿಕೆಗಳು ಎಐ ಮತ್ತು ಆಟೋಮೇಷನ್ ಮೇಲೆ ಪ್ರಭಾವ ಬೀರುವಂತಹ ಮತ್ತು ಕ್ಲೌಡ್ ಆಧಾರಿತ ಹೊಸ ಆದಾಯದ ಮೂಲಗಳನ್ನು ಹೊಂದಲು ಒಂದು ಅಡಿಪಾಯವನ್ನು ಹಾಕಿಕೊಡುತ್ತವೆ.
ವ್ಯಾಪಾರದಲ್ಲಿನ ಲಾಭದ ಪ್ರಗತಿ ಮತ್ತು ಹೊಸ ಪರಿಹಾರಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಹಾಗೂ ಆರಂಭ ಮಾಡಲು ಮಾರುಕಟ್ಟೆಗೆ ಹೊಸ ಕಾರ್ಯಸೂಚಿಯನ್ನು ತರಲು ಕ್ಲೌಡ್ ಬಳಕೆಯ ನಡುವಿನ ನಿರ್ದಿಷ್ಟ ಲಿಂಕ್ ಗಳು ಈ ಅಧ್ಯಯನದ ವೇಳೆ ಕಂಡುಬಂದಿವೆ. ಇದಲ್ಲದೇ ಡೇಟಾದಿಂದ ಹೊಸ ಮೌಲ್ಯವನ್ನು ಉತ್ಪಾದಿಸುವ ಹಾಗೂ ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವ ಕ್ಲೌಡ್ ಸಾಮರ್ಥ್ಯವು ಲಾಭದ ಬೆಳವಣಿಗೆಗೆ ಲಿಂಕ್ ಗಳನ್ನು ಕಲ್ಪಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಿಡ್ಲ್ ರೇಂಜ್ ನಲ್ಲಿ ಉತ್ತಮ ಫೋನ್ : ಒನ್ ಪ್ಲಸ್ 10 ಆರ್
Social Media Day: ತುಸು ಹೆಚ್ಚು ಅಭಿವ್ಯಕ್ತಿಗೊಳ್ಳುವಂತೆ ಆಹ್ವಾನಿಸುತ್ತಿದೆ ‘ಕೂ’ ಅಭಿಯಾನ!
ಚಂದ್ರನತ್ತ ಕ್ಯಾಪ್ಸ್ಟೋನ್ ಕ್ಯೂಬ್ಸ್ಯಾಟ್ ಪಯಣ
ಉದ್ಯೋಗದಲ್ಲಿ ಲಿಂಗ ತಾರತಮ್ಯ ರಹಿತ ನೀತಿ ಅನುಸರಿಸುತ್ತಿರುವ ಅಮೆಜಾನ್ ಇಂಡಿಯಾ
ಒನ್ ಪ್ಲಸ್ ನೋರ್ಡ್ 2ಟಿ ವಾಚ್ ಶೀಘ್ರ ಮಾರುಕಟ್ಟೆಗೆ: ವಿಶೇಷತೆಗಳ ಬಗ್ಗೆ ಇದೆ ಕುತೂಹಲ
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕಿ: ಇಂದಿನಿಂದ ‘ಬೈರಾಗಿ’ ದರ್ಶನ
ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸಿದ್ದಾಪುರ (ಉ.ಕ.)
ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇಂದು ಇಡಿ ವಿಚಾರಣೆ
ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!