ಫೇಸ್ ಬುಕ್ ನಕಲಿ ಖಾತೆ ಐದೇ ನಿಮಿಷದಲ್ಲಿ ರಿಮೂವ್ ಮಾಡಿಸಲು ಹೀಗೆ ಮಾಡಿ


Team Udayavani, Jun 7, 2021, 3:45 PM IST

ಫೇಸ್ ಬುಕ್ ನಕಲಿ ಖಾತೆ ಐದೇ ನಿಮಿಷದಲ್ಲಿ ರಿಮೂವ್ ಮಾಡಿಸಲು ಹೀಗೆ ಮಾಡಿ

ಫೇಸ್‍ಬುಕ್‍ ನಲ್ಲಿ ಅನೇಕರು ನನ್ನ ಹೆಸರಿನ ಇನ್ನೊಂದು ಅಕೌಂಟ್‍ ರಚಿಸಲಾಗಿದೆ. ಫ್ರೆಂಡ್‍ ರಿಕ್ವೆಸ್ಟ್ ಬಂದರೆ ಆಕ್ಸೆಪ್ಟ್ ಮಾಡಬೇಡಿ. ನನ್ನ ಹೆಸರಿನಲ್ಲಿ ಮೆಸೆಂಜರ್‍ ಗೆ ಬಂದು ಹಾಯ್‍ ನಾನು ತೊಂದರೆಯಲ್ಲಿದ್ದೇನೆ ಹಣ ಕಳುಹಿಸಿ ಎಂದು ಕೇಳಿದರೆ ಕೊಡಬೇಡಿ ಎಂದು ಮನವಿ ಮಾಡುವುದನ್ನು ನೋಡಿದ್ದೇವೆ.

ಇನ್ನೂ ಕೆಲವರು ನನ್ನ ಅಕೌಂಟನ್ನು ಹ್ಯಾಕ್‍ ಮಾಡಲಾಗಿದೆ ಎಂದು ಹಾಕುತ್ತಾರೆ. ಅದಕ್ಕೆ ಕೆಲವರು ನಿಮ್ಮ ಪಾಸ್ ವರ್ಡ್‍ ಬದಲಿಸಿ ಎಂದು ಹಾಕುತ್ತಾರೆ. ಇದರ ಅಗತ್ಯ ಇಲ್ಲ. ನಿಮ್ಮ ಅಕೌಂಟ್‍ ಹ್ಯಾಕ್‍ ಆಗಿರಲ್ಲ. ನಿಮ್ಮ ಫೇಸ್‍ ಬುಕ್‍ ಅಕೌಂಟ್‍ ಹ್ಯಾಕ್‍ ಆಗೋದು ಎಂದರೆ, ನಿಮ್ಮ ಒರಿಜಿನಲ್‍ ಅಕೌಂಟ್‍ ಗೇ ಕನ್ನ ಹಾಕೋದು. ಆದರೆ ಇಲ್ಲಿ, ನಿಮ್ಮ ಒರಿಜಿನಲ್‍ ಅಕೌಂಟ್‍ ಗೆ ಏನೂ ಆಗಿರಲ್ಲ. ನಿಮ್ಮದೇ ಹೆಸರು, ಇನಿಷಿಯಲ್‍, ಅದೇ ಫೊಟೋ ಹಾಕಿ ಇನ್ನೊಂದು ಅಕೌಂಟ್‍ ರಚಿಸಲಾಗಿರುತ್ತದೆ.

ಈ ನಕಲಿ ಅಕೌಂಟನ್ನು ಕೇವಲ ಐದು ನಿಮಿಷದಲ್ಲಿ ಫೇಸ್‍ಬುಕ್‍ ನಿಂದ ತೆಗೆಸಿಹಾಕಬಹುದು. ಈ ಕೆಳಗೆ ವಿವರಿಸಿದ ಕ್ರಮವನ್ನು ಅನುಸರಿಸಿ, ನಿಮ್ಮ ಅಥವಾ ನಿಮ್ಮ ಗೆಳೆಯರ ನಕಲಿ ಅಕೌಂಟನ್ನು ತಕ್ಷಣ ರಿಮೂವ್‍ ಮಾಡಿಸಬಹುದು.

ಮೊದಲಿಗೆ ನಿಮ್ಮ ಗೆಳೆಯರ ಹೆಸರಿನಲ್ಲಿ ನಿಮಗೆ ಫ್ರೆಂಡ್‍ ರಿಕ್ವೆಸ್ಟ್ ಬರುತ್ತದೆ. ಅದಾಗಲೇ ನೀವು ಅವರಿಗೆ ಫ್ರೆಂಡ್‍ ಆಗಿರುತ್ತೀರಿ. ಆದರೂ ಮತ್ತೊಮ್ಮೆ ಅದೇ ಹೆಸರಿನಲ್ಲಿ ಫ್ರೆಂಡ್‍ ರಿಕ್ವೆಸ್ಟ್ ಬಂದಿದೆಯಲ್ಲ ಎಂದು ಅನುಮಾನಿಸಿ. ಆ ರಿಕ್ವೆಸ್ಟ್ ಸ್ವೀಕರಿಸಬೇಡಿ. ಆ ಅಕೌಂಟ್‍ ನಲ್ಲಿ ರೆಸ್ಪಾಂಡ್‍ ಪಕ್ಕದಲ್ಲಿ ಮೂರು ಚುಕ್ಕಿ ಇರುತ್ತವೆ ಅದನ್ನು ಒತ್ತಿ. ಅಲ್ಲಿ ನಿಮ್ಮ ಗೆಳೆಯರ ಹೆಸರಿನ ಪ್ರೊಫೈಲ್‍ ಸೆಟ್ಟಿಂಗ್ಸ್ ಇರುತ್ತದೆ. ಉದಾಹರಣೆಗೆ ನಟರಾಜ್‍ ಎಂಬ ಹೆಸರಿನ ಪ್ರೊಫೈಲ್‍ ಲಿಂಕ್‍ ಅಂತಿದೆ. ಅದರ ಕೆಳಗೆ ಫೇಸ್‍ಬುಕ್‍ .ಕಾಂ./ರಮೇಶ್‍ ಕುಮಾರ್ ಅಂತಿದೆ. ಅಸಲಿಗಾದರೆ ನಟರಾಜ್‍  ಹೆಸರಿನ ಮುಂದೆ ರಮೇಶ್‍ ಕುಮಾರ್ ಅಂತ ಬರುವುದಿಲ್ಲ. ನಿಮ್ಮ ಗೆಳೆಯರ ಒರಿಜಿನಲ್‍ ಖಾತೆಯಾದರೆ ಫೇಸ್ ಬುಕ್‍ .ಕಾಂ/ನಟರಾಜ್‍ ಅಂತಲೇ ಇರುತ್ತದೆ. ಅದು ನಮ್ಮ ಫೇಸ್ ಬುಕ್‍ ಯುನಿಕ್‍ ಐಡಿ. ಅಲ್ಲಿ ನಕಲಿ ಅಕೌಂಟ್‍ ಮಾಡಿದವನು ಪ್ರದರ್ಶನದ ಹೆಸರನ್ನಷ್ಟೇ ಬದಲಿಸಿದ್ದಾನೆ. ಯುನಿಕ್‍ ಐಡಿ ನಕಲಿ ಖಾತೆ ಸೃಷ್ಟಿಸಿದವನ ಹೆಸರಿನಲ್ಲಿರುತ್ತದೆ. ಅಥವಾ ಯಾವ್ಯಾವದೋ ಅಂಕಿಗಳನ್ನು ಒತ್ತಿರುತ್ತಾನೆ. ಅದನ್ನು ಗಮನಿಸಿಕೊಳ್ಳಿ. ಅಲ್ಲಿಗೆ ಅದು ನಕಲಿ ಅಕೌಂಟ್‍ ಎಂಬುದು ಖಚಿತ.

ಇದನ್ನೂ ಓದಿ:ಟೆಲಿಗ್ರಾಂ ವಾಟ್ಸ್ಯಾಪ್ ಗಿಂತ ಹೇಗೆ ಭಿನ್ನ.? ಟೆಲಿಗ್ರಾಂ ಬಗ್ಗೆ ನಿಮಗೆಷ್ಟು ಗೊತ್ತು..?

ಮುಂದಿನ ಹಂತ ಅದೇ ಪುಟದಲ್ಲಿ ಮೇಲೆ ಫೈಂಡ್‍ ಸಪೋರ್ಟ್ ಆರ್‍ ರಿಪೋರ್ಟ್ ಪ್ರೊಫೈಲ್‍ ಅಂತಿದೆ. ಅದನ್ನು ಒತ್ತಿ. ಆಗ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲನೆಯ ಆಯ್ಕೆ Pretending to Be Someone ಅಂತಿರುತ್ತದೆ. ಅದನ್ನು ಒತ್ತಿ. ಮುಂದಿನ ಪುಟದಲ್ಲಿ Me, A Friend, Celebrity ಅಂತ ಬರುತ್ತದೆ.  ಆ ನಕಲಿ ಅಕೌಂಟ್‍ ನಿಮ್ಮದೇ ಆಗಿದ್ದರೆ, Me ಒತ್ತಿ, ನಂತರ Next ಒತ್ತಿ Submit/Done ಕೊಡಿ.

ಆ ಅಕೌಂಟ್‍ ನಿಮ್ಮ ಗೆಳೆಯರಾದರೆ A Friend ಒತ್ತಿ. ಆಗ ಮುಂದೆ, Which Friend  ಎಂದು ಕೇಳುತ್ತದೆ.  ಅದರ ಕೆಳಗೆ ಸರ್ಚ್ ಬಾರ್‍ ನಲ್ಲಿ ನಿಮ್ಮ ಗೆಳೆಯರ ಅಕೌಂಟಿನ ಸರಿಯಾದ ಹೆಸರನ್ನು ಒತ್ತಿ ಆಗ ನಿಮ್ಮ ಗೆಳೆಯರ ಅಕೌಂಟ್‍ ಹೆಸರು ಬರುತ್ತದೆ.  ಆ ಹೆಸರಿನ ಮೇಲೆ ಒತ್ತಿ. ಆಗ Does this go against our Community Standards? ಅಂತ ಬರುತ್ತದೆ. ಅದರ ಕೆಳಗೆ Submit ಅಂತ ನೀಲಿ ಬಣ್ಣದಲ್ಲಿ ಇರುತ್ತದೆ. ಅದರ ಮೇಲೆ Receive notifications about this report ಅಂತಿರುತ್ತದೆ. ಅದನ್ನು ಟಿಕ್‍ ಮಾಡಿ ಸಬ್‍ಮಿಟ್‍ ಕೊಡಿ. ಇಷ್ಟು ಮಾಡಿದರೆ Thank you, we have received your report ಬರುತ್ತದೆ. ಇಷ್ಟು ಮಾಡಿದರೆ ಸಾಕು. ನಂತರ ಐದೇ ನಿಮಿಷದಲ್ಲಿ ಆ ನಕಲಿ ಅಕೌಂಟ್‍ ಡಿಲೀಟ್‍ ಆಗುತ್ತದೆ. ನಿಮ್ಮ ಮೇಲ್‍ ಗೆ ಮೆಸೇಜ್‍ ಸಹ ಬರುತ್ತದೆ. ಮತ್ತೆ ನಿಮ್ಮ ಗೆಳೆಯನ ಹೆಸರು ಹಾಕಿ ಹುಡುಕಿದರೆ, ನಕಲಿ ಖಾತೆ ಡಿಲೀಟ್‍ ಆಗಿ, This Page isn’t available Right Now ಎಂಬುದು ಬರುತ್ತದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.