Social Media Day: ತುಸು ಹೆಚ್ಚು ಅಭಿವ್ಯಕ್ತಿಗೊಳ್ಳುವಂತೆ ಆಹ್ವಾನಿಸುತ್ತಿದೆ ‘ಕೂ’ ಅಭಿಯಾನ!
Team Udayavani, Jun 30, 2022, 1:19 PM IST
ಬೆಂಗಳೂರು: ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸುತ್ತಾ, ಭಾರತದ ಅತ್ಯಂತ ಆತ್ಮೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳಲ್ಲಿ ಒಂದಾದ ಕೂ ವೇದಿಕೆ ರೋಮಾಂಚಕ ಅಭಿಯಾನವನ್ನು ಪ್ರಾರಂಭಿಸಿದೆ.
ಪ್ರೀತಿ ಇರಲಿ, ಅಪೇಕ್ಷೆ ಇರಲಿ ನಾವು ಭಾರತೀಯರು ಎಲ್ಲಾ ವಿಷಯದಲ್ಲೂ ಒಂದು ಮುಷ್ಟಿ ಹೆಚ್ಚು ತೋರ್ಪಡಿಸುತ್ತೇವೆ ಎನ್ನುವುದನ್ನು ಈ ಅಭಿಯಾನ ಸಾರುತ್ತದೆ. ಒಂದು ಅದ್ಭುತ ವಿಡಿಯೋ ಮೂಲಕ ಜನರು ತಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲ ಹೆಚ್ಚಿನದನ್ನ ಮೆಲುಕು ಹಾಕುವುದನ್ನು ಮತ್ತು ನೈಜ ಸಮಯದಲ್ಲಿ 10 ಭಾಷೆಗಳಲ್ಲಿ ಕೂ ಮಾಡುವ ಮೂಲಕ ತುಸು ಹೆಚ್ಚು ಅಭಿವ್ಯಕ್ತಿಸುವುದನ್ನು ಈ ಅಭಿಯಾನ ಪ್ರೇರೇಪಿಸುತ್ತದೆ.
ತಾಯಿಯೊಂದಿಗಿನ ತುಸು ಹೆಚ್ಚೆನಿಸುವ ನಾಟಕೀಯ ಮಾತುಗಳು, ಸಿನಿಮಾದ ವಿಶೇಷ ಹೆಚ್ಚುವರಿ ಡೈಲಾಗ್ ಗಳು, ಹೆಚ್ಚುವರಿ ನಿದ್ರೆ, ಗೋಲ್ ಗಪ್ಪಾಗಳನ್ನು ಸವಿಯುವಾಗ ಬಾಯಿ ಸೇರುವ ಹೆಚ್ಚುವರಿ ಪಾನಿ ಪೂರಿಗಳು..! ಹೀಗೆ ದಿನನಿತ್ಯದ ಜೀವನದ ಸನ್ನಿವೇಶಗಳು ಮತ್ತು ಸಂಭಾಷಣೆಗಳನ್ನು ಚಿತ್ರಿಸುವ ವಿಡಿಯೋ ಭಾರತೀಯರು ನಲುಮೆಯಿಂದ ಆನಂದಿಸುವ ಹೆಚ್ಚುವರಿಗಳನ್ನು ಆನಂದಗಳನ್ನು ಬಿಂಬಿಸುತ್ತದೆ.
ವಿಡಿಯೋದ ಲಿಂಕ್ – https://www.youtube.com/shorts/P0o3HPVLRMs
ಬದುಕಿನ ಎಲ್ಲಾ ಹೆಚ್ಚುವರಿ ಆಂಶಗಳನ್ನು ಸಂಭ್ರಮಿಸುತ್ತ ಜೀವಿಸುವ ಬಳಕೆದಾರರನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸುವ ಮೂಲಕ #ತುಸುಹೆಚ್ಚುಸಾಮಾಜಿಕವಾಗೋಣ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಕವನಗಳು, ಆಧ್ಯಾತ್ಮಿಕತೆ, ಸಂಗೀತ ಅಥವಾ ಪಾಕವಿಧಾನಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುವ ಬಳಕೆದಾರರನ್ನು ಕೂ ವೇದಿಕೆ ಒಳಗೊಂಡಿದೆ, ಹಾಗಾಗಿ ಈ ಅಭಿಯಾನ ಇಡೀ ಭಾರತದೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.
ಭಾಷೆಯ ಗಡಿಯನ್ನು ಮೀರಲು ಈ ಅಭಿಯಾನವು ಪ್ರೇರಣೆ ನೀಡುವ ಮೂಲಕ ಇತರ ರಾಜ್ಯಗಳ, ಸಂಸ್ಕೃತಿಗಳ ಜನರೊಂದಿಗೆ ಸಂವಹನ ನಡೆಸಲು ಮತ್ತು ಭಾರತವನ್ನು ಅರಿಯಲು ಕೂ ವೇದಿಕೆ ಆಳವಾದ ಸಾಮಾಜಿಕ ಸಂಪರ್ಕವನ್ನು ನಿರ್ಮಿಸುತ್ತದೆ. ಈಗ ಕೂ ಜೊತೆಗೆ ಭಾರತ ಯಾವಾಗಲೂ ತುಸುಹೆಚ್ಚು ಸಾಮಾಜಿಕವಾಗಿರಲಿದೆ ಎಂಬ ಸಂದೇಶದ ಸುತ್ತ ಈ ಅಭಿಯಾನವನ್ನು ಹೆಣೆಯಲಾಗಿದೆ.
#ತುಸುಹೆಚ್ಚುಸಾಮಾಜಿಕವಾಗೋಣ – ವೇದಿಕೆಯ ಅಂತರ್ಗತ ಸ್ವರೂಪವನ್ನು ಎತ್ತಿ ತೋರಿಸುತ್ತದೆ, ಇದು ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರರಿಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮವನ್ನು ಅನುಭವಿಸಲು ಮತ್ತು ಆನಂದಿಸಲು ಮುಕ್ತ ಅವಕಾಶ ನೀಡುತ್ತದೆ. ಆರಾಮದಾಯಕ ಭಾಷೆಯಲ್ಲಿ ಮತ್ತು ಆಯ್ಕೆಯ ವಿಷಯದಲ್ಲಿ ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನೂ ಒದಗಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ