UV Fusion: ಅಜ್ಜನ ಚೀಲ


Team Udayavani, Oct 9, 2023, 4:45 PM IST

9-fusion-grandfathe’s-bag

ನಾನು ಚಿಕ್ಕವಳಿದ್ದಾಗ ಅಜ್ಜನ ಹತ್ತಿರ ನೋಡಿರುವುದು ಯಾವಾಗಲೂ ಅವನ ಜತೆಗೇ ಇರುವ ಚೀಲ.

ಅದೊಂದು ಬಟ್ಟೆಯಿಂದ ಮಾಡಿದ ಕಪ್ಪು ಬಣ್ಣದ ಚೀಲ. ಕಪ್ಪು ಬಣ್ಣದ ಮೇಲೆ ಬಿಳಿ ಗೆರೆಗಳು, ಅಂತಸ್ತಿನ ಮೇಲೆ ಅಂತಸ್ತಿನಂತೆ ಚೀಲಕ್ಕೆ ಮೂರು ಖಾನೆಗಳು. ಆ ಖಾನೆಯೊಳಗೆ ಮತ್ತೂಂದು ಖಾನೆ. ಹಣವನ್ನು ಇಟ್ಟುಕೊಳ್ಳಲು ಚೀಲವೇ ಭದ್ರವಾದ ಖಜಾನೆ. ಹಣವನ್ನು ಇಟ್ಟುಕೊಳ್ಳಲು ಚೀಲವಿರುವಾಗ ಬ್ಯಾಂಕ್‌ ಯಾಕೆ ಬೇಕು ಎಂದು ಹೇಳುತ್ತಿದ್ದ. ಮಕ್ಕಳು ಕೊಟ್ಟ ಹಣವನ್ನು  ಈ ಚೀಲದಲ್ಲಿಯೇ ಇಟ್ಟುಕೊಳ್ಳುತ್ತಿದ್ದ. ಇನ್ನೂ ಆ ಚೀಲದಲ್ಲಿ ಹಣದ ಜತೆ ವೀಳ್ಯದೆಲೆ, ಅಡಿಕೆ, ಸುಣ್ಣ ಮತ್ತು ಆಗಿನ ಕಾಲದ ಒಂದಾಣೆ, ನಾಲ್ಕಾಣೆ ಇರುತ್ತಿದ್ದವು. ಹೀಗೆ ಚೀಲದ ಮೂರು ಖಾನೆಯಲ್ಲಿ ಒಂದೊಂದು ವಸ್ತುವನ್ನು ಇಟ್ಟುಕೊಳ್ಳುತ್ತಿದ್ದ.

ಮೊಮ್ಮಕ್ಕಳು ಏನನ್ನಾದರೂ ಕೇಳಿದ ಕೂಡಲೇ ಅಜ್ಜ ಚೀಲದಿಂದ ನಾಲ್ಕಾಣೆ ಅಥವಾ ಒಂದಾಣೆಯನ್ನೋ ತೆಗೆದು ಕೊಡುತ್ತಿದ್ದ. ನಮಗೆ ಎಲ್ಲಿಲ್ಲದ ಸಂತೋಷ. ಆ ಚೀಲದ ಕೇಂದ್ರಸ್ಥಾನ ಅಜ್ಜನ ತಲೆದಿಂಬು. ಅಜ್ಜನಿಗೆ ನನ್ನ ಮೇಲೆ ತುಂಬಾ ಪ್ರೀತಿ. ಅಜ್ಜ ಅಂಗಡಿಗೆ ಹೋದಾಗ ತಂದ ತಿನಸುಗಳನ್ನು ಅವನ ಚೀಲದಲ್ಲಿ ಇಟ್ಟುಕೊಂಡು ಬಂದು ನನಗೆ ಕೊಡುತ್ತಿದ್ದ.

ನನಗೆ ಅಜ್ಜನ ಚೀಲದಲ್ಲಿ ಮತ್ತೆ ಏನೆಲ್ಲ ಇವೆ ಎಂದು ನೋಡಬೇಕೆಂಬ ಕುತೂಹಲ. ಒಂದು ದಿನ ಅಜ್ಜನ ಚೀಲವನ್ನು ನೋಡಿದೆ. ಚೀಲದ ಒಳಗೆ ಎಲೆ, ಅಡಿಕೆ, ಸುಣ್ಣದ ಜತೆ ಹಳೆಯದಾದ ಒಂದು ಕೈ ಗಡಿಯಾರ, ಅಜ್ಜನ ಫೋಟೋ, ಬೀಡಿಗಳು, ಸಣ್ಣ ಬಾಚಣಿಗೆ! ತಲೆಯಲ್ಲಿ ಕೂದಲು ಇಲ್ಲವಾದರೂ ಇರುವ ಸ್ವಲ್ಪ ಕೂದಲನ್ನು ಬಾಚಿಕೊಳ್ಳಲು ಬಾಚಣಿಗೆ ಇಟ್ಟುಕೊಳ್ಳುವುದು ಅಜ್ಜನ ಅಭ್ಯಾಸ.

ಅಜ್ಜ ಹೊರಗಡೆ ಎಲ್ಲಿ ಹೋಗುವುದಾದರೂ ತನ್ನ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದ. ಅವನಿಗೆ ಆ ಚೀಲ ನಿಧಿ ಇದ್ದಂತೆ. ಎಷ್ಟೇ ಹೊಸ ಹೊಸ ತರಹದ ಚೀಲಗಳು ಬಂದರೂ ಅಜ್ಜನು  ತಾನು ಹಲವಾರು ವರ್ಷಗಳಿಂದ ಬಳಸುತ್ತಿದ್ದ  ಚೀಲವನ್ನೇ ತೆಗೆದುಕೊಂಡು ಹೋಗುತ್ತಿದ್ದ. ಯಾವುದನ್ನು ಮರೆತು ಬಿಟ್ಟು ಬಂದರೂ   ಚೀಲವನ್ನು ಮಾತ್ರ ಯಾವತ್ತೂ ಮರೆತಿಲ್ಲ.  ಅಜ್ಜನಿಗೆ ಆ ಚೀಲದ ಮೇಲೆ ಅಷ್ಟು ಪ್ರೀತಿ, ಕಾಳಜಿ. ಅಜ್ಜ ಮರಣಹೊಂದಿದ ಬಳಿಕ ಚೀಲವು ಅವನು ಮಲಗುವ ಜಾಗದಲ್ಲಿ ಅನಾಥವಾಗಿ ಬಿದ್ದಿತ್ತು. ನಾನು ಚೀಲವನ್ನು ತೆಗೆದುಕೊಂಡೆ. ನನಗೆ ಎಲ್ಲಿಲ್ಲದ ಸಂತೋಷ. ಅದರ ಜತೆ ಅಜ್ಜನಿಲ್ಲ ಎಂಬ ದುಃಖ. ಚೀಲವನ್ನು ತೆಗೆದುಕೊಂಡು ಬಂದು ನನ್ನ ಬಳಿಯಲ್ಲಿ ಇಟ್ಟುಕೊಂಡೆ ಅಜ್ಜನ ಚೀಲ ಇಂದಿಗೂ ನನ್ನಲ್ಲೇ ಇದೆ ಅಜ್ಜನ ನೆನಪಿಗೋಸ್ಕರ.

-ಪಲ್ಲವಿ ಹೆಗಡೆ

ಎಂ.ಎಂ., ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.