Election Polls: ಜವಾಬ್ದಾರಿಯುತ ನಾಗರಿಕರಾಗೋಣ


Team Udayavani, Mar 10, 2024, 8:15 AM IST

13–uv-fusion

ಪ್ರಸ್ತುತ ವಿದ್ಯಮಾನದಲ್ಲಿ ರಾಜಕಾರಣಿಗಳು ಪ್ರಜೆಗಳನ್ನು ಪಕ್ಷದ ಕಾರ್ಯಕರ್ತರು ಎಂದು ಪರಿಗಣಿಸಿ ತಮ್ಮ ತಮ್ಮ ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಜಾತಿ ಬೇದ ಭಾವಗಳಿಂದ ಜನರಲ್ಲಿ ವೈಶ್ಯಮ್ಯ ಹುಟ್ಟುಹಾಕಿ ತಮ್ಮ ತಮ್ಮ ಕಾರ್ಯಗಳನ್ನು ಸಾಧಿಸುತ್ತಿದ್ದಾರೆ.

ಬಿ.ಆರ್‌. ಅಂಬೇಡ್ಕರ್‌ ರಚಿತ ಸಂವಿಧಾನದಲ್ಲಿ ಜಾತಿ ಬೇಧ ಭಾವಗಳ ತಾರತಮ್ಯ ಹೋಗಲಾಡಿಸಲು, ಸರ್ವರಿಗೂ ಸಮಬಾಳು ಸಮಪಾಲು ಎಂಬ ಕಲ್ಪನೆಯನ್ನು ಪ್ರಸ್ತುತಪಡಿಸಿದರು. ಹೀಗಿರುವಾಗ ರಾಜಕಾರಣಿಗಳು ಆಯಾ ಕ್ಷೇತ್ರದ ಪ್ರಬಲ ಸಮುದಾಯಗಳನ್ನು ಗುರುತಿಸಿಕೊಂಡು ತಮ್ಮ ಮತಬ್ಯಾಂಕ್‌ಗಳಾಗಿ ನಿರ್ಮಿಸುತ್ತಿದ್ದಾರೆ. ಜನರಲ್ಲಿ ಇದು ನಮ್ಮ ಜಾತಿಯ ಪಕ್ಷ ಎಂಬ ಮನೋಭಾವನೆ ಬಿತ್ತುತ್ತಿದ್ದಾರೆ.

ಇಂದು ದೇಶದ ಪ್ರಜೆಗಳೆಲ್ಲರೂ ಮತ ಚಲಾಯಿಸುವ ಹಕ್ಕನ್ನು ಮಾರಿಕೊಂಡಿದ್ದು, ಉತ್ತಮ ನಾಯಕನನ್ನು ಆಯ್ದುಕೊಳ್ಳುವ ಸಾಮರ್ಥ್ಯವನ್ನು ಸಹ ಮರೆತಿದ್ದಾರೆ. ಚುನಾವಣೆ ಬಂದರೆ ಸಾಕು ಪ್ರಚಾರಕ್ಕೆಂದು ಅಲೆದಾಡುವುದರಿಂದ ಹಿಡಿದು ನಾಯಕನ ವಿಜಯದ ಸಂಭ್ರಮಾಚರಣೆಯವರೆಗೂ ಅವರ ಪಕ್ಕದಲ್ಲೇ ನಿಂತು ಕಾರ್ಯನಿರ್ವಹಿಸುವ ಪ್ರಜೆಗಳು ಚುನಾವಣೆ ಮುಗಿದ ಬಳಿಕ ತಮ್ಮ ಸುತ್ತಲಿನ ಜನರ ಜತೆ ವೈಷ್ಯಮದ ಮನೋಭಾವನೆ ಬೆಳೆಸಿಕೊಂಡು ಅನೇಕ ಗೊಂದಲಗಳ ಸೃಷ್ಟಿಗೆ ಕಾರಣೀಕರ್ತರಾಗುತ್ತಾರೆ.

ಈ ಸಂದರ್ಭಗಳಲ್ಲಿ ಅನೇಕ ಪಕ್ಷದ ಕಾರ್ಯಕರ್ತರ ಕೊಲೆ, ಗಲಭೆಗಳ ಸೃಷ್ಟಿ, ಸಾವು ನೋವುಗಳನ್ನು ಎದುರಾಗುತ್ತವೆ. ಇಷ್ಟೆಲ್ಲಾ ನಡೆದರೂ ಏನೂ ಆಗದಂತೆ ಮೂಖ ಪ್ರೇಕ್ಷಕರಾಗುವರು ರಾಜಕಾರಣಿಗಳು.

ಪ್ರಚಾರದ ಸಂದರ್ಭ ಬೇಕಾಬಿಟ್ಟಿ ದುಡ್ಡು ಸುರಿದು ಆಯ್ಕೆಯಾದ ರಾಜಕಾ ರಣಿಗಳು ಜನರಿಗೆ ಎಷ್ಟರ ಮಟ್ಟಿಗೆ ನಿಸ್ವಾರ್ಥ ಸೇವೆ ನೀಡಬಲ್ಲರು. ಚುನಾವಣೆಯಲ್ಲಿ ಸುರಿದ ದುಡ್ಡನ್ನು ಐದು ವರ್ಷಗಳಲ್ಲಿ ಹೇಗಾದರೂ ಮಾಡಿ ವಸೂಲಿ ಮಾಡಿಕೊಳ್ಳಬೇಕು ಎಂಬುದೇ ಅವರ ಗುರಿಯಾಗಿರುತ್ತದೆ. ಇದೆಲ್ಲದರ ಹೊರತಾಗಿ ಸ್ವಲ್ಪ ನೀತಿಯುಕ್ತ ರಾಜಕಾರಣಿಗಳು ಮಾತ್ರ ಜನರಿಗೆ ಪರೋಪಕಾರಿ ಕೆಲಸ ಮಾಡುತ್ತಾರೆ.

ಪ್ರಜೆಗಳು ಜಾಗರೂಕರಾಗಿ ನೇತಾರಗಳ ಆಯ್ಕೆ ಮಾಡಬೇಕಾಗಿದೆ. ಈ ಒಂದು ಕಾರ್ಯದಿಂದ ದೇಶದ ಉನ್ನತಿ, ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯಗಳ ಪೂರೈಕೆ, ಉನ್ನತ ಗುಣಮಟ್ಟದ ಜೀವನ ಶೈಲಿ, ಹೀಗೆ ಎಲ್ಲ ರೀತಿಯಿಂದಲೂ ಪ್ರಜೆಗಳು ಉನ್ನತ ಜೀವನ ಸಾಧಿಸಬಹುದು. ನಾವೆಲ್ಲರೂ ಮತದಾನ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸೋಣ.

 ಮಡು ಮೂಲಿಮನಿ

ಧಾರವಾಡ ವಿ.ವಿ.

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.