UV Fusion: ನನ್ನ ದೇಶ ನನ್ನ ಮಣ್ಣು, ದೆಹಲಿ ಕಂಡಂತೆ ನನ್ನ ಕಣ್ಣು


Team Udayavani, Nov 20, 2023, 8:00 AM IST

15-uv-fusion

ಕೇಂದ್ರ ಸರಕಾರದ ಮಹತ್ತರವಾದ ಕಾರ್ಯಕ್ರಮ ಮೇರಾ ಮಾಟಿ ಮೇರಾ ದೇಶ್‌ (ನನ್ನ ಮಣ್ಣು ನನ್ನ ದೇಶ) ಸರಳವಾಗಿ ಕಾರ್ಯಕ್ರಮದ ಬಗ್ಗೆ ಹೇಳ್ಳೋದಾದರೆ ಈ ದೇಶದ ಸ್ವಾತಂತ್ರ ಹೋರಾಟ ಮಾಡಿದ ವೀರ ಯೋಧರ ನೆನಪಿನಲ್ಲಿ ದೇಶದ ಎಲ್ಲ ಕಡೆ ಗ ಳಿಂಂದಲೂ ಮಣ್ಣನ್ನ ಸಂಗ್ರಹಿಸಿಕೊಂಡು ಬಂದು ದೆಹಲಿಯಲ್ಲಿ ಆ ಮಣ್ಣನ್ನು ಸ್ಮಾರಕವಾಗಿ ನಿರ್ಮಿಸಿ ಮುಂದಿನ ಪೀಳಿಗೆಗೆ ಮಹತ್ತರವಾದ ಉಡುಗೊರೆಯನ್ನು ನೀಡುವಂತದ್ದು.

ಶಿರಹಟ್ಟಿಯ ಮಣ್ಣಿನೊಂದಿಗೆ ದೆಹಲಿಗೆ ಹೋಗಲು ಶಿರಹಟ್ಟಿಯ ಪುರಸಭೆಯಿಂದ ನನಗೆ ಕರೆ ಬಂತು ಅಮೃತ ಕಲಶಯಾತ್ರೆ ದೆಹಲಿಯ ವಿಶೇಷ ರೈಲಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು.

ನಾನು ಗದಗ್‌ ಜಿಲ್ಲೆಯನ್ನು ಪ್ರತಿನಿಧಿಸಿದ್ದರಿಂದ ನನ್ನೊಂದಿಗೆ ಗದಗ್‌ ಜಿಲ್ಲೆಯ ಉದಯ, ಮೈನುದ್ದಿನ್‌, ಉದಯ, ಮಲ್ಲು, ಅಭಿಷೇಕ್‌ ನಾಗರಾಜ್, ಇವರು ವಿವಿಧ ತಾಲೂಕುಗಳನ್ನು ಪ್ರತಿನಿಧಿಸುತ್ತಿದ್ದವರು ಜತೆಯಾಗಿದ್ದರು. ಮೊದಲಿಗೆ ಪರಿಚಯವಿಲ್ಲದಿದ್ದರೂ ಅನಂತರ ತೀರ ಹತ್ತಿರವಾಗಿ ಬಿಟ್ಟರು. ರೈಲಿನಲ್ಲಿ ಮೂರು ದಿನಗಳ ಕಾಲ ಪಯಣ ಇವರೊಂದಿಗಿನ ಮಾತುಗಳಲ್ಲಿ ದಾರಿ ಸಾಗಿದ್ದೆ ಗೊತ್ತಾಗಲಿಲ್ಲ.

ಊರಿನಲ್ಲಿ ನಡೆಯುತ್ತಿದ್ದ ಸೀಗಿ ಹುಣ್ಣಿಮೆಯ ನೆನಪು ಪಯಣದಲ್ಲಿ ಕಾಡುತ್ತಿತ್ತು. ದೆಹಲಿಯ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತ ಕೋರಿದರು.ಅ ನಂತರ ನಮಗಾಗಿ ಅಲ್ಲಿದ್ದ ಬಸ್‌ಗಳನ್ನೇರಿ ನಾವು ಉಳಿಯಬೇಕಾದ ಅದ್ಭುತ ಲೋಕವಾದ ರಾಧಾ ಸ್ವಾಮಿ ಸತ್ಸಂಗ ಬಿಯಾಸ (RSSB) ಸ್ಥಳಕ್ಕೆ ಎರಡು ಮೂರು ತಾಸುಗಳ ಪಯಣದ ಅನಂತರ ಟ್ರಾಫಿಕ್‌ ಕಿರಿಕಿರಿಯ ನಡುವೆ ತಲುಪಿದೆವು. ದೇಶದ ಎಲ್ಲ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯಗಳಿಂದ ತಂದಿದ್ದ ಮಣ್ಣನ್ನ ಬೃಹತ್‌ ಕಳಸದಲ್ಲಿ ಒಬ್ಬೊಬ್ಬರೇ ಹಾಕಿ ತಮಗೆ ಸೂಚಿಸಲಾಗ ಸ್ಥಳದಲ್ಲಿ ಕುಳಿತುಕೊಂಡರು. ಒಂದಿಷ್ಟು ಶಾಸ್ತ್ರೀಯ ನೃತ್ಯಗಳನ್ನು ಕಣ್ತುಂಬಿಕೊಂಡು, ಕರ್ತವ್ಯ ಪಥದಲ್ಲಿಯೇ ಇದ್ದ ಇಂಡಿಯಾ ಗೇಟ್‌ ನೋಡಲು ನಾವೆಲ್ಲರೂ ಹೊರಟೆವು.

ಮರುದಿನ ಮತ್ತೆ ಅದೇ ಕರ್ತವ್ಯ ಪಥದಲ್ಲಿ ಮೇರಾ ಮಾಟಿ ಮೇರಾ ದೇಶ್‌ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಅಲ್ಲಿ ದೇಶದ ಪ್ರಧಾನ ಮಂತ್ರಿನರೇಂದ್ರ ಮೋದಿಜಿ, ಅಮಿತ್‌ ಶಾ ಇನ್ನಿತರ ಕೇಂದ್ರ ಸಚಿವರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮೊದಲೇ ಖ್ಯಾತ ಗಾಯಕರಾದ ಕೈಲಾಸ್‌ ಕೇರ್‌ ಹಲವು ಗಾಯನಗಳನ್ನ ಕೇಳಿ ಅದರಲ್ಲಿ ಮಿಂದೆದ್ದೆವು.

ರೈಲನ್ನೇರಿ ಮತ್ತೆ ಮೂರು ದಿನಗಳ ಪಯಣ, ದೆಹಲಿಗೆ ಬರುವಾಗ ಅಪರಿಚಿತ ಮುಖಗಳು ಆತ್ಮೀಯವಾಗಿ ಹೃದಯದಲ್ಲಿ ಬೇರೂರಿದ್ದವೂ, ಮಾತುಕತೆಗಳು, ಸಿಟ್ಟು ಸೆಡವುಗಳು, ಹಾಸ್ಯ ವಿನೋದಗಳು, ಹಾಡುಗಳು ಕಥೆಗಳು,ಕೆಲವು ಜಗಳಗಳು ನಾವು ಬರುವಾಗ ನಮ್ಮವರೊಂದಿಗೆ ಇದ್ದ ಆತ್ಮಿಯತೆ ಇನ್ನೂ ಕೂಡ ಹೆಚ್ಚಾಗಿತ್ತು, ಇಡೀ ರೈಲ್ವೆ ಒಂದು ಕುಟುಂಬ ಎನ್ನುವಂತೆ ನಾವು ಮೂರು ದಿನಗಳ ಕಾಲ ಇದ್ದೆವು. ಪರಿಚಯವಿಲ್ಲದೆ ದೆಹಲಿಗೆ ತೆರಳಿದ್ದ ನಾವು ಮನಸ್ಸಿಗೆ ಹತ್ತಿರವಾಗುವಷ್ಟು ಪರಿಚಯವಾಗಿ ಅದೆಷ್ಟೋ ಅನುಭವಗಳನ್ನು ನಾವು ಹೊತ್ತುಕೊಂಡು, ಜೀವನದಲ್ಲಿ ಮುಗಿಯಲಾರದ ಸಂಬಂಧಗಳನ್ನು ಬೆಳೆಸಿಕೊಂಡು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ನಮಸ್ಕಾರ ಮಾಡಿ ನಮ್ಮೂರಿನ ಕಡೆಗೆ ಪ್ರಯಾಣವನ್ನ ಬೆಳೆಸಿದೆವು.

-ಅಮೋಘ ಸಾಂಬಾನುಸುತ

ಸರಕಾರಿ ಪ್ರಥಮ ದರ್ಜೆ ಕಾಲೇಜು,

ಶಿರಹಟ್ಟಿ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.