ಪ್ರಕೃತಿಯ ಕೊಡುಗೆ ʼನಾಮದ ಚಿಲುಮೆʼ


Team Udayavani, Aug 30, 2020, 3:53 PM IST

WhatsApp Image 2020-08-23 at 3.18.38 PM (1)

ಮಳೆಯಲ್ಲಿ ನೆನೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ವನ.

ಅಲ್ಲಲ್ಲಿ ಕೆಂಪನೆ ವಜ್ರದಂತೆ ಪ್ರಜ್ವಲಿಸುವ ಗುಲ್‌ ಮೋಹರ್‌ ಮರಗಳ ಪುಷ್ಪಗಳು.

ಅವಕ್ಕೆ ಸಾಥ್‌ ನೀಡುವ ಕಾಡು ಮಂದಾರ, ಹಗಲು ರಾಣಿ, ಹುಣಸೆ ಮರದ ಚಿಗುರು, ಟೊಕೊಮೋ ಹೂವಿನ ಮರಗಳು…ಇಂತಹ ಮನಮೋಹಕ ದೃಶ್ಯ ಕಂಡುಬಂದದ್ದು ದೇವರಾಯನದುರ್ಗದ ನಾಮದ ಚಿಲುಮೆ ಎಂಬ ಪ್ರೇಕ್ಷಣೀಯ ಸ್ಥಳದಲ್ಲಿ.

ತುಮಕೂರಿನಿಂದ 8 ಕಿಲೋ ಮೀಟರ್‌ ದೂರದಲ್ಲಿ ಇರುವ ಈ ಸ್ಥಳಕ್ಕೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ತೆರಳುವುದು ಸ್ಮರಣೀಯ ಅನುಭವವಾಗಿರುತ್ತದೆ.

ನಗರದಿಂದ ಅಂತರವನ್ನು ಕಾಯ್ದುಕೊಂಡಿರುವ ನಾಮದ ಚಿಲುಮೆ ಆಗಮಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಹೂವಿನ ಮರಗಳಿಂದ ಬೀಳುವ ಹೂಗಳು, ಅಲ್ಲಲ್ಲಿ ಕಾಣ ಸಿಕಗುವ ಮಾವಿನ ಕಾಯಿ ಗೊಂಚಲು, ಕರಿಮೋಡದಿಂದ ಬೀಸುವ ತಣ್ಣನೆಯ ಗಾಳಿ, ಹಾಗೇ ಹಾರಾಡುತ್ತಾ ರಸ್ತೆಯ ಪರಿವಿಲ್ಲದೆ ಹಾರುವ ಪಾತರಗಿತ್ತಿಗಳು, ದೈತ್ಯ ಬೆಟ್ಟಗಳ ಸಾಲು, ಪ್ರವಾಸಿಗರ ಆಗಮನ ನಿರೀಕ್ಷೆಯಲ್ಲಿ ಕಾದು ಕುಳಿತ ವಾನರ ಸೈನ್ಯ…ಇವೆಲ್ಲವೂ ಭವ್ಯ ಸ್ವಾಗತ ಕೋರುತ್ತವೆ. ಮೂರು ನಾಲ್ಕು ಬೆಟ್ಟಗಳ ನಡುವೆ ಇರುವ ಉದ್ಯಾನವನದಲ್ಲಿ ಮನಸ್ಸಿಗೆ ಮುದನೀಡುವ ವಾತಾವರಣವಿದೆ.

1996ರಲ್ಲಿ  ಉದ್ಯಾನವನ ನಿರ್ಮಾಣ
ತುಮಕೂರಿನ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ನಾಮದ ಚಿಲುಮೆ ಸ್ಥಾನ ಪಡೆದುಕೊಂಡಿದೆ. 1996ರಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ. ಪ್ರಕೃತಿ ಪ್ರೇಮಿಗಳನ್ನು ಸೆಳೆಯುವ ತಾಕತ್ತು ಈ ನಾಮದ ಚಿಲುಮೆಗಿದೆ. ಇಲ್ಲಿಗೆ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಾರೆ.

ಚಿಲುಮೆಯ ಚರಿತ್ರೆ
ಉದ್ಯಾನವನದಲ್ಲಿರುವ ಸಿಹಿನೀರಿನ ಚಿಲುವೆಯ ಹಿಂದೆ ಒಂದು ಕಥೆ ಇದೆ. ತ್ರೇತಾಯುಗದಲ್ಲಿ ರಾಮ, ಸೀತೆ, ಲಕ್ಷ್ಮಣರು ದೇವರಾಯನದುರ್ಗ ಬೆಟ್ಟದಲ್ಲಿ ವನವಾಸವಿದ್ದರು. ಒಂದು ದಿನ ರಾಮ ಹಣೆಗೆ ತಿಲಕ ವಿಡುವ ಸಂದರ್ಭದಲ್ಲಿ ನೀರಿಗಾಗಿ ಸುತ್ತಲೂ ನೋಡಿದ. ನೀರು ಸಿಗದಿದ್ದಾಗ ರಾಮ ಬಾಣವನ್ನು ಬಂಡೆಯ ಮೇಲೆ ಬಿಟ್ಟಾಗ ರಂಧ್ರವಾಗಿ ಸಿಹಿನೀರಿನ ಬುಗ್ಗೆ ಚಿಮ್ಮಲು ಆರಂಭಿಸಿತು. ಆದ್ದರಿಂದ ಈ ಪ್ರದೇಶವನ್ನು ನಾಮದ ಚಿಲುಮೆ ಎಂದೇ ಕರೆಯಲಾಗುತ್ತದೆ ಎನ್ನುವ ಪ್ರತೀತಿ ಇದೆ. 2003ರಲ್ಲಿ ಈ ನೀರಿನ ಚಿಲುಮೆ ಒಂದು ವರ್ಷ ಬತ್ತಿ ಹೋಗಿತ್ತು. ಮತ್ತೆ ಶಾಂತಿ ಹೋಮ ಮಾಡಿಸಿದ ಬಳಿಕವೇ ನೀರು ಬರಲಾರಂಭಿಸಿತು ಎನ್ನುತ್ತಾರೆ ಸ್ಥಳೀಯರು. ಆ ಕಾರಣಕ್ಕಾಗಿಯೇ ಆ ಸಿಹಿನೀರಿನ ಚಿಲುಮೆಯ ಒಳ ಕಲ್ಲಿನ ಸುತ್ತ ಯಾರೂ ಸುಳಿಯದಂತೆ ರಕ್ಷಣೆಯ ಮೆಸ್‌ಗಳನ್ನು ಅಳವಡಿಸಲಾಗಿದೆ.

ಸಸ್ಯ ಸಂಜೀವಿನಿ ವನ
ನಾಮದ ಚಿಲುಮೆ ಅನೇಕ ಗಿಡಮೂಲಿಕೆಗಳ ಸಂಪತ್ತನ್ನು ಒಳಗೊಂಡಿದೆ. ಅಶ್ವಗಂಧ, ಲೋಳೆಸರ, ಜೀವಂತಿ, ಜ್ವರಕ್ಕೆ ಮದ್ದಾದ ನೆಲಬೇವು, ಬೃಂಗರಾಜ, ವಿಟಮಿನ್‌ ಎಬಿಸಿ ಹೊಂದಿರುವ ಚಕ್ರಮುನಿ ಸಸ್ಯ, ಆಡು ಮುಟ್ಟದ ಬೇರು, ಈಶ್ವರಿ ಬೇರು, ಮಾಕಳಿ ಬೇರು, ಅಮೃತಬೇರು, ಸಕ್ಕರೆ ಕಾಯಿಲೆಗೆ ಮದ್ದಾದ ಮಧುನಾಶಿನಿ, ಸೀತಾ ಅಶೋಕ, ರಾಮಫ‌ಲ ಹೀಗೆ 300ಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಅರಣ್ಯ ಇಲಾಖೆ ಇಲ್ಲಿ ಕಾಪಾಡುತ್ತಾ ಬಂದಿದೆ. ಮಾತ್ರವಲ್ಲಿ ಅರ್ಜುನ, ಗೋಣಿ, ಹತ್ತಿಮರ, ಬಸರಿ, ನೀಲಿ, ಹಸಿರು ಲಕ್ಕಿ, ಕದಂಬ, ಭಿಲ್ವಪತ್ರೆ (ಈಶ್ವರನು ಇದೇ ಮರದ ಕಾಯಿಯಿಂದ ಭಿಕ್ಷೆ ಬೇಡಿದನೆಂಬ ಪ್ರತೀತಿ ಇದೆ) ಮರಗಳಿವೆ. ಬಿಲ್ವ ಪತ್ರೆ, ಚಳ್ಳೆ ಹಣ್ಣು, ಸಾಂಬಾರು ಹಲಸು, ಜಗಳ ಗಂಟಿಮರ, ಮುಳ್ಳು ಬುರುಗದ ಮರ ಹೀಗೇ ಎರಡು ಸಾವಿರಕ್ಕಿಂತ ಹೆಚ್ಚು ಪ್ರಾಚೀನ ಮರಗಳು ನಾಮದ ಚಿಲುಮೆ ಅರಣ್ಯದಲ್ಲಿ ಬೆಳೆದಿವೆ. ರಾಶಿನಕ್ಷತ್ರ ವನ, ಅಷ್ಟ ದಿಕಾ³ಲಕ ವನ, ನವಗ್ರಹ ವನ, ಶಿವಪಂಚಾಯತಿ ವನ ಹೀಗೆ ವನದೊಳಗೆ ವನವನ್ನು ಹೊಂದಿರುವುದು ವಿಶೇಷ. ಸುಮಾರು 20 ಎಕ್ರೆಯಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ. ಸೋಮವಾರ ರಜೆ ಇರುತ್ತದೆ.

ಜಿಂಕೆವನ
ಮನ್ನಾ ಜಂಗ್ಲಿ (ಕಾಯ್ದಿರಿಸಿದ ಅರಣ್ಯ ಪ್ರದೇಶ)ನಾಮದ ಚಿಲುಮೆಯ ಒಂದು ಭಾಗ. ಇಲ್ಲಿ ಜಿಂಕೆಗಳಿಗೆಂದೇ ಪ್ರತ್ಯೇಕ ಸ್ಥಳಗಳನ್ನು ಗೊತ್ತುಮಾಡಿ ಸುಮಾರು ವರ್ಷಗಳಿಂದ ಸಾಕಲಾಗುತ್ತಿದೆ. 6 ಎಕ್ರೆಯ ಜಿಂಕೆ ವನದಲ್ಲಿ 95 ಜಿಂಕೆಗಳು ಆಶ್ರಯ ಪಡೆದಿವೆ. ನಾಮದ ಚಿಲುಮೆ ಜಿಂಕೆವನಕ್ಕೆ ಬರುವ ಪ್ರವಾಸಿಗರಿಂದ 10 ರೂ.ಗಳನ್ನು ಸಂಗ್ರಹಿಸಿ ಚಿಲುಮೆಯ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ.

ಇತ್ತೀಚಿಗೆ ಜಿಂಕೆವನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಅವರಿಗಾಗಿ ಆಸನ ವ್ಯವಸ್ಥೆ, ಜಿಂಕೆ ವೀಕ್ಷಣೆಗೆ ಅನುಕೂಲವಾದ ಸ್ಥಳ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಅರಣ್ಯ ಇಲಾಖೆ ಒದಗಿಸಿದೆ. ರಾಮ ಸೀತೆಯರು ಈ ವನಕ್ಕೆ ಭೇಟಿ ಕೊಟ್ಟ ನೆನಪಿಗಾಗಿ ಜಿಂಕೆಯನ್ನು ಸಾಕಲಾಗುತ್ತಿದೆ. ಮತ್ತು ಸಾವಿರಾರು ಎಕರೆ ಅರಣ್ಯ ಪ್ರದೇಶದ ನಡುವೆ ಜಿಂಕೆವನ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆಯೂ ಇದೆ.

 ಪ್ರವೀಣ್‌ ಕುಮಾರ್‌ ಎನ್‌., ತುಮಕೂರು ವಿವಿ 

 

 

 

 

ಟಾಪ್ ನ್ಯೂಸ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.