Smartphone Addiction: ಹೆತ್ತವರು ಎಂದಿಗೂ ಎಡವದಿರಿ


Team Udayavani, Feb 3, 2024, 3:19 PM IST

10-uv-fusion

ಹಿಂದೆಲ್ಲ ಕೂಡು ಕುಟುಂಬದ ಪರಿಕಲ್ಪನೆ ಒಗ್ಗಟ್ಟಿನ ಶಕ್ತಿಯನ್ನು ಕಲಿಸಿತ್ತು. ಭಜನೆ, ಊಟ, ಪ್ರವಾಸ ಹೀಗೆ ಎಲ್ಲದರಲ್ಲೂ ಖುಷಿ ಕಾಣುವ ಬದುಕು ಅದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ.

ಇಂದು ವಿಭಕ್ತ ಕುಟುಂಬಗಳು ಪ್ರಚಲಿತದಲ್ಲಿದ್ದು, ಅದೆಷ್ಟೋ ಪೋಷಕರು ಮಕ್ಕಳಿಗೆ ಕೆಲ ನಿರ್ದಿಷ್ಟ ವಿಚಾರಗಳ ಬಗ್ಗೆ ನೈತಿಕ ಶಿಕ್ಷಣವನ್ನು ಸಹ ನೀಡಲು ವಿಫ‌ಲವಾಗಿದ್ದಾರೆ.

ಮನೆಯಲ್ಲಿದ್ದರೆ ಮೊಬೈಲ್‌ ಒಳಗೆಯೇ ಬಿದ್ದಿರುತ್ತಾರೆಂದು ವಸತಿ ಗೃಹ (ಹಾಸ್ಟೆಲ್) ಗಳಿಗೆ ತಂದು ಸೇರಿಸಿರುತ್ತಾರೆ. ಅದರ ಮೂಲ ಉದ್ದೇಶ ಮಕ್ಕಳು ಮೊಬೈಲ್‌ ಜಗತ್ತಿನಿಂದ ದೂರವಿದ್ದು ಆಡಿಕೊಂಡು ಓದಿಕೊಂಡು ಬೆಳೆಯಲಿ ಎಂದು.

ಸಣ್ಣ ವಯಸ್ಸಿನಲ್ಲಿರುವಾಗ ಮಕ್ಕಳಿಗೆ ಮೊಬೈಲ್‌ ಎನ್ನುವುದು ಒಂದು ರೀತಿ ಮಾಯಾಲೋಕದಂತೆ ಕಾಣಲ್ಪಡುತ್ತದೆ. ಮನೆಯಲ್ಲಿ ತಂದೆ, ತಾಯಿ,‌ ಮಕ್ಕಳಿಗೆಪರಸ್ಪರ ಮಾತನಾಡಿ ಸಂವಹನ ಮಾಡಲು ಸಮಯ ಇರುವುದೋ ಇಲ್ಲವೋ ಆದರೆ  ಮೊಬೈಲ್‌ನಲ್ಲಂತೂ ಕಾಲ ಕಳೆಯುತ್ತಾರೆ.

ಹೆಚ್ಚಿನ ಪೋಷಕರು ಮಕ್ಕಳನ್ನು ವಸತಿ ಗೃಹಗಳಿಗೆ ಒಂದು ಶಿಸ್ತಿನ ಚೌಕಟ್ಟಿನಲ್ಲಿ ಬೆಳೆಯಬೇಕೆಂಬ ಆಸೆಯಿಂದ ಅಲ್ಲಿ ಬಿಟ್ಟಿರುತ್ತಾರೆ, ಆ ಮಕ್ಕಳು ಅಲ್ಲಿನ ಶಿಸ್ತಿಗೆ ಒಳ ಪಟ್ಟು ಎರಡು ತಿಂಗಳಾಗಿರುವುದಿಲ್ಲ, ಆಗಲೇ ಹೆತ್ತವರು ಮಕ್ಕಳನ್ನು ಕಾಣಲು ಬರುತ್ತಾರೆ.  ಬಂದವರು ಹಾಗೆ ಹೋಗಿಯಾರಾ? ಇಲ್ಲ.

ತಮ್ಮ ಕೈಯಲ್ಲಿದ್ದ ಮೊಬೈಲ್‌ ಮಹನೀಯನನ್ನು ಆ ಮಗುವಿನ ಕೈಗಿಡುತ್ತಾರೆ. ಆ ಮಗು ತಾನೆ ಏನು ಮಾಡಬಲ್ಲದು, ಸಿಕ್ಕ ಅವಕಾಶವನ್ನು ನಾವೇ ಹೇಳಿಕೊಟ್ಟಿರುವಂತೆ ಸರಿಯಾಗಿಯೇ ಉಪಯೋಗಿಸುತ್ತದೆ.

ಅದು ಎಷ್ಟರ ಮಟ್ಟಿಗೆ ಎಂದರೆ ತಂದೆ ತಾಯಿ ಆ ಮಗುವನ್ನು ಏನಾದರೂ ತಿನ್ನಲು ಕರೆದುಕೊಂಡು ಹೋದರೆ ಆ ಹೆತ್ತವರ ಮುಖ ನೋಡಿ ಮಾತನಾಡುವುದನ್ನು ಬಿಟ್ಟು ಮೊಬೈಲ್‌ ನೋಡಿ ಹುಬ್ಬೇರಿಸುತ್ತಿರುತ್ತದೆ. ಆ ಮಗು ಅದರ ಜಂಜಾಟದಿಂದ ದೂರದಿಂದ ಬೆಳೆಯುತ್ತಿರುತ್ತದೆ, ಬಂದಂತ ತಂದೆ ತಾಯಿ, ಪಾಪ ಮಗು ತುಂಬಾ ದಿನಗಳಾಯ್ತು, ಮೊಬೈಲ್‌ ನೋಡಿ ಎಂದು ಏನೋ ಅದರ ಕೈಗೆ ಕೊಟ್ಟು, ಹೋಗುವಾಗ ತೆಗೆದುಕೊಂಡೆನೋ ಹೋಗುತ್ತಾರೆ.

ಆದರೆ ಆ ಮಗುವಿನ ಮನಸ್ಸು ಮತ್ತೆ ಹಿಂದಿನತಾಂಗಲು ಹೆಚ್ಚು ಕಡಿಮೆ ಕೆಲವು ದಿನ ಹಿಡಿಯುತ್ತದೆ. ಮೊಬೈಲ್‌ ಒಳ್ಳೆಯದೋ ಕೆಟ್ಟದೋ ಅದು ಎರಡನೆಯ ವಿಷಯ ಯಾವುದಕ್ಕೆ ಆದರೂ ನಾವು ಅದನ್ನು ಚಟವಾಗಿ ಮಾಡಿಕೊಂಡರೆ ಅದು ಒಳಿತಲ್ಲ. ಆ ಮಗುವಿನ ಮನಸ್ಸಿನಲ್ಲಿ ತನ್ನ ಹೆತ್ತವರು ಬಂದ ಖುಷಿಗಿಂತ ತಾನು ಬಳಸುವ ಮೊಬೈಲ್‌ ಬಂದ ಖುಷಿಯೇ ದುಪ್ಪಟ್ಟಿರುತ್ತದೆ.

ಏನೇ ಆಗಲಿ ಇಂದು ಅದೆಷ್ಟೋ ತಂತ್ರಜ್ಞಾನಗಳು ಬಂದಿವೆ. ಎಂತಹದೇ ತಂತ್ರಜ್ಞಾನವಿರಲಿ ಅದರ ಎದುರು ಹೆತ್ತವರಿಗಿಂತ ದೊಡ್ಡ ಆಸ್ತಿ ಮತ್ತೂಂದಿಲ್ಲ. ಒಮ್ಮೆ ಯಾರನ್ನಾದರೂ ಕಳೆದುಕೊಂಡರೆ ಅವರು ಮತ್ತೆ ಸಿಗಲಾರರು, ಮೊಬೈಲ್‌ ಯಾವಾಗ ಬೇಕಾದರೂ ಜತೆಗಿಟ್ಟುಕೊಳ್ಳಬಹುದು ಆದರೆ ಹೆತ್ತವರು ? ಹಾಗಾಗಿ ಮೊಬೈಲ್‌ಗೆ ದಾಸರಾಗುವ ಬದಲು ಸಿಕ್ಕ ಸಮಯದಲ್ಲಿ ಓದುವುದು, ಹೊಸ ವಿಚಾರಗಳ ಬಗ್ಗೆ ತಿಳಿಯುವುದು, ತಂದೆ, ತಾಯಿ ಕುಟುಂಬದವರೊಂದಿಗೆ ಬೆರೆಯುವುದು ಅತ್ಯವಶ್ಯಕ.

-ರಾಹುಲ್‌ ಆರ್‌. ಸುವರ್ಣ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.