ಇಂಟರ್ನೆಟ್‌ ಆಗಬಹುದು 2030ರ ಶಿಕ್ಷಕ


Team Udayavani, Aug 16, 2020, 4:30 PM IST

online claas 25

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಮೆರಿಕದಲ್ಲಿ ಓರ್ವ ಯುವಕ ತನ್ನ ಪದವಿ ಪಡೆಯುವ ದಿನದಂದು ಭಾಷಣದಲ್ಲಿ ತನಗೆ ಶಿಕ್ಷಣವನ್ನು ನೀಡಿದ ಗೂಗಲ್‌ ಮತ್ತು ವಿಕಿಪೀಡಿಯಾಗೆ ಧನ್ಯವಾದಗಳು ಎಂದಾಗ ಸಭೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಕೇಕೆ ಹಾಕಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುತ್ತಾರೆ.

ಇಂದು ಇದು ಬಹಳ ಸಹಜವಾದ ಸ್ಥಿತಿಯಾಗಿದೆ.

ಯಾಕೆಂದರೆ ಎಲ್ಲರೂ ಅಂತರ್ಜಾಲವನ್ನು ತಮ್ಮ ಪಾಠ ಹೇಳಿಕೊಡುವ ಶಿಕ್ಷಕರಾಗಿ ಸ್ವೀಕರಿಸಿದವರೇ. ಇಂತಹ ಭಾಷಣಗಳು ಭಾರತದಲ್ಲಿ ನಡೆದರೂ ಅಚ್ಚರಿ ಏನಿಲ್ಲ.

ಇಂದಿನ ವಾಸ್ತವ ಹೇಗಿದೆ ಎಂದರೆ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಮಾಡುವ ಪಾಠಗಳ ಬಗೆಗೆ ಗಮನ ಕೊಡದಿದ್ದರೂ, ಅಂತರ್ಜಾಲವನ್ನು ನೋಡಿ ಅಧ್ಯಯನ ಮಾಡುತ್ತೇವೆ ಅನ್ನುವ ಭರವಸೆ ಮೂಡಿದೆ.

ಬೇಕು ಬೇಕಾದುದೆಲ್ಲ ಅಲ್ಲಿ ಸುಲಭವಾಗಿ ಮತ್ತು ಸರಳವಾಗಿ ಸಿಗುವಾಗ ಆಯ್ಕೆಯನ್ನು ಮಾಡುವುದು ಸಹಜವೇ.

ಹಲವು ಬಾರಿ ಇಲ್ಲಿ ಮತ್ತಷ್ಟು ವಿಚಾರಗಳು ಅಧ್ಯಯನಕ್ಕೆ ಸಿಗುವಾಗ ಇದರೆಡೆಗಿನ ಒಲವು ಹೆಚ್ಚುವುದು ಸ್ವಾಭಾವಿಕ. ಇಂತಹ ಸಂದರ್ಭಗಳು ಗುರು ಮುಖೇನ ಕಲಿಯುವುದು ಅನ್ನುವ ವಿಚಾರ ಅಳಿವಿನ ಅಂಚಿನಲ್ಲಿ ಬಂದು ನಿಲ್ಲುವಂತೆ ಮಾಡಿದೆ. ಜತೆಗೆ ಹಿಂದೆ ಗುರುಕುಲ ಪದ್ಧತಿಯ ಶಿಕ್ಷಣ ಇದ್ದಾಗ ಅಸ್ತಿತ್ವದಲ್ಲಿದ್ದ ಗುರು – ಶಿಷ್ಯ ಸಂಬಂಧದ ಪಾವಿತ್ರ್ಯವು ಇಂದು ಕ್ಷೀಣಿಸುತ್ತಿದೆ. ಹೀಗಿರುವಾಗ ಮುಂದೊಂದು ದಿನ ಗುರು ಕೇವಲ ಪಠ್ಯ ವಿಷಯಗಳನ್ನು ನೀಡಲು, ಅಸೈನ್ಮೆಂಟ್‌ಸಂಗ್ರಹಿಸಲು, ಮತ್ತು ಪರೀಕ್ಷೆಗೆ ಅಂಕ ಹಾಕಲು ಮಾತ್ರ ಸೀಮಿತವಾದರೂ ಅಚ್ಚರಿಯಿಲ್ಲ.
ಆದರೆ ಶಿಕ್ಷಣ ಮತ್ತು ಸಂಸ್ಕಾರ ಜೀವನ ವಿಕಾಸದ ಎರಡು ಪ್ರಮುಖ ಸಾಧನಗಳು. ಶಿಕ್ಷಣದ ಜತೆಗಿನ ಮಾನವೀಯ ಸಂಸ್ಕಾರಗಳು ಮಾತ್ರ ಮಾನವನ ಭವಿಷ್ಯವನ್ನು ಸಮಾಜದ ಹಿತದ ದೃಷ್ಟಿಯಲ್ಲಿ ರೂಪಿಸಬಹುದು.

ಶಿಕ್ಷಣ ಯಾವ ರೀತಿಯಾಗಿ ಇರಬೇಕು?
ಶಿಕ್ಷಣ ಮಾನವನಿಗೆ ವೈಚಾರಿಕವಾಗಿ ಆಲೋಚಿಸುವ ಮತ್ತು ಚರ್ಚಿಸುವ ಸಾಮರ್ಥ್ಯವನ್ನು ನೀಡಬೇಕು. ಹಳೆಯ ಪದ್ಧತಿಗಳು ಸರಿ ಮತ್ತು ಹೊಸದೆಲ್ಲವೂ ತಪ್ಪು ಎನ್ನುವ ಪರಿಕಲ್ಪನೆಯಿಂದ ಮನುಷ್ಯ ಹೊರಗೆ ಬರಬೇಕು. ಡಿ.ವಿ.ಜಿ ಹೇಳುವಂತೆ ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ ಹೊಸತು ಮತ್ತು ಪುರಾತನ ಎರಡರ ಸಮನ್ವಯವೇ ಶಿಕ್ಷಣ ಆಗಬೇಕು. ಶಿಕ್ಷಣ ಮನುಷ್ಯನ ಅಂತರಾಳದಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆಳೆದು ಬದುಕುವ ಕಲೆಯನ್ನು ಕಲಿಸುವ ಸಾಧನವಾಗಬೇಕೇ ಹೊರತು. ನಾಲ್ಕು ಗೋಡೆಯ ಮಧ್ಯೆ ಬಂಧಿಸಿ ಹೊರೆಯನ್ನು ಹೇರುವ ಮಾಧ್ಯಮವಾಗಬಾರದು. ಈಗ ಜಾರಿಯಾದ ಹೊಸ ಶಿಕ್ಷಣ ಯೋಜನೆ ವಿದ್ಯಾರ್ಥಿಗಳಲ್ಲಿ “ಓದಬೇಕು’ ಎನ್ನುವ ಒತ್ತಡವನ್ನು ಕಡಿಮೆ ಮಾಡಲಿದೆ. ಪ್ರಮಾಣಾತ್ಮಕ ಶಿಕ್ಷಣಕ್ಕೆ ಬದಲಾಗಿ ಗುಣಾತ್ಮಕ ಶಿಕ್ಷಣವನ್ನು ತರಲು ಪ್ರಯತ್ನ ನಡೆಯುತ್ತಿದೆ.

ವಿದ್ಯಾರ್ಥಿ-ಶಿಕ್ಷಕರ ಸಂಬಂಧ
ಪ್ರಾಥಮಿಕ ಮತ್ತು ಮಧ್ಯಮ ಹಂತದ ಶಿಕ್ಷಣದ ವ್ಯವಸ್ಥೆಯಲ್ಲಿ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದೇ ಇದೆ. ಏಕೆಂದರೆ ಇದು ಮಕ್ಕಳ ಭವಿಷ್ಯದ ಅಡಿಪಾಯ ನಿರ್ಮಾಣದಲ್ಲಿ ಬಹು ಮುಖ್ಯವಾದ ಪಾಲು ಪಡೆದಿದೆ. 3ನೇ ಹಂತ ಮತ್ತು ಕಾಲೇಜಿನ ಹಂತದಲ್ಲಿ ಮಕ್ಕಳ ಐಚ್ಛಿಕ ವಿಷಯಕ್ಕೆ ಅನುಗುಣವಾಗಿ ಕಲಿಯುವ ಅವಕಾಶ ಸೃಷ್ಟಿಯಾಗಿದೆ. ಒಂದೇ ತರಗತಿಯಲ್ಲಿ ವಿಭಿನ್ನ ಅಭಿರುಚಿಯ ಮತ್ತು ಸಾಮರ್ಥ್ಯದ ಮಕ್ಕಳು ಇರುತ್ತಾರೆ. ಎಲ್ಲರೂ ಸಮಾನ ವಿಷಯವನ್ನು ಸಮಾನ ರೀತಿಯಲ್ಲಿ ಕಲಿಯಬೇಕೆಂದರೆ ಅದು ಅವರ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.

ಆದರೆ ಈಗಿನ ಹೊಸ ಶಿಕ್ಷಣ ನಿಯಮ ಜಾರಿಯಾದರೆ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಪ್ರತಿ ವಿದ್ಯಾರ್ಥಿಯೂ ಅವನ ಅಭಿರುಚಿಗೆ ಅನುಗುಣವಾಗಿ ಬೆಳೆಯುತ್ತಾ ಸಾಗುತ್ತಾನೆ. ದೇಶದ ಪ್ರಗತಿ ಪಥಕ್ಕೆ ದೊಡ್ಡ ಕೊಡುಗೆ ನೀಡಬಲ್ಲ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಫ‌ಲಿತಾಂಶದ ಮೇಲೆ ನಿಂತಿರುವ ಈ ಸಮಾಜದ ಚಿತ್ರಣವೂ ಬದಲಾಗುತ್ತದೆ. ಮಕ್ಕಳ ಇಚ್ಛೆ, ಸಾಮರ್ಥ್ಯ ಮತ್ತು ಅಭಿರುಚಿಗೆ ಅನುಗುಣವಾಗಿ ಕಲಿಯುವ ಅವಕಾಶ ದೊರೆಯಬೇಕು. ಕಲಿಕೆಗೆ ಮೂಲ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಬಂಧ. ಆ ಸಂಬಂಧವೇ ಜ್ಞಾನಕ್ಕೆ ಸೇತುವೆ. ಆ ಸೇತುವೆ ಮುರಿಯದ ಬದಲಾವಣೆಯಾಗಲಿ. ಒಂದೊಳ್ಳೆ ಶಿಕ್ಷಣ ಪದ್ಧತಿ 2030ರ ಸುಮಾರಿಗೆ ಪೂರ್ಣವಾಗಿ ಜಾರಿಯಾಗಲಿ.

ಆಂಟೋ ಕ್ರಿಸ್ಟನ್‌, ಸಂತ ಫಿಲೋಮಿನಾ ಕಾಲೇಜು ಮೈಸೂರು

 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.