Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ


Team Udayavani, Apr 18, 2024, 3:42 PM IST

15-mother

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮ್ಮ ಹಿಂದೂ ಪುರಾಣಗಳೆ ಹೇಳುತ್ತದೆ. ದೇವರು ಎಲ್ಲ ಕಡೆ ತಾನಿರಲು ಸಾಧ್ಯವಿಲ್ಲವೆಂದು ತಾಯನ್ನ ಸೃಷ್ಟಿಸಿರುತ್ತಾನೆ ಎಂದು ಎಲ್ಲೋ ಕೇಳಿದ ನೆನಪು. ಇದು ನಿಜವಾಗಿಯೂ ಹೌದಿರಬಹುದು. ಅಮ್ಮ ಈ ಒಂದು ಪದವೇ ಸಾಕು ಎಂಥವರಲ್ಲೂ ಮೈ ರೋಮಾಂಚನಗೊಳಿಸಲು . ನಿಮಗೂ ತಿಳಿದಿದೆ ಈ ಒಂದು ಶಬ್ದಕ್ಕೆ ಎಷ್ಟು ಶಕ್ತಿಯಿದೆ ಎಂದು. ನಾವು ಬಿದ್ದಾಗ ನಮ್ಮೊಂದಿಗೆ ಅತ್ತು ನಾವು ನಗುವಾಗ ನಮ್ಮೊಂದಿಗೆ ನಕ್ಕಿ ಸದಾ ನಮ್ಮೊಂದಿಗೆ ಇರುವ ಜೀವವೆಂದರೆ ನಮ್ಮ ಅಮ್ಮ ಮಾತ್ರ..

ಎಲ್ಲರಂತೆ ನನಗೂ ಕೂಡ ನನ್ನ ತಾಯಿಯೇ ಜೀವ ಜೀವನ ಎಲ್ಲವೂ ಹೌದು. ಒಬ್ಬಳೇ, ಅದು ಗ್ರಹಿಣಿಯಾಗಿ ತನ್ನ ಮಕ್ಕಳನ್ನು ಬೆಳೆಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾಳೆ. ಅಲ್ಲದೆ ಅದೆಷ್ಟೋ ತ್ಯಾಗಗಳನ್ನು ಮಾಡಿದ್ದಾಳೆ. ನಮ್ಮ ನಗುವಿನಲ್ಲಿ ಅವಳ ನೋವ ಮರೆತಳು… ಮರೆತಳ್ಳೋ ಅಥವಾ ಮರೆತಂತಿದ್ದಳು ನಾಕಾಣೆ… ಧೈರ್ಯದಿಂದ ಎಲ್ಲ ಸಮಯ ಸಂದರ್ಭವನ್ನ ಮೆಟ್ಟಿ ನಿಂತು ಯಾರ ಹೀಯಾಳಿಸುವಿಕೆಗೂ ತಲೆ ಕೆಡಿಸಿಕೊಳ್ಳದೆ, ಆಡಿಕೊಳ್ಳುವವರ ಬಾಯಿಗೆ ಆಹಾರವಾಗದೆ ನಮ್ಮನ್ನ ಉತ್ತಮವಾಗಿ ಬೆಳೆಸುವಲ್ಲಿ ಸಫ‌ಲಳಾಗಿದ್ದಾಳೆ ನನ್ನ ಅಮ್ಮ ಎನ್ನುವುದಕ್ಕೆ ಹೆಮ್ಮೆ ಇದೆ ನನಗೆ.

ನನಗೆ ಜೀವಿಸಲು ಬೇಕಾಗುವ ಒಳ್ಳೆಯ ಮೌಲ್ಯಗಳನ್ನು ಹೇಳಿಕೊಡುವಲ್ಲಿ ಎಲ್ಲಿಯೂ ಎಡವಲಿಲ್ಲ ನನ್ನಮ್ಮ. ಕೆಲವೊಂದಿಷ್ಟು ವಿಷಯಗಳನ್ನು ಕಲಿಯಲು ನಾನೇ ಹಿಂದೆಟು ಹಾಕಿದಾಗ ಪೆಟ್ಟುಕೊಟ್ಟು ಕಲಿಸಿದ್ದುಂಟು. ಅದಕ್ಕೆ ತಾನೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ಹೇಳುವುದು. ಸಮಾಜದಲ್ಲಿ ಉತ್ತಮವಾಗಿ ಬದುಕಲು ಮೌಲ್ಯಗಳೇ ಮುಖ್ಯ, ಹೊರತಾಗಿ ಆಡಂಬರಗಳಲ್ಲ ಎಂದು ತಿಳಿಸಿಕೊಟ್ಟಳು.

ನನ್ನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲಿ ನಾನು ಎಡವುತ್ತಿದ್ದೇನೆ ಎಂದು ಹೇಳಿ ಸರಿಪಡಿಸಿದ್ದಾಳೆ. ಬಿದ್ದಾಗ ಸಮಾಧಾನಿಸಿ ಗೆದ್ದಾಗ ಪ್ರೋತ್ಸಾಹಿಸಿ ಸಹಕರಿಸುತ್ತಾಳೆ ನನ್ನ ಅಮ್ಮ.. ನನ್ನ ಪ್ರತಿಯೊಂದು ಸಣ್ಣ ಪುಟ್ಟ ಯಶಸ್ಸುಗಳನ್ನು ನನಗಿಂತಲೂ ಹೆಚ್ಚು ಸ್ವಾರ್ಥವಿಲ್ಲದೆ ಸಂಭ್ರಮಿಸಿದವಳೆಂದರೆ ಅದು ನನ್ನ ಅಮ್ಮ ಮಾತ್ರ.

ಒಂದು ದಿನ ಹುಷಾರಿಲ್ಲವೆಂದರೆ ರಾತ್ರಿ ಇಡೀ ನಿದ್ರೆ ಬಿಟ್ಟು ಹಾರೈಕೆ ಮಾಡಿ, ಕಾಣದ ದೇವರಿಗೆ ಅದೆಸ್ಟೋ ಹರಕೆ ಕಟ್ಟಿಕೊಳ್ಳುತ್ತಾಳೆ ಎಂದು ಅವಳಿಗೆ ಗೊತ್ತು. ನನ್ನ ಮಗಳನ್ನು ನಾನು ನಂಬಿದ ದೇವರು ಕಾಯುತ್ತಾನೆ ಎನ್ನುವುದು ಅವಳ ನಂಬಿಕೆ.

ಯಾವುದೇ ಸ್ವಾರ್ಥವಿಲ್ಲದೆ ಎಲ್ಲರ ಶ್ರೇಯೋಭಿವೃದ್ಧಿಯನ್ನು ಬಯಸುವವಳು ನನ್ನಮ್ಮ. ತನಗಾಗಿ ಅಲ್ಲದಿದ್ದರೂ ತನ್ನ ಮಕ್ಕಳಗಾಗಿ ಆದರೂ ಸುಖವಾಗಿರಬೇಕು ಎನ್ನುವುದು ಅವಳ ಕನಸು. ಅವಳ ಇಡೀ ಜೀವನವನ್ನೇ ನಮಗಾಗಿ ಮೂಡಿಪಾಗಿಟ್ಟಿದ್ದಾಳೆ ಎಂದರು ತಪ್ಪಿಲ್ಲ.. ಎಲ್ಲಿದ್ದರೂ ನನ್ನ ಮಕ್ಕಳು ಸುಖವಾಗಿರಲಿ ಎನ್ನುವುದೇ ಅವಳ ಪ್ರಾರ್ಥನೆ..

ನನ್ನ ಜೀವನದ ಪ್ರತಿಯೊಂದು ಸಿಹಿಕಹಿ ಅನುಭವಗಳಲ್ಲಿ ನನ್ನ ಅಮ್ಮನ ಪಾತ್ರ ಅಮೂಲ್ಯವಾದದ್ದು ಮತ್ತು ಮಹತ್ತರವಾದದ್ದು.. ಇಂತಹ ಅಮ್ಮನನ್ನು ವರವಾಗಿ ನನಗೆ ದಯಾಪಾಲಿಸಿದ್ದಕ್ಕೆ ಕಾಣದ ದೇವರಿಗೆ ಕೈ ಮುಗಿಯುವುದೋ.. ಅಥವಾ ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ನಿಗೆ ನಿನ್ನನ್ನ ಪಡೆದ ನಾನೇ ಪುಣ್ಯವಂತೆ ಎಂದು ಸಾಷ್ಟಾಂಗ ನಮಸ್ಕಾರಿಸುವುದೋ ನಾನ್‌ ಅರಿಯೆ..ಒಂದು ಮಾತ ಅಂತು ನಿಜ ಇಂತಹ ಅಮ್ಮನನ್ನ ಪಡೆದದ್ದು ನನ್ನ ಯಾವುದೋ ಜನ್ಮದ ಪುಣ್ಯವೇ ಸರಿ..

ಈಕೆಯ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದ್‌ ಅಂತು ಸತ್ಯ ನನ್ನ ಅಮ್ಮನಿಗೆ ಮಾತ್ರ ನನ್ನ ಜೀವನದ ದಿಕ್ಕನ್ನೇ ಬದಲಿಸಿರುವ ಮತ್ತು ಬದಲಿಸಲು ಸಾಮರ್ಥ್ಯ ಇರುವುದು ಎನ್ನುವುದು ನನ್ನ ಅನಿಸಿಕೆ.

-ಪ್ರಗತಿ ಎಸ್‌.

ಭಂಡಾರಕಾರ್ಸ್‌

ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.